Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೇಶಕ್ಕಾಗಿ ಕುಟುಂಬದಿಂದ ದೂರವಿದ್ದೇವೆ: ನರ್ಸ್ ಸುಗಂಧ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Belgaum

ದೇಶಕ್ಕಾಗಿ ಕುಟುಂಬದಿಂದ ದೂರವಿದ್ದೇವೆ: ನರ್ಸ್ ಸುಗಂಧ

Public TV
Last updated: April 19, 2020 6:08 pm
Public TV
Share
2 Min Read
blg nurse mother 1
SHARE

– ಮಗಳನ್ನು ನೋಡಿದ ತಕ್ಷಣ ಕಷ್ಟ ಮರೆತುಹೋಯ್ತು
– ಕೊರೊನಾ ಮುಕ್ತ ಭಾರತಕ್ಕೆ ಪಣ
– ದಯವಿಟ್ಟು ಪರಿಸ್ಥಿತಿಯನ್ನು ಅರಿತು ಮನೆಯಲ್ಲಿರಿ

ಬೆಳಗಾವಿ: 21 ದಿನಗಳ ಬಳಿಕ ಮಗಳನ್ನು ಸೇರಿದ ನರ್ಸ್ ಸುಗಂಧ ಅವರು ಪಬ್ಲಿಕ್ ಟಿವಿ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಮಗಳನ್ನು ಬಿಟ್ಟಿರೋದು ಕಷ್ಟವಾಯ್ತು ಆದ್ರೆ ಕೊರೊನಾ ವಿರುದ್ಧ ಹೋರಾಡೋದು ನಮ್ಮ ಕರ್ತವ್ಯ, ದೇಶಕ್ಕಾಗಿ ಕುಟುಂಬದಿಂದ ವೈದ್ಯಕೀಯ ಸಿಬ್ಬಂದಿಯೆಲ್ಲಾ ದೂರವಿದ್ದೇವೆ ಎಂದು ಹೇಳಿದ್ದಾರೆ.

blg nurse mother 1 1

ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಗಂಧ ಅವರು, ಮಗಳನ್ನು ನೋಡಿದ ತಕ್ಷಣ ಪಟ್ಟ ಕಷ್ಟವೆಲ್ಲ ಮರೆತುಹೋಯ್ತು. ಕೊರೊನಾ ಡ್ಯೂಟಿಯಲ್ಲಿದ್ದಕ್ಕೆ ವೈದ್ಯರು ಹಾಗೂ ನರ್ಸ್‍ಗಳನ್ನು ಕ್ವಾರಂಟೈನಲ್ಲಿ ಇಟ್ಟಿದ್ದರು. ಈಗ ನಾವೆಲ್ಲಾ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಬಂದಿದ್ದೇವೆ. ಮನೆಯವರನ್ನು ನೋಡಿ ಖುಷಿಯಾಯ್ತು. ನನ್ನ ಮಗಳು ನನ್ನನ್ನು ಹೆಚ್ಚು ಹಚ್ಚಿಕೊಂಡಿದ್ದಾಳೆ. ಅವಳನ್ನು ಹೆಚ್ಚು ನಾನೇ ನೋಡಿಕೊಳ್ಳುತ್ತಿದ್ದೆ. ಇದೇ ಮೊದಲ ಬಾರಿಗೆ ನಾನು ಇಷ್ಟು ದಿನ ಅವಳನ್ನು ಬಿಟ್ಟು ದೂರ ಇದ್ದಿದ್ದು. ಅವಳು ಕೂಡ ನಾನಿಲ್ಲದೇ ಕಷ್ಟಪಟ್ಟಿದ್ದಾಳೆ. ನನ್ನಂತೆ ಸಾಕಷ್ಟು ಮಂದಿ ನರ್ಸಗಳಿಗೆ, ವೈದ್ಯಕೀಯ ಸಿಬ್ಬಂದಿಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಆದರೆ ನಾವೆಲ್ಲಾ ಕೊರೊನಾ ಮುಕ್ತ ಭಾರತವನ್ನು ಮಾಡಲು ಪಣತೊಟ್ಟಿದ್ದೇವೆ. ಮಕ್ಕಳಿದ್ದಾರೆ ಎಂದು ಕರ್ತವ್ಯ ಬಿಟ್ಟು ಮನೆಯಲಿದ್ದರೆ ನಾವು ವೈದ್ಯಕೀಯ ಸಿಬ್ಬಂದಿ ಆಗಿರೋದಕ್ಕೆ ಅರ್ಥವಿಲ್ಲ. ದೇಶಕ್ಕಾಗಿ ವೈದ್ಯಕೀಯ ಸಿಬ್ಬಂದಿ ಹೋರಾಡುತ್ತಿದ್ದೇವೆ ಎಂದು ತಮ್ಮ ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ಹೇಳಿದರು.

blg nurse daughter

ಕ್ವಾರಂಟೈನ್‍ನಲ್ಲಿದ್ದಾಗ ತುಂಬಾ ಕಷ್ಟವಾಗಿತ್ತು. ಅತ್ತ ಡ್ಯೂಟಿ ಕೂಡ ಮಾಡುವಂತಿರಲಿಲ್ಲ. ಇತ್ತ ಮನೆಗೂ ಹೋಗುವಂತಿರಲಿಲ್ಲ. ಮಗಳು, ಕುಟುಂಬದವರು ತುಂಬಾ ನೆನಪಾಗುತ್ತಿದ್ದರು. ಮಗಳು ನನಗೋಸ್ಕರ ಕಷ್ಟಪಡುತ್ತಿರೋದನ್ನು ತಿಳಿದು ಮನಸಲ್ಲೇ ತುಂಬಾ ದುಃಖವಾಗುತ್ತಿತ್ತು. 21 ದಿನಗಳು ಕಳೆದು ಮನೆಗೆ ಹೋಗಿ ಮಗಳನ್ನು ನೋಡಿದಾಗ ಮಾತನಾಡೋಕೆ ಆಗಲಿಲ್ಲ. ಅವಳನ್ನು ನೋಡಿದ ಖುಷಿಗೆ ಕಣ್ಣಿರು ಬಂದುಬಿಟ್ಟಿತು. ಅವಳನ್ನು ಎತ್ತಿಕೊಂಡು ಮುದ್ದಾಡಿದೆ ಎಂದು ಖುಷಿಯನ್ನು ಹಂಚಿಕೊಂಡರು.

blg nurse daughter 2

ದೇವರ ಕೃಪೆಯಿಂದ ಕ್ವಾರಂಟೈನಲ್ಲಿದ್ದ ಯಾವ ಸಿಬ್ಬಂದಿಗೂ ಸೋಂಕು ತಗುಲಿರಲಿಲ್ಲ. ಎಲ್ಲರಿಗೂ ತಪಾಸಣೆ ನಡೆಸಿ ವರದಿ ಬಂದ ಬಳಿಕವೇ ಎಲ್ಲರನ್ನು ಮನೆಗೆ ಕಳುಹಿಸಿದ್ದಾರೆ. ಮತ್ತೆ ಸೋಮವಾರದಿಂದ ನಾವು ಕರ್ತವ್ಯಕ್ಕೆ ತೆರೆಳಲಿದ್ದೇವೆ. ಸದ್ಯ ಜನರಲ್ ವಾರ್ಡಿಗೆ ಡ್ಯೂಟಿ ಹಾಕಿದ್ದಾರೆ. ರೊಟೆಷನಲ್ ಶಿಫ್ಟ್ ಹಾಕುತ್ತಿರುತ್ತಾರೆ. ಪದೇ ಪದೇ ಕೊರೊನಾ ವಾರ್ಡಿಗೆ ಡ್ಯೂಟಿ ಹಾಕಲ್ಲ. ಸಿಬ್ಬಂದಿ ಕಡಿಮೆ ಇದ್ದರೆ ಮಾತ್ರ ಹಾಕುತ್ತಾರೆ. ಆಗ ಮತ್ತೆ ನಮ್ಮನ್ನು ಕ್ವಾರಂಟೈನ್‍ನಲ್ಲಿ ಇಡುತ್ತಾರೆ ಎಂದು ಸುಗಂಧ ಅವರು ತಿಳಿಸಿದರು.

BLG Baby B

ವೈದ್ಯಕೀಯ ಸಿಬ್ಬಂದಿ, ಪೊಲೀಸರು ಕಷ್ಟಪಟ್ಟು ಕೊರೊನಾವನ್ನು ತಡೆಗಟ್ಟಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದವರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟೆಲ್ಲಾ ಮಾಡುತ್ತಿದ್ದರೂ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ದಯವಿಟ್ಟು ಪರಿಸ್ಥಿತಿ ಅರ್ಥ ಮಾಡಿಕೊಂಡು ಮನೆಯಲ್ಲಿಯೇ ಇರಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸರ್ಕಾರಿ ನಿಯಮವನ್ನು ಪಾಲಿಸಿ ಸೋಂಕಿನಿಂದ ದೂರವಿದ್ದು, ಸುರಕ್ಷಿತವಾಗಿರಿ ಎಂದು ಸುಗಂಧ ಅವರು ಮನವಿ ಮಾಡಿಕೊಂಡರು.

ಜನರು ಮಾಡುತ್ತಿರುವುದನ್ನು ನೋಡಿದರೆ ಸಿಟ್ಟು ಬರುತ್ತಿದೆ. ಪೊಲೀಸರು ಹೊಡೆಯುತ್ತಾರೆ ಎಂದು ಜನರು ದೂರುತ್ತಿದ್ದಾರೆ. ಇವರು ಹೊರಗೆ ಬಾರದೇ ಮನೆಯಲ್ಲಿದ್ದರೆ ಯಾರೂ ಅವರಿಗೆ ಹೊಡೆಯಲ್ಲ. ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ, ಸುಮ್ಮನೆ ಬಂದು ಸೋಂಕಿಗೆ ತುತ್ತಾಗಬೇಡಿ. ನಿಮಗಾಗಿ ನಾವು ಕಷ್ಟಪಡುತ್ತಿದ್ದೇವೆ, ನಮಗಾಗಿ ನೀವು ಮನೆಯಲ್ಲಿ ಇರಿ. ಪೊಲೀಸರಿಗೆ, ವೈದ್ಯಕೀಯ ವರ್ಗಕ್ಕೆ ಸಹಕರಿಸಿ. ಈ ಕೊರೊನಾವನ್ನು ಜೊತೆಗೂಡಿ ನಿರ್ಮೂಲನೆ ಮಾಡೋಣ ಎಂದು ನರ್ಸ್ ಸುನಂದಾ ಕರೆ ನೀಡಿದ್ದಾರೆ.

Share This Article
Facebook Whatsapp Whatsapp Telegram
Previous Article Salman Khan ಲಾಕ್‍ಡೌನ್‍ನಲ್ಲಿ ವಿದೇಶಿ ಗೆಳತಿಯ ಜೊತೆ ಫಾರ್ಮ್‍ಹೌಸ್‍ನಲ್ಲಿ ಸಲ್ಮಾನ್ ಖಾನ್
Next Article Madikeri Journalists 2 ಕೊಡಗಿನ ಬಡವರ ಕಷ್ಟಕ್ಕೆ ಮಾಧ್ಯಮ ‘ಸ್ಪಂದನ’

Latest Cinema News

Vishnuvardhan 3
ಡಾ.ವಿಷ್ಣುವರ್ಧನ್ 75ನೇ ಜನ್ಮದಿನ ಇಂದು – ಅಭಿಮಾನ್‌ ಸ್ಟುಡಿಯೋ ಬಳಿ 2 ಎಕರೆ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ
Cinema Latest Sandalwood Top Stories
disha patani
ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ
Bollywood Cinema Crime Latest Main Post National
Vedika
ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ
Cinema Latest Sandalwood Top Stories
Vishnuvardhan 4
ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ
Cinema Latest Sandalwood Top Stories
Darshan
ನಟ ದರ್ಶನ್‌ಗೆ ಹಾಸಿಗೆ, ದಿಂಬು – ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
Cinema Districts Latest Sandalwood Top Stories

You Might Also Like

Dharmasthala Chinnayya
Dakshina Kannada

ಧರ್ಮಸ್ಥಳ ಕೇಸ್ | ಇಂದು ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟ್‍ಗೆ ಹಾಜರುಪಡಿಸಲಿರುವ ಎಸ್‍ಐಟಿ

9 minutes ago
US Citizen Killed
Crime

75ರ ವೃದ್ಧನ ಮದುವೆಯಾಗಲು ಭಾರತಕ್ಕೆ ಬಂದಿದ್ದ ಅಮೆರಿಕದ 71ರ ವೃದ್ಧೆ ಕೊಲೆ

48 minutes ago
young man brutally murdered in Chikkodi
Belgaum

ಚಿಕ್ಕೋಡಿ | ಬಸ್ ಇಳಿಯುತ್ತಿದ್ದಂತೆ ಅಟ್ಯಾಕ್ – ಯುವಕನ ಕೊಚ್ಚಿ ಕೊಲೆ

2 hours ago
CRIME
Crime

ಹಾಸನ | ಅಪ್ರಾಪ್ತನಿಂದ ಮಹಿಳೆಯ ಬರ್ಬರ ಹತ್ಯೆ

2 hours ago
bengaluru rains 1
Bengaluru City

ಬೆಂಗಳೂರಲ್ಲಿ ಧಾರಾಕಾರ ಮಳೆ; ಹಲವೆಡೆ ಅವಾಂತರ – ರಸ್ತೆಗೆ ಉರುಳಿದ ಮರ, ವಿದ್ಯುತ್‌ ಕಂಬ

2 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?