– 9 ಜನರ ವಿಚಾರಣೆ; ಕದ್ದವರ ಬಗ್ಗೆ ಸುಳಿವೇ ಇಲ್ಲ!
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಮನೆಯಲ್ಲಿ 3 ಲಕ್ಷ ಹಣ ಕಳವಿನ ಪ್ರಕರಣ ಸಂಬಂಧ ಸಿಕೆ ಅಚ್ಚುಕಟ್ಟು ಪೊಲೀಸರು ಇಲ್ಲಿಯವರೆಗೆ 9 ಜನರ ವಿಚಾರಣೆ ನಡೆಸಿದ್ದಾರೆ. ಆದ್ರೆ ಪೊಲೀಸರಿಗೆ ಹಣ ಕಳವು ಯಾರು ಮಾಡಿರಬಹುದು ಅನ್ನೊ ಬಗ್ಗೆ ಒಂದೇ ಒಂದು ಸುಳಿವು ಕೂಡ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ನಿಜವಾಗಿಯೂ ಮನೆಯಲ್ಲಿ ಹಣ ಕಳುವಾಗಿದ್ಯಾ ಅನ್ನೋ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ ಅನ್ನೋದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ. ಇದನ್ನೂ ಓದಿ: ಸಹಿ ಫೋರ್ಜರಿ ಮಾಡಿ ಯೂಟ್ಯೂಬ್, ಒಟಿಟಿಗೆ ವಿಷ್ಣುವರ್ಧನ್ ಅಭಿನಯದ ಸಿನಿಮಾ ಹಂಚಿಕೆ – ನಿರ್ಮಾಪಕಿಯಿಂದ ದೂರು
ಹಾಗಾಗಿ 3 ಲಕ್ಷ ಹಣದ ಮೂಲದ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಹಣವನ್ನ ಯಾವ ಕಾರಣಕ್ಕೆ ಮನೆಯಲ್ಲಿ ಇಟ್ಕೊಂಡಿದ್ರಿ? ಆ ಹಣದ ಮೂಲ ಏನು ಅನ್ನೋದರ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ಮೂವರು ಕೆಲಸಗಾರರು, ಮ್ಯಾನೇಜರ್ ನಾಗರಾಜ್, ವಿಜಯಲಕ್ಷ್ಮಿ ಮತ್ತು ಅವರ ತಾಯಿ, ಮಗ ವಿನೀಶ್ ಮತ್ತವನ ಮೂವರ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ. ಇದನ್ನೂ ಓದಿ: ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು