ಚಿಕ್ಕಬಳ್ಳಾಪುರ: ಕೆಎಸ್ಆರ್ ಟಿಸಿ ಡಿಪೋದಲ್ಲಿ ಕೆಲಸ ಮಾಡುವ ಮೆಕಾನಿಕ್ ತನ್ನ ಫೇಸ್ಬುಕ್ ಖಾತೆಯಲ್ಲಿ ಪಾಕಿಸ್ತಾನ ಪರ ಪೋಸ್ಟ್ ಶೇರ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಮಹಮದ್ ಇರ್ಫಾನ್ ಪಾಕಿಸ್ತಾನ ಪರ ಪೋಸ್ಟ್ ಶೇರ್ ಮಾಡಿದ್ದ ಯುವಕ. ಈತ ಚಿಕ್ಕಬಳ್ಳಾಪುರ ಕೆಎಸ್ಆರ್ ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಮಹಮದ್ ಇರ್ಫಾನ್ ತನ್ನ ಫೇಸ್ಬುಕ್ ಖಾತೆಯಲ್ಲಿ ಪುಲ್ವಾಮಾ ದಾಳಿ ನಂತರ ಭಾರತೀಯ ಸೇನೆ ದಾಳಿ ನಡೆಸಿ ಕೊಂದಿದ್ದ ಉಗ್ರನ ಫೋಟೋವನ್ನ ಎಡಿಟ್ ಮಾಡಿ ತೋರಿಸಲಾಗಿದೆ ಎನ್ನುವ ಪೋಸ್ಟನ್ನ ಶೇರ್ ಮಾಡಿದ್ದನು.
- Advertisement 2
- Advertisement 3
ಕೆಎಸ್ಆರ್ ಟಿಸಿ ಸಿಬ್ಬಂದಿ ಈತನ ವರ್ತನೆಗೆ ಗಲಾಟೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ವಿಷಯ ಕೆಲ ಸ್ಥಳೀಯರಿಗೆ ಗೊತ್ತಾಗಿ ಡಿಪೋ ಬಳಿ ಹೋಗಿ ಯುವಕ ಮಹಮದ್ ಇರ್ಫಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಪೋಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
- Advertisement 4
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂದು ಯುವಕ ಇರ್ಫಾನ್ನನ್ನ ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv