ಬುರ್ಕಾ ಹಾಕ್ಕೊಂಡು ಓಡಾಡಿದ್ರೂ ಬಿಜೆಪಿಗೆ ಒಂದು ವೋಟು ಬರಲ್ಲ: ಮುತಾಲಿಕ್

Public TV
1 Min Read
pramod-mutalik bjp

ಮಂಡ್ಯ: ಬುರ್ಕಾ ಹಾಕ್ಕೊಂಡು ಹೋಡಾಡಿದ್ರೂ ಬಿಜೆಪಿಗೆ ಒಂದು ಮುಸ್ಲಿಂ ವೋಟು ಬರಲ್ಲ. ಹಾಗಿದ್ದರೂ ಯಾಕೆ ಮುಸ್ಲಿಮರ ಓಲೈಕೆ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಟೀಕಿಸಿದ್ದಾರೆ.

ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ಮುಸ್ಲಿಮರಿಗೆ ಹೆದರುತ್ತಿದ್ದಾರೆ. ನಿಮಗೆ ಆಗದಿದ್ರೆ ಹೇಳಿ ನಾವು ಮೈಕ್ ಬಂದ್ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೆಮ್ಮದಿ ಕೆಡಿಸಲು ಕೆಲ ಶಕ್ತಿಗಳು ರಾಜ್ಯದಲ್ಲಿ ಆಜಾನ್, ಸುಪ್ರಭಾತ ಸಂಘರ್ಷ ನಡೆಸಿವೆ: ಹೆಚ್‍ಡಿಡಿ

Pramod Muthalik (3)

ಇದೇ ವೇಳೆ `ಪಾಕಿಸ್ತಾನ ಜಿಂದಾಬಾದ್’ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಸ್ಲಾಂ ಅಜೆಂಡಾ ಅಲ್ಲಲ್ಲಿ ಹೊರಬರುತ್ತಿದೆ. ಮುಸ್ಲಿಮರ ಸೊಕ್ಕು, ನಿರ್ಲಕ್ಷ್ಯತನ, ದೇಶದ್ರೋಹಿತನ ಈ ರೀತಿ ಹೊರಬರುತ್ತಿದೆ. ಇವರ ವಿರುದ್ಧ ಸರಿಯಾದ ಕ್ರಮ ಆಗುತ್ತಿಲ್ಲ. ಹಾಗಾಗಿಯೇ ದೇಶದ್ರೋಹದ ಕ್ಯಾನ್ಸರ್ ಹರಡುತ್ತಿದೆ. ಈ ಕ್ಯಾನ್ಸರ್ ಬಿಜೆಪಿ ಸರ್ಕಾರ ಮಾತ್ರವಲ್ಲದೇ, ದೇಶವನ್ನೇ ನುಂಗಿಹಾಕುತ್ತದೆ. ಆದ್ದರಿಂದ ಅಂತಹವರನ್ನು ಒದ್ದು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್

Pramod Muthalik
ಸಾಂದರ್ಭಿಕ ಚಿತ್ರ

ಕವಲಂದೆ ಘಟನೆಗೆ ಸಂಬಂಧಿಸಿದಂತೆ ಮಾತನಾಡಿ, ಇಲ್ಲಿನ ಘಟನೆ ಹಿಂದೆ ಮೌಲ್ವಿ ಇದ್ದಾನೆ. ಅವನ ಪ್ರಚೋದನಕಾರಿ ಭಾಷಣದಿಂದಲೇ ಈ ರೀತಿ ಆಗಿದೆ. ತಪ್ಪಿತಸ್ಥರನ್ನು ಎನ್‌ಕೌಂಟರ್ ಮಾಡಿ ಬಿಸಾಕಿ. ಅವರನ್ನೇಕೆ ಸಾಕಿ ಸಲುಹುತ್ತೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಕವಲಂದೆ ಶೇ.60ರಷ್ಟು ಮುಸ್ಲಿಮರೇ ಇದ್ದಾರೆ. ಅಲ್ಲಿ ಯಾಕೆ ಪೊಲೀಸರು ವೀಡಿಯೋ ಮಾಡಿಲ್ಲ. ಹಿಂದೂಗಳ ಕಾರ್ಯಕ್ರಮ ಇದ್ದಾಗ ಕ್ಯಾಮೆರಾ ಹಿಡಿದು ಬರುತ್ತಾರೆ. ಅಲ್ಲಿ ಏಕೆ ವಿಡಿಯೋ ಮಾಡಲಿಲ್ಲ. ಇದು ಪೊಲೀಸರ ನಿರ್ಲಕ್ಷ್ಯ ಅಲ್ಲವೇ? ಈ ಕವಲಂದೆಯ ಮುಸ್ಲಿಮ ಮುಖಂಡ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *