ಮನ್ ಕಿ ಬಾತ್‍ನಲ್ಲಿ ಸೂಲಗಿತ್ತಿ ನರಸಮ್ಮರನ್ನು ನೆನೆದ ಪ್ರಧಾನಿ ಮೋದಿ

Public TV
1 Min Read
PM Modi Narasamma

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 51 ನೇ ಹಾಗೂ ವರ್ಷದ ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮಲ್ಲಿ ತುಮಕೂರು ಜಿಲ್ಲೆಯ ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ರವರ ಸಾಧನೆಯನ್ನು ನೆನೆದು, ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ 2018ರಲ್ಲಿ ದೇಶ ಸಾಧಿಸಿದ ವಿವಿಧ ಮೈಲಿಗಲ್ಲುಗಳನ್ನು ವಿವರಿಸಿದರು. ಜೊತೆಗೆ ದೇಶದ ಜನತೆಗೆ 2019ರ ಹೊಸ ವರ್ಷದ ಶುಭಶಯ ತಿಳಿಸಿದ್ದಾರೆ.

ದೇಶದಲ್ಲಿ ಪರಮಾಣು ಸಾಮಥ್ರ್ಯ ಹೆಚ್ಚಾಗಿದ್ದು, ಭೂ ಸೇವೆ, ಜಲಪಡೆ ಹಾಗೂ ವಾಯುಪಡೆಯಲ್ಲಿ ಹೋರಾಡುವ ನ್ಯೂಕ್ಲಿಯರ್ ಟ್ರಯಾಡ್ ಸಾಧನೆ ಈ ವರ್ಷ ಲಭಿಸಿದೆ. 2018ರಲ್ಲಿ ನಡೆದ ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚು ಪದಕಗಳನ್ನು ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಪಂಚದಲ್ಲೇ ಅತಿ ದೊಡ್ಡ ಆರೋಗ್ಯ ವಿಮೆ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ, ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ, ಸರ್ದಾರ್ ಪಟೇಲ್‍ರ ‘ಏಕತಾ ಪ್ರತಿಮೆ’ ಅನಾವರಣ ಸೇರಿದಂತೆ ಅನೇಕ ಬೆಳಗವಣಿಗೆಯನ್ನು 2018ರಲ್ಲಿ ಕಂಡಿದ್ದೇವೆ. ಇತ್ತ ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಪರಿಸರ ಪ್ರಶಸ್ತಿ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಗೆ ಭಾರತ ಪಾತ್ರವಾಗಿದೆ ಎಂದು ಹೇಳಿದರು.

ಇದು 2018ರ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮ. ಮತ್ತೆ 2019ರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭೇಟಿಯಾಗೋಣ ಎಂದು ತಿಳಿಸಿದ ಮೋದಿ, ದೇಶದ ಜನತೆಗೆ ಹೊಸ ವರ್ಷದ ಶುಭಶಯ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *