ಮತ್ತಿಬ್ಬರನ್ನು ಬಲಿ ಪಡೆದ ಮಂಗನ ಕಾಯಿಲೆ!

Public TV
1 Min Read
MONKEY

ಶಿವಮೊಗ್ಗ: ಮಹಾಮಾರಿ ಮಂಗನಜ್ವರಕ್ಕೆ ಜಿಲ್ಲೆಯಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ.

ಸಾಗರ ತಾಲೂಕು ಬಿಳಿಗಾರು ಗ್ರಾಮದ 49 ವರ್ಷದ ಭೀಮರಾಜ್ ಮಂಗನ ಜ್ವರದಿಂದ ಮೃತಪಟ್ಟ ವ್ಯಕ್ತಿ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಏಳು ಜನರು ಮಂಗನ ಜ್ವರಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಭೀಮ್‍ರಾಜ್ ಭಾನುವಾರ ರಾತ್ರಿ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

udp monkey fever 3

ಅರಳಗೋಡು ಗ್ರಾ.ಪಂ. ವ್ಯಾಪ್ತಿಯ ವಾಟೆಮಕ್ಕಿಯ 45 ವರ್ಷದ ಸವಿತಾ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಇದೂವರೆಗೂ ತೀರ್ಥಹಳ್ಳಿ ಹಾಗೂ ಸಾಗರ ತಾಲೂಕಿನಲ್ಲಿ ಇದ್ದ ಮಂಗನಜ್ವರ ಈಗ ಭದ್ರಾವತಿ ತಾಲೂಕಿಗೂ ಹರಡುವ ಭೀತಿ ಎದುರಾಗಿದೆ. ಭದ್ರಾವತಿ ತಾಲೂಕು ಸಂಕ್ಲಿಪುರದಲ್ಲಿ ಕಳೆದ ವಾರ ಒಂದು ಮಂಗ ಮೃತಪಟ್ಟಿತ್ತು. ಸೋಮವಾರ ಮತ್ತೊಂದು ಮಗ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ.

ಶಿವಮೊಗ್ಗ ಜಿಲ್ಲೆಯ ಗಡಿಭಾಗದ ತಾಲೂಕುಗಳಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಹಾಗೂ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲೂ ಮಂಗಗಳು ಸತ್ತು ಬಿದ್ದಿದ್ದು, ತೀವ್ರ ಆತಂಕ ಮೂಡಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *