ಜನಾರ್ದನ ಪೂಜಾರಿ ಪ್ಯಾಂಟ್ ಒಳಗೆ RSSನ ಚಡ್ಡಿ ಇದೆ: ಮಧು ಬಂಗಾರಪ್ಪ ಲೇವಡಿ

Public TV
1 Min Read
Madhu Bangarappa Poojary hegde

– ಬಿಜೆಪಿಯವರು ಅನಂತ್ ಕುಮಾರ್ ಹೆಗಡೆಗೆ ಗೋಮೂತ್ರದಿಂದ ಸ್ನಾನ ಮಾಡಿಸಲಿ

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ್ ಪೂಜಾರಿಯವರ ಪ್ಯಾಂಟ್ ಒಳಗೆ ಆರ್ ಎಸ್‍ಎಸ್ ಚಡ್ಡಿ ಹಾಕಿಕೊಳ್ಳುತ್ತಾರೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರಕಾಶ್ ರೈ ಭಾಗಿಯಾಗದ್ದ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಅವರು ಗೋ ಮೂತ್ರದಿಂದ ಶುದ್ಧಿ ಮಾಡುತ್ತಾರೆ. ಇಂದು ಅದೇ ಬಿಜೆಪಿಯವರು ಗೋ ಮೂತ್ರದಿಂದ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಅವರಿಗೆ ಸ್ನಾನ ಮಾಡಿಸಿ ಎಂದು ಮಧು ಬಂಗಾರಪ್ಪ ಸಲಹೆ ನೀಡಿದ್ರು. ಇದನ್ನೂ ಓದಿ: ಪ್ರಕಾಶ್ ರೈ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಶುದ್ಧಗೊಳಿಸಿದ ಬಿಜೆಪಿ

vlcsnap 2018 02 09 19h51m31s912

ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ತನ್ನ ಆತ್ಮಕಥೆ ಬಿಡುಗಡೆಯಂದು ಕಲ್ಲಡ್ಕ ಪ್ರಭಾಕರ್ ಭಟ್‍ರನ್ನು ಕರೆಸಿಕೊಂಡಿದ್ದಾರೆ. ಕರಾವಳಿಯ ಗಲಭೆಗಳಿಗೆ ಕಾರಣಕರ್ತರಾದ ಭಟ್ ಜೊತೆಗೆನೇ ಪೂಜಾರಿ ಕೈ ಜೋಡಿಸಿರೋದು ಅವರ ಚಾಳಿಯನ್ನು ತೋರಿಸುತ್ತದೆ. ಪೂಜಾರಿಯ ಅಂತಹ ನಾಯಕರಿಂದ ಕರಾವಳಿಯಲ್ಲಿ ಗಲಾಟೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಇದನ್ನೂ ಓದಿ: ಪೂಜಾರಿ ಆತ್ಮಕತೆ ಸುಳ್ಳಿನಕಂತೆ, ಬಂಗಾರಪ್ಪ ಇಂದಿರಾಗಾಂಧಿಗೆ ಹೊಡೆಯಲು ಯತ್ನಿಸಿದ್ದು ಸುಳ್ಳು: ಮಧು ಬಂಗಾರಪ್ಪ

ಜನಾರ್ದನ ಪೂಜಾರಿ ವಯಸ್ಸಿಗೆ ಗೌರವ ಹೊರತು ವ್ಯಕ್ತಿಗೆ ಕೊಡಲ್ಲ. ಜನಾರ್ದನ ಪೂಜಾರಿಯವರದ್ದು ಆತ್ಮಚರಿತ್ರೆ ಅಲ್ಲ, ಅದು ಪೂಜಾರಿಯ ಪಾಪದ ಕೊಡವಾಗಿದೆ. ಬಂಗಾರಪ್ಪನವರು ಇಂದಿರಾಗಾಂಧಿ ಗೆ ಹೊಡೆದಿದ್ದಾರೆ ಎಂದು ಪೂಜಾರಿ ಸುಳ್ಳನ್ನು ಹೇಳಿದ್ದಾರೆ. ಇಂತಹ ಸುಳ್ಳಿನ ಆತ್ಮಕಥೆಯನ್ನು ಯಾರೂ ಓದಬೇಡಿ ಎಂದು ಹೇಳಿದ್ದಾರೆ.

madhu poojary

madu hegde

Share This Article
Leave a Comment

Leave a Reply

Your email address will not be published. Required fields are marked *