ಕಾರಿನಲ್ಲಿ ಗೋಮಾಂಸ ಸಾಗಾಟ- ವ್ಯಕ್ತಿಯನ್ನು ಹೊಡೆದು ಕೊಂದ ಸಾರ್ವಜನಿಕರು

Public TV
1 Min Read
COW PHOTO

ಮುಂಬೈ: ಕಾರಿನಲ್ಲಿ ಗೋಮಾಂಸ (Beef) ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಇಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ನಾಸಿಕ್‍ Nasik Maharastra) ನಲ್ಲಿ ನಡೆದಿದೆ.

ನಸೀರ್ ಶೇಖ್ (Nasir Shaikh) ಹಾಗೂ ಆಫನ್ ಮಜೀದ್ ಆನ್ಸಾರಿ ( Afan Abdul Majeed Ansari) ತಮ್ಮ ಕಾರಿನಲ್ಲಿ ಮುಂಬೈ ಕಡೆ ಶನಿವಾರ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಸಿನ್ನರ್ ಘೋಟಿ ಹೆದ್ದಾರಿ ತಲುಪುವ ಸಂದರ್ಭದಲ್ಲಿ ಗುಂಪೊಂದು ಕಾರನ್ನು ಅಡ್ಡಗಟ್ಟಿದೆ. ಅಲ್ಲದೆ ಕಾರನ್ನು ಪರಿಶೀಲನೆ ನಡೆಸಿದೆ.

ಕಾರನ್ನು ಚೆಕ್ ಮಾಡಿದಾಗ ಅದರಲ್ಲಿ ಗೋಮಾಂಸ ಇರುವುದು ಬಯಲಾಗಿದೆ. ಕೂಡಲೇ ಸುಮಾರು 15 ಮಂದಿ ಸ್ಥಳದಲ್ಲಿ ಜಮಾಯಿಸಿ ಇಬ್ಬರಿಗೆ ರಾಡ್ ಹಾಗೂ ದೊಣ್ಣೆಗಳಿಂದ ಹೊಡೆದಿದ್ದಾರೆ. ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ದಂಪತಿ ಬಳಿ ದರೋಡೆಗೆ ಯತ್ನಿಸಿದವರೇ 100 ರೂ. ವಾಪಸ್ ನೀಡಿ ಜಾಗ ಖಾಲಿ ಮಾಡಿದ್ರು

ಇತ್ತ ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದರೂ ಇಬ್ಬರಲ್ಲಿ ಓರ್ವ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

Share This Article