ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ನೆರವೇರಿಸಿದ ಶಾಸಕ

Public TV
1 Min Read
smg mla son marriage copy

ಶಿವಮೊಗ್ಗ: ತೀರ್ಥಹಳ್ಳಿ ಶಾಸಕ, ಬಿಜೆಪಿ ಮುಖಂಡ ಅರಗ ಜ್ಞಾನೇಂದ್ರ ಸಾಮೂಹಿಕ ವಿವಾಹದಲ್ಲಿ ಪುತ್ರನ ಮದುವೆ ನೆರವೇರಿಸಿ ಎಲ್ಲರಿಗೂ ಮಾದರಿ ಆಗಿದ್ದಾರೆ.

ಜ್ಞಾನೇಂದ್ರ ಪುತ್ರ ಅಭಿನಂದನ್ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸಾಮೂಹಿಕ ವಿವಾಹ ನಡೆದಿದ್ದು, ನೂತನ ವಧು-ವರರಿಗೆ ಆಶೀರ್ವದಿಸಲು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿವೈ ರಾಘವೇಂದ್ರ ಭಾಗಿಯಾಗಿದ್ದರು.

smg mla son marriage 3

ಈ ವೇಳೆ ಊಟಕ್ಕೆ ಕುಳಿತವರ ಬಳಿ ಪ್ರತ್ಯೇಕವಾಗಿ ತೆರಳಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಕೈ ಮುಗಿದು ತೆರಳಿದ್ದಾರೆ. ಯಡಿಯೂರಪ್ಪ ಹಾಗೂ ರಾಘವೇಂದ್ರ ನೀತಿ ಸಂಹಿತೆ ಕಾರಣದಿಂದ ಯಾರೊಂದಿಗೆ, ಏನೂ ಮಾತಾಡದೆ ಕೈಮುಗಿದು ತೆರಳಿದ್ದಾರೆ. ಶಾಸಕ ಜ್ಞಾನೇಂದ್ರ ಮಗನಿಗೆ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಸುವ ಮೂಲಕ ಸರಳತೆ ಮೆರೆದಿದ್ದಾರೆ.

smg mla son marriage 2

ಸಾಮೂಹಿಕ ವಿವಾಹದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಾಸಕರಾದ ಕುಮಾರ್ ಬಂಗಾರಪ್ಪ, ಸಿ.ಟಿ.ರವಿ, ಹರತಾಳು ಹಾಲಪ್ಪ, ವಿಶೇಶ್ವರ ಹೆಗಡೆ ಕಾಗೇರಿ, ಬೆಳ್ಳಿ ಪ್ರಕಾಶ್, ಮಾಜಿ ಸಭಾಪತಿ ಡಿ.ಹೆಚ್ ಶಂಕರ್ ಮೂರ್ತಿ ಹಾಗೂ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *