Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಾಹುಬಲಿ ನಂತ್ರ ಸಾಹೋ ಒಪ್ಪಿಕೊಂಡ ಕಥೆ ವಿವರಿಸಿದ ಪ್ರಭಾಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಬಾಹುಬಲಿ ನಂತ್ರ ಸಾಹೋ ಒಪ್ಪಿಕೊಂಡ ಕಥೆ ವಿವರಿಸಿದ ಪ್ರಭಾಸ್

Cinema

ಬಾಹುಬಲಿ ನಂತ್ರ ಸಾಹೋ ಒಪ್ಪಿಕೊಂಡ ಕಥೆ ವಿವರಿಸಿದ ಪ್ರಭಾಸ್

Public TV
Last updated: August 24, 2019 8:46 pm
Public TV
Share
3 Min Read
prabhas copy
SHARE

ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ತಮ್ಮ ಮುಂಬರುವ ‘ಸಾಹೋ’ ಚಿತ್ರದ ಪ್ರಮೋಶನ್‍ಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಶುರು ಮಾಡಿದ ಅವರು, ನಿಮಗೆ ಸಾಹೋ ಟ್ರೈಲರ್ ಇಷ್ಟ ಆಗಿದೆ ಎಂದುಕೊಂಡಿದ್ದೇನೆ. ಕರ್ನಾಟಕದ ಜನತೆ ಬಾಹುಬಲಿ ಚಿತ್ರಕ್ಕೆ ತುಂಬಾ ಪ್ರೀತಿ ನೀಡಿದ್ದೀರಿ. ಅದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಈಗ ಸಾಹೋ ಚಿತ್ರ ಬಿಡುಗಡೆಗೆ ತಯಾರಾಗಿದೆ. ನಿಮಗೆ ಇಷ್ಟ ಆಗುತ್ತೆ ಎಂದುಕೊಂಡಿದ್ದೇನೆ ಎಂದು ಹೇಳಿದರು.

ಸಾಹೋ ಚಿತ್ರ ಕನ್ನಡದಲ್ಲಿ ಡಬ್ ಆಗುತ್ತಿಲ್ಲ. ಮುಂದಿನ ಎಲ್ಲ ಚಿತ್ರಗಳನ್ನು ಡಬ್ ಮಾಡುತ್ತೇವೆ. ಬಾಹುಬಲಿ ಚಿತ್ರವನ್ನು ತಮಿಳು ಹಾಗೂ ತೆಲುಗುವಿನಲ್ಲಿ ಡಬ್ ಮಾಡಿದ್ದೇವೆ. ಆದರೆ ಹಿಂದಿ ಭಾಷೆಯಲ್ಲಿ ಡಬ್ ಮಾಡುವಾಗ ಸ್ವಲ್ಪ ಕಷ್ಟವಾಗಿತ್ತು. ಇಷ್ಟು ದಿನ ಕನ್ನಡದಲ್ಲಿ ಡಬ್ಬಿಂಗ್‍ಗೆ ಅವಕಾಶ ಇರಲಿಲ್ಲ. ಈಗ ಕನ್ನಡದಲ್ಲಿ ಡಬ್ಬಿಂಗ್ ಶುರುವಾಗಿದೆ. ಮುಂದೆ ಎಲ್ಲ ಚಿತ್ರಗಳನ್ನು ಡಬ್ ಮಾಡುತ್ತೇವೆ ಎಂದರು.

actorprabhas 67472590 564227954114004 6845476745320686125 n

ಸಾಹೋ ಚಿತ್ರದ ಚಿತ್ರೀಕರಣ ಮುಗಿಸಲು ಒಂದೂವರೆಯಿಂದ ಎರಡು ವರ್ಷ ಬೇಕಾಯಿತು. ಮುಂಬೈ, ಹೈದರಾಬಾದ್, ಅಬುಧಾಬಿ, ಇಟಲಿ, ಆಸ್ಟ್ರೀಯಾ ದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಬಾಹುಬಲಿ ನಂತರ ನಾನು ಲವ್ ಸ್ಟೋರಿ ಮಾಡಬೇಕು ಎಂದು ಹೇಳಿದೆ. ಆದರೆ ನನಗ ಲವ್‍ಸ್ಟೋರಿ ಸ್ಕ್ರಿಪ್ಟ್ ಸಿಗಲಿಲ್ಲ. ಆಗ ನನಗೆ ಸಾಹೋ ಚಿತ್ರದ ಸ್ಕ್ರಿಪ್ಟ್ ಸಿಕ್ತು. ಬಾಹುಬಲಿ ನಂತರ ಮತ್ತೆ ಆ್ಯಕ್ಷನ್ ಸಿನಿಮಾ ಮಾಡುವುದು ಕಷ್ಟ ಆಗಿತ್ತು. ಸಾಕಷ್ಟು ತಯಾರಿ ಮಾಡಬೇಕಾಗಿತ್ತು. ಹಾಗಾಗಿ ಸಿನಿಮಾ ಸ್ವಲ್ಪ ತಡವಾಯಿತು ಎಂದರು.

Saaho Teaser A

ಸಂಸ್ಕೃತದಲ್ಲಿ ಸಾಹೋ ಎಂದರೆ ‘ಜೈಹೋ’ ಎಂದರ್ಥ. ಈ ಚಿತ್ರದ ಟೈಟಲ್ ಏಕೆ ಆಯ್ಕೆ ಮಾಡಿದ್ದೇವೆ ಎಂದು ತಿಳಿಯಲು ನೀವು ಸಿನಿಮಾವನ್ನು ನೋಡಬೇಕು. ‘ಚತ್ರಪತಿ’ ನಂತರ ನಾನು ‘ಡಾರ್ಲಿಂಗ್’ ಹಾಗೂ ‘ಮಿ. ಪರ್ಫೆಕ್ಟ್’ ಸಿನಿಮಾದಲ್ಲಿ ನಟಿಸಿದ್ದೆ. ಈ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಸದ್ಯ ಸಾಹೋ ಚಿತ್ರದ ನಂತರ ನಾನು ಲವ್ ಸ್ಟೋರಿ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದ ಚಿತ್ರೀಕರಣ ಕೂಡ ಈಗ ಶುರುವಾಗಿದೆ ಎಂದು ಹೇಳಿದರು.

Prabhas and Shraddha

ಬಾಹುಬಲಿ ಚಿತ್ರ ಇತಿಹಾಸ ನಿರ್ಮಿಸಿದೆ. ಬಾಹುಬಲಿ ಚಿತ್ರದಿಂದ ನಾನು ಇಡೀ ಭಾರತಕ್ಕೆ ಪರಿಚಯನಾಗಿದ್ದೇನೆ. ಬಾಹುಬಲಿ ಯಾವಾಗಲೂ ನನ್ನ ಫೆವರೆಟ್ ಚಿತ್ರ ಆಗಿರುತ್ತದೆ. ಸದ್ಯ ಸಾಹೋ ಚಿತ್ರದ ಒಂದು ಆ್ಯಕ್ಷನ್ ದೃಶ್ಯಕ್ಕೆ ನಿರ್ಮಾಪಕರು 75 ಕೋಟಿ ರೂ. ಖರ್ಚು ಮಾಡಿದ್ದಾರೆ. ಪ್ರಪಂಚದ ಬೆಸ್ಟ್ ತಜ್ಞರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಬಾಹುಬಲಿ ಚಿತ್ರದಲ್ಲಿ ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಮಾಂಸಾಹಾರ ತಿನ್ನ ಬೇಕಾಯಿತು. ಆದರೆ ಸಾಹೋ ಚಿತ್ರಕ್ಕೆ ತೂಕ ಇಳಿಸಿಕೊಳ್ಳಲು ನಾನು ಸಸ್ಯಹಾರಿ ಆಗಿದ್ದೆ. ನನ್ನಿಂದ ಹಲವು ಪ್ರಾಣಿಗಳ ಜೀವ ಉಳಿಯಿತು. ಚಿತ್ರದ ಪಾತ್ರಕ್ಕೆ ತಕ್ಕಂತೆ ನಾನು ದೇಹದ ತೂಕ ಬದಲಾಯಿಸಬೇಕು. 350 ಕೋಟಿ ರೂ. ಚಿತ್ರದಲ್ಲಿ ನಿರ್ಮಾಣವಾಗುತ್ತಿದ್ದರಿಂದ ಸಾಕಷ್ಟು ಪ್ಲಾನಿಂಗ್ ಇತ್ತು. ಈ ಚಿತ್ರಕ್ಕಾಗಿ ಶ್ರದ್ಧಾ ಕಪೂರ್ ಅವರು ಸಾಕಷ್ಟು ಸಮಯವನ್ನು ಕೊಟ್ಟಿದ್ದಾರೆ ಎಂದು ಹೇಳಿದರು.

saaho teaser

ನಾನು ಸಾಕಷ್ಟು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಇತ್ತೀಚೆಗೆ ನಾನು ಕೆಜಿಎಫ್ ಸಿನಿಮಾವನ್ನು ವೀಕ್ಷಿಸಿದೆ. ಈ ಚಿತ್ರ ತೆಲುಗುವಿನಲ್ಲೂ ಬಿಡುಗಡೆ ಆಗಿತ್ತು. ತೆಲುಗು ಅಭಿಮಾನಿಗಳು ಸೇರಿದಂತೆ ಭಾರತದ ಪ್ರೇಕ್ಷಕರು ಕೆಜಿಎಫ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಬಳಿಕ ಮಹಾಭಾರತದ ಚಿತ್ರದ ಬಗ್ಗೆ ಮಾತನಾಡಿದ ಅವರು, ಮಹಾಭಾರತದಲ್ಲಿ ನನಗೆ ಯಾವ ಪಾತ್ರ ಕೊಟ್ಟರು ನಾನು ಮಾಡುತ್ತೇನೆ. ಆದರೆ ಕರ್ಣ ಮತ್ತೆ ಅರ್ಜುನ ನನ್ನ ಇಷ್ಟವಾದ ಪಾತ್ರ ಎಂದು ಹೇಳಿದ್ದಾರೆ.

prabhas first look

ಎಲ್ಲಾ ರಾಜ್ಯದ ಸಿನಿಮಾಗಳು ಈಗ ಭಾರತಾದ್ಯಂತ ಬಿಡುಗಡೆ ಆಗುತ್ತಿದೆ. ಕೆಜಿಎಫ್ ಚಿತ್ರ ಭಾರತದಲ್ಲಿ ಸೂಪರ್ ಹಿಟ್ ಆಗಿದೆ. ಬಾಹುಬಲಿ ಕೂಡ ಹೆಸರು ಮಾಡಿದೆ. ಮುಂದೆ ಪಂಜಾಬ್ ಸೇರಿದಂತೆ ಬೇರೆ ರಾಜ್ಯದ ಸಿನಿಮಾಗಳು ಭಾರತಾದ್ಯಂತ ಸದ್ದು ಮಾಡಲಿದೆ. ಒಟ್ಟಿನಲ್ಲಿ ಒಂದೇ ಭಾರತ ಆಗಲಿದೆ. ಇದು ತುಂಬಾ ಸುಂದರವಾದ ವಿಷಯ ಎಂದು ಪ್ರಭಾಸ್ ತಿಳಿಸಿದರು.

ನಾವು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಿದ್ದೇವೆ. ನಿಮಗೆ ಆ್ಯಕ್ಷನ್ ಸಿನಿಮಾ ಇಷ್ಟವಾಗುತ್ತೆ ಎಂದುಕೊಂಡಿದ್ದೇನೆ. ಈ ಚಿತ್ರಕ್ಕಾಗಿ ನಾನು ಹಾಗೂ ಶ್ರದ್ಧಾ ಕಪೂರ್ ಟ್ರೈನಿಂಗ್ ಮಾಡಿದ್ದೇವೆ. ತಂತ್ರಜ್ಞರು, ಚಿತ್ರತಂಡ ಹಾಗೂ ನಿರ್ದೇಶಕರು ಈ ಸಿನಿಮಾಕ್ಕಾಗಿ ಹೆಚ್ಚು ಪ್ಲಾನಿಂಗ್ ಮಾಡಿಕೊಂಡಿದ್ದರು. ಹಾಲಿವುಡ್‍ನಿಂದ ನಾಲ್ಕೈದು ಮಂದಿ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ನಿಜವಾದ ಸ್ಟಂಟ್‍ಗಳನ್ನು ಮಾಡಲಾಗಿದೆ.

TAGGED:bengaluruprabhasPromotionPublic TVSaahoShradha Kapoortollywoodಟಾಲಿವುಡ್ಪಬ್ಲಿಕ್ ಟಿವಿಪ್ರಭಾಸ್ಪ್ರಮೋಶನ್ಬೆಂಗಳೂರುಶ್ರದ್ಧಾ ಕಪೂರ್ಸಾಹೋ
Share This Article
Facebook Whatsapp Whatsapp Telegram

Cinema news

Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories
Rajath Kishan
ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR
Bengaluru City Cinema Districts Karnataka Latest Sandalwood Top Stories
colors kannada New serial rani
ರಾಣಿ – ಅಮ್ಮ ಮಗಳ ಭಾವುಕ ಪಯಣ..!
Cinema Latest Sandalwood Top Stories
Vijay trisha
ಡಿವೋರ್ಸ್ ಕೇಸ್ ಮಧ್ಯೆ ಒಂದೇ ಬಣ್ಣದ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ
Cinema Latest National Top Stories

You Might Also Like

Public TV Nari Narayani Award 2026 Blind Cricketer Deepika
Bengaluru City

ಕ್ರಿಕೆಟ್‌ ಪಟು ದೀಪಿಕಾಗೆ ‘ನಾರಿ ನಾರಾಯಣಿ’ ಪ್ರಶಸ್ತಿ

Public TV
By Public TV
20 minutes ago
chain snatching in ramanagara three accused arrested
Crime

ಅಡ್ರೆಸ್ ಕೇಳುವ ನೆಪದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ – ಆರೋಪಿಗಳು ಅಂದರ್‌

Public TV
By Public TV
38 minutes ago
public tv nari narayani 2026 award
Bengaluru City

ಮಹಿಳಾ ದಿನಾಚರಣೆ: ಪಬ್ಲಿಕ್‌ ಟಿವಿಯಿಂದ ಸಾಧಕಿಯರಿಗೆ ‘ನಾರಿ ನಾರಾಯಣಿ’ ಪ್ರಶಸ್ತಿ ಪ್ರದಾನ

Public TV
By Public TV
42 minutes ago
Davanagere Fire
Davanagere

ಜಗಳೂರು | ತೋಟಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು – 1500ಕ್ಕೂ ಹೆಚ್ಚು ಅಡಿಕೆ ಗಿಡಗಳು ಸುಟ್ಟು ಕರಕಲು

Public TV
By Public TV
1 hour ago
car hits lorry three dead in kaggalipura
Crime

ರಾಮನಗರ | ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ – ಮೂವರು ದುರ್ಮರಣ, ಮತ್ತೋರ್ವನ ಸ್ಥಿತಿ ಗಂಭೀರ

Public TV
By Public TV
2 hours ago
Haveri Milk
Chikkaballapur

ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಗುಡ್ ನ್ಯೂಸ್ – ಲೀಟರ್ ಹಾಲಿಗೆ 50 ಪೈಸೆ ಹೆಚ್ಚಳ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?