ಕೇರಳ: ಕೇರಳ (Kerala) ರಾಜ್ಯದ ಬಾರ್ ಕೌನ್ಸಿಲ್ನ ಮೊದಲ ತೃತೀಯಲಿಂಗಿ (Transgender) ವಕೀಲರಾಗಿ (Lawyer) ಪದ್ಮಲಕ್ಷ್ಮಿ (Padma Lakshmi) ಅವರು ಆಯ್ಕೆಯಾಗಿದ್ದಾರೆ.
ಈ ವಿಚಾರವನ್ನು ರಾಜ್ಯದ ಕೈಗಾರಿಕಾ ಸಚಿವ ಪಿ.ರಾಜೀವ್ (P.Rajeev) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀವನದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಆಯ್ಕೆಯಾದ ಪದ್ಮಲಕ್ಷ್ಮಿಯವರಿಗೆ ಅಭಿನಂದನೆಗಳು. ಮೊದಲಿಗರಾಗುವುದು ಇತಿಹಾಸದಲ್ಲಿ ಕಠಿಣವಾಗಿದೆ. ಗುರಿಯ ಹಾದಿಯಲ್ಲಿ ಅಡೆತಡೆಗಳಿರುತ್ತದೆ. ಅಲ್ಲಿ ನಿರುತ್ಸಾಹಗೊಳಿಸುವ ಜನರು ತುಂಬಾ ಇರುತ್ತಾರೆ. ಆದರೆ ಪದ್ಮಲಕ್ಷ್ಮಿಯವರು ಇವೆಲ್ಲವನ್ನೂ ಮೀರಿ ಕಾನೂನು ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಇವರ ಜೀವನವು ಉಳಿದ ಮಂಗಳಮುಖಿಯರು ವಕೀಲ ವೃತ್ತಿಗೆ ಬರಲು ಸ್ಫೂರ್ತಿಯಾಗಲಿ ಎಂದು ಪಿ.ರಾಜೀವ್ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿರುವ ಶೇ.90 ರಷ್ಟು ಮುಸ್ಲಿಮರು ಮತಾಂತರ ಆದವ್ರು – ಬಿಹಾರ ಸಚಿವ
View this post on Instagram
ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council Of India), ಬಾರ್ ಎನ್ರೋಲ್ಮೆಂಟ್ (Bar Enrollment) ಪ್ರಮಾಣಪತ್ರವನ್ನು ಪಡೆದ 1,500ಕ್ಕೂ ಹೆಚ್ಚು ಕಾನೂನು ಪದವೀಧರರಲ್ಲಿ ಪದ್ಮಲಕ್ಷ್ಮಿಯವರು ಕೂಡಾ ಒಬ್ಬರು. ಇವರು ಎರ್ನಾಕುಲಂನ (Ernakulam) ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ. ಇದನ್ನೂ ಓದಿ: ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ಚಿಂತಿಸುತ್ತಿದ್ದೇವೆ- ಸಿಜೆಐ
ಭಾರತದ ಮೊದಲ ತೃತೀಯಲಿಂಗಿ ನ್ಯಾಯಾಧೀಶೆ (Judge) ಎಂಬ ಹೆಗ್ಗಳಿಕೆಗೆ ಜೋಯಿತಾ ಮೊಂಡಲ್ (Joyita Mondal) ಪಾತ್ರರಾಗಿದ್ದಾರೆ. ಇವರು 2017ರಲ್ಲಿ ಪಶ್ಚಿಮ ಬಂಗಾಳದ (West Bengal) ಇಸ್ಲಾಂಪುರದ ಲೋಕ ಅದಾಲತ್ನಲ್ಲಿ ನ್ಯಾಯಾಧೀಶೆಯಾಗಿ ನೇಮಕಗೊಂಡರು.
2018ರ ಆರಂಭದಲ್ಲಿ ಮಹಾರಾಷ್ಟ್ರದ (Maharashtra) ನಾಗಪುರದಲ್ಲಿ ನಡೆದ ಲೋಕ ಅದಾಲತ್ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ವಿದ್ಯಾ ಕಾಂಬ್ಳೆ ಅವರನ್ನು ಸದಸ್ಯ ನ್ಯಾಯಾಧೀಶರಾಗಿ ನೇಮಿಸಲಾಯಿತು. ಅದೇ ವರ್ಷ ಭಾರತದ ಮೂರನೇ ತೃತೀಯಲಿಂಗಿ ನ್ಯಾಯಾಧೀಶರಾಗಿ ಗುವಾಹಟಿಯ ಸ್ವಾತಿ ಬಿದಾನ್ ಅವರನ್ನು ನೇಮಕಗೊಳಿಸಲಾಯಿತು. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ