ಮುಂಬೈ: ಮಗನ ಅಂಗವೈಕಲ್ಯವನ್ನು ಗುಣಪಡಿಸುತ್ತೇನೆ ಅಂತ 36 ವರ್ಷದ ಮಹಿಳೆಯ ಮೇಲೆ 60 ವರ್ಷದ ಸ್ವಯಂಘೋಷಿತ ದೇವಮಾನವ ಅತ್ಯಾಚಾರವೆಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಆರೋಪಿ ದೇವಮಾನವನನ್ನು ಮಾಟಮಂತ್ರ ಮಾಡುವ ಧನಂಜಯ್ ಗೋಹದ್ ಅಲಿಯಾಸ್ ನಾನಾ (60) ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆತನ ಸಹಚರ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ
ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತನ್ನ ಅಂಗವಿಕಲ ಮಗನಿಗೆ ಚಿಕಿತ್ಸೆ ಕೊಡಿಸಲು ಹುಡುಕಾಟ ನಡೆಸುತ್ತಿದ್ದ ವೇಳೆ 2021ರ ಜನವರಿಯಂದು ಮಹಿಳೆಗೆ ಆರೋಪಿಯ ಪರಿಚಯವಾಗಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ‘ಮಂತ್ರ ಮಾಂಗಲ್ಯ’ ಮದುವೆ ಮೂಲಕ ಮಾದರಿಯಾದ ನಿರ್ದೇಶಕ ಕೆ.ಎಂ. ರಘು
ಏಪ್ರಿಲ್ ತಿಂಗಳಿನಲ್ಲಿ ಧನಂಜಯ್ ಗೊಹಾದ್ ಋಣಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ನೆಪದಲ್ಲಿ ತನ್ನ ನಿವಾಸಕ್ಕೆ ಬಂದು ಬಟ್ಟೆ ಬಿಚ್ಚುವಂತೆ ಕೇಳಿಕೊಂಡನು. ನಂತರ ಗೋಹಾದ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ತನ್ನ ಪತಿ ಮತ್ತು ಸಹೋದರ ಅಪಘಾತದಲ್ಲಿ ಸಾಯುತ್ತಾರೆ. ಅಲ್ಲದೆ ಜನಿಸುವ ಎರಡನೇ ಮಗು ಅಂಗವಿಕಲತೆಯಿಂದ ಹುಟ್ಟುತ್ತದೆ ಎಂದು ಬೆದರಿಕೆಯೊಡ್ಡಿದ್ದಾನೆ. ಆರೋಪಿ ತನ್ನ ಮಗನನ್ನು ಗುಣಪಡಿಸಲು ಮಾಟಮಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.
ಮೇ 27 ರಂದು ಘಟನೆ ಸಂಬಂಧ ಮಹಿಳೆ ಹದಾಸ್ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಪ್ರಕರಣ ದಾಖಲಿಸಿದ್ದಾರೆ