– ʻಪವರ್ ಶೇರಿಂಗ್ʼ ಹೈಕಮಾಂಡ್ ತೀರ್ಮಾನ ಮಾಡಬೇಕು
ರಾಮನಗರ: ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.
ಅಬಕಾರಿ ಇಲಾಖೆ (Excise Department) ಸಚಿವರ ರಾಜೀನಾಮೆಗೆ ವಿಪಕ್ಷಗಳ ಆಗ್ರಹ ಮಾಡ್ತಿರೋ ವಿಚಾರ ಕುರಿತು ಬಿಡದಿಯ ರಾಮನಹಳ್ಳಿ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದರು. ಅಬಕಾರಿ ಇಲಾಖೆ ನಿರ್ವಹಿಸಿದ ಎಲ್ಲಾ ಸಚಿವರ ಮೇಲೂ ಇಂತಹ ಆರೋಪ ಇದ್ದದ್ದೇ. ಆದರೆ ಇಲ್ಲಿಯವರೆಗೂ ಯಾವ ಸಚಿವರೂ ರಾಜೀನಾಮೆ ಕೊಟ್ಟ ಉದಾಹರಣೆ ಇಲ್ಲ. ಬಿಜೆಪಿಯವರು ನಮ್ಮ ಒಂದು ವಿಕೇಟ್ ಉರುಳಿಸಬೇಕು ಅಂತ ಕಸರತ್ತು ಮಾಡ್ತಿದ್ದಾರೆ ಎಂದರು. ಇದನ್ನೂ ಓದಿ: ಕೇರಳದ ಮೆಡಿಕಲ್ ಕಾಲೇಜು ಬಳಿ ಸ್ಫೋಟಕ ತುಂಬಿದ 100 ಕ್ಕೂ ಹೆಚ್ಚು ಬಾಕ್ಸ್ ವಶಕ್ಕೆ – ಬೆಚ್ಚಿಬಿದ್ದ ಜನ
ಸೂಕ್ತ ದಾಖಲೆ ಇಲ್ಲದೇ ವಿಪಕ್ಷಗಳು ಆರೋಪ ಮಾಡ್ತಿವೆ. ಯಾರೋ ಮಾತನಾಡಿದ ಆಡಿಯೋ ಇಟ್ಕೊಂಡು ರಾಜಿನಾಮೆ ಕೇಳಿದ್ರೆ ಆಗುತ್ತಾ? ಸೂಕ್ತವಾದ ಆಧಾರ, ಮಾಹಿತಿ ಇಲ್ಲದೇ ರಾಜಿನಾಮೆ ಕೊಡುವ ಅವಶ್ಯಕತೆ ಇಲ್ಲ. ಅದಕ್ಕೆ ಸದನದಲ್ಲೇ ಅಬಕಾರಿ ಸಚಿವರು ಸೂಕ್ತ ಉತ್ತರ ಕೊಟ್ಟಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು. ಇದನ್ನೂ ಓದಿ: ಒತ್ತಡಗಳಿಗೆ ಬಗ್ಗಲ್ಲ, ಟ್ರಂಪ್ ಅಧಿಕಾರಾವಧಿ ಮುಗಿಯವರೆಗೂ ಭಾರತ ಕಾಯುತ್ತೆ: ಅಮೆರಿಕದ ಮುಂದೆ ದೋವಲ್ ಖಡಕ್ ಮಾತು
ಇನ್ನೂ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ಮಾತನಾಡಿ, ಸದ್ಯ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ಏನೋ ಹೈಕಮಾಂಡ್ ಇಬ್ಬರನ್ನ ಕರೆಸುತ್ತೇವೆ ಎಂದಿದ್ದಾರೆ. ಏನಾಗುತ್ತೋ ನೋಡೊಣ ಎಂದ ಅವರು, ಕನಕೋತ್ಸವದ ಹೆಸರಲ್ಲಿ ಡಿಸಿಎಂ ಡಿಕೆಶಿ ಶಕ್ತಿ ಪ್ರದರ್ಶನ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನ ಯಾಕೆ ಶಕ್ತಿ ಪ್ರದರ್ಶನ ಅಂತಿರಾ? ಡಿಕೆಶಿ ಮೇಲೆ ವಿಶ್ವಾಸ ಇರುವ ಶಾಸಕರು ಕಾರ್ಯಕ್ರಮಕ್ಕೆ ಬಂದಿದ್ರು. ಕನಕೋತ್ಸವಕ್ಕೆ ಎಲ್ಲಾ ಶಾಸಕರನ್ನೂ ಆಹ್ವಾನ ಮಾಡಲಾಗಿತ್ತು. ಕೆಲವರು ಕೆಲಸದ ಒತ್ತಡದಲ್ಲಿ ಬಂದಿಲ್ಲ, ಇನ್ನೂ ಹಲವರು ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಇದರಲ್ಲಿ ಯಾವ ಶಕ್ತಿಪ್ರದರ್ಶನವೂ ಇಲ್ಲ. ಡಿಕೆಶಿ ಇಡೀ ರಾಜ್ಯಕ್ಕೆ ಡಿಸಿಎಂ, ಅವರ ಆಹ್ವಾನಕ್ಕೆ ಶಾಸಕರು ಬಂದು ಗೌರವ ಕೊಟ್ಟಿದ್ದಾರೆ. ಬದಲಾವಣೆ ಬಗ್ಗೆ ಹೈಕಮಾಂಡ್ ನೇ ಕೇಳಬೇಕು. ನಾನು ಸಿಎಂ, ಡಿಸಿಎಂ ಇಬ್ಬರ ಜೊತೆಯಲ್ಲೂ ಚೆನ್ನಾಗಿದ್ದೇನೆ ಎಂದರು.
ಡಿಕೆಶಿ ನಮ್ಮ ಜಿಲ್ಲೆಯವರು, ಅವರು ಸಿಎಂ ಆಗಬೇಕು ಅಂತ ಅಭಿಪ್ರಾಯ ಇದೆ. ಆದ್ರೆ ಯಾವಾಗ ಆಗಬೇಕು ಅನ್ನೋದು ಹೈಕಮಾಂಡ್ ತೀರ್ಮಾನ. ಡಿಕೆಶಿ ಕೂಡಾ ಕಷ್ಟಪಟ್ಟಿದ್ದಾರೆ, ದುಡಿದ್ದಿದ್ದಾರೆ. ಹಾಗಾಗಿ ಹಳೇ ಮೈಸೂರು ಭಾಗದವರ ಒತ್ತಡ ಹೆಚ್ಚಾಗಿದೆ. ಅದನ್ನ ಹೈಮಾಂಡ್ ಬಗೆಹರಿಸಬೇಕು, ಬಗೆಹರಿಸಲಿಲ್ಲ ಅಂದ್ರೆ ಕಷ್ಟ ಆಗುತ್ತೆ ಎಂದು ಶಾಸಕ ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ʻಪವರ್ ಶೇರಿಂಗ್ʼ ಹೈಕಮಾಂಡ್ ತೀರ್ಮಾನ ಮಾಡಬೇಕು
ರಾಜ್ಯ ಕಾಂಗ್ರೆಸ್ನ ಪವರ್ ಶೇರಿಂಗ್ ವಿಚಾರದಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಸ್ಪಷ್ಟವಾದ ತೀರ್ಮಾನ ಮಾಡಬೇಕು ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು. ಇದನ್ನೂ ಓದಿ: ಅಬುದಾಬಿಯ ಲಕ್ಕಿ ಡ್ರಾ- ಉಡುಪಿಯ ಯುವಕನಿಗೆ 49 ಕೋಟಿ ರೂ. ಬಹುಮಾನ
ಅಧಿವೇಶನ ಮುಗಿದ ಮೇಲೆ ಸಿಎಂ ಡಿಸಿಎಂ ರನ್ನ ಕರೆದು ಹೈಕಮಾಂಡ್ ನಾಯಕರು ಮಾತನಾಡಬಹುದು ಅಂತ ನಾವು ಅಂದುಕೊಂಡಿದ್ದೇವೆ. ಕರೆದು ಮಾತನಾಡಬಹುದು ಅನ್ನೋದು ನಮಗೂ ಇರುವ ಮಾಹಿತಿ ನಾನು ವಿದೇಶ ಪ್ರವಾಸಕ್ಕೂ ಹೋಗುತ್ತಿಲ್ಲ ರೆಸಾರ್ಟ್ಗೂ ಹೋಗುತ್ತಿಲ್ಲ ನಾನು ಕ್ಷೇತ್ರದ ಜನರ ಜೊತೆ ಇರುತ್ತೇನೆ. ಡಿಸಿಎಂ ಅವರು ನಮಗೆ ಯಾವುದೇ ವಿಚಾರ ಹೇಳಿಲ್ಲ ಯಾವುದೆ ಚರ್ಚೆ ಮಾಡಿಲ್ಲ ಸಚಿವ ವೆಂಕಟೇಶ ನೇತೃತ್ವದಲ್ಲಿ 20-25 ಶಾಸಕರು ಅಧ್ಯಯನ ಪ್ರವಾಸಕ್ಕೆ ಹೋಗ್ತಿದಾರೆ ಅಂತ ಗೊತ್ತಾಯ್ತು ಈಗಿರುವ ಗೊಂದಲವನ್ನು ಆದಷ್ಟು ಬೇಗ ಹೈ ಕಮಾಂಡ್ ಬಗೆಹರಿಸಬೇಕು. ಇಲ್ಲದಿದ್ದರೆ ಪಕ್ಷ ಹಾಳಾಗುತ್ತದೆ. ಹೈಕಮಾಂಡ್ ನಾಯಕರು ಆದಷ್ಟು ಬೇಗ ಗೊಂದಲ ಬಗೆಹರಿಸಬೇಕು ನನ್ನನ್ನ ಕೇಳಿದರೆ ನಾನು ಖಂಡಿತ ಮಾತನಾಡುತ್ತೇನೆ ಎಂದು ತಿಳಿಸಿದರು.


