ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಅವರು ರಾಜಕೀಯ ಮತ್ತು ಸಿನಿಮಾ ಕ್ಷೇತ್ರ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಚುನಾವಣೆ ಸಮೀಪಿಸುತ್ತಿದ್ದಂತೆ ‘ಹರಿಹರ ವೀರಮಲ್ಲು’ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ.
ಬಿಗ್ ಬಜೆಟ್ನಲ್ಲಿ ಮೂಡಿ ಬರುತ್ತಿರುವ ‘ಹರಿಹರ ವೀರಮಲ್ಲು’ ಸಿನಿಮಾಗೆ (Hari Hara Veera Mallu) ಕ್ರಿಶ್ ಜಾಗರ್ಲಮುಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೊಘಲ್ ಸಾಮ್ರಾಜ್ಯದ ಕಥೆಯನ್ನು ಆಧರಿಸಿ ಅದ್ಧೂರಿಯಾಗಿ ಸಿನಿಮಾ ಮಾಡಲಾಗುತ್ತಿದೆ. ಇದನ್ನೂ ಓದಿ:ಏಪ್ರಿಲ್ ಮೊದಲ ವಾರದಲ್ಲಿ ಬಹುನಿರೀಕ್ಷಿತ ‘ಮ್ಯಾಟ್ನಿ’
‘ಹರಿಹರ ವೀರಮಲ್ಲು’ ಚಿತ್ರ ಕೆಲ ತಿಂಗಳುಗಳ ಹಿಂದೆಯೇ ಶೂಟಿಂಗ್ ಶುರುವಾಗಿದೆ. ಚುನಾವಣೆಯ ಕಾರ್ಯದಲ್ಲಿ ಪವನ್ ಕಲ್ಯಾಣ್ ಬ್ಯುಸಿಯಾಗಿರೋದ್ರಿಂದ ಶೂಟಿಂಗ್ಗೆ ಬ್ರೇಕ್ ನೀಡಲಾಗಿದೆ. ಚಿತ್ರದ ಟಾಕಿ ಭಾಗದ ಶೂಟಿಂಗ್ ಸದ್ಯದಲ್ಲೇ ಮುಗಿಸಲು ಚಿತ್ರತಂಡ ಯೋಚಿಸಿದೆ. ಮುಂದಿನ ಸಂಕ್ರಾಂತಿಗೆ ಸಿನಿಮಾ ಬೆಳ್ಳಿತೆರೆಗೆ ತರಲು ಯೋಚಿಸಿದೆ.
ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ಬಾಬಿ ಡಿಯೋಲ್, ನಿಧಿ ಅಗರ್ವಾಲ್, ನೋರಾ ಸೇರಿದಂತೆ ಹಲವರು ನಟಿಸಿದ್ದಾರೆ. ಪವನ್ ನಟನೆಯ ಈ ಚಿತ್ರದ ಮೇಲೆ ಫ್ಯಾನ್ಸ್ಗೆ ಭಾರೀ ನಿರೀಕ್ಷೆಯಿದೆ.