ಚಿತ್ರದುರ್ಗ: ಶೌಚಾಲಯದಲ್ಲಿ ವಾಸವಾಗಿದ್ದ ಕುಟುಂಬವನ್ನ ಏಕಾಏಕಿ ಹೊರ ಹಾಕಿ ನಗರಸಭೆ ಸಿಬ್ಬಂದಿ ವಿಕೃತಿ ಮೆರೆದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ನಗರದ ಕಾಮನಬಾವಿ ಬಡಾವಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಈ ಕುಟುಂಬ ವಾಸವಾಗಿತ್ತು. ಇವರಿಗೆ ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿಯೂ ಇದೆ. ಆದರೆ ಇಲ್ಲಿಯವರೆಗೂ ಮನೆಭಾಗ್ಯ ಮಾತ್ರ ಇವರಿಗೆ ಸಿಕ್ಕಿಲ್ಲ.
- Advertisement 2
- Advertisement 3
ಈ ಬಗ್ಗೆ ಪಬ್ಲಿಕ್ ಬೆಳಕು ಕಾರ್ಯಕ್ರಮಕ್ಕಾಗಿ ಚಿತ್ರೀಕರಣ ಮಾಡಿತ್ತು. ಈ ವಿಷಯದ ಬಗ್ಗೆ ನಗರಸಭೆ ಆಯುಕ್ತ ಚಂದ್ರಪ್ಪ ಅವರ ಗಮನ ಸೆಳೆದು ಸರ್ಕಾರದಿಂದ ಇವರಿಗೆ ಸೂರು ಒದಗಿಸಿಕೊಡುವ ಬಗ್ಗೆ ಮನವಿ ಮಾಡಿತ್ತು.
- Advertisement 4
ಇದ್ರಿಂದ ಅಸಮಾಧಾನಗೊಂಡ ಚಂದ್ರಪ್ಪ, ತಮ್ಮ ಸಿಬ್ಬಂದಿಯನ್ನ ಕಳುಹಿಸಿ ಕುಟುಂಬ ವಾಸವಾಗಿದ್ದ ಶೌಚಾಲಯದಿಂದ ಪಾತ್ರೆ ಸೇರಿದಂತೆ ಎಲ್ಲಾ ವಸ್ತುಗಳನ್ನ ಆಟೋದಲ್ಲಿ ತುಂಬಿಕೊಂಡು ನಗರಸಭೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದಾರೆ. ಈಗ ಕುಟುಂಬ ಬೀದಿಯಲ್ಲಿ ಇರುವಂತಾಗಿದೆ.