ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

Public TV
1 Min Read
Dead Bodies
ಸಾಂದರ್ಭಿಕ ಚಿತ್ರ

ನವದೆಹಲಿ: 30 ವರ್ಷದ ವ್ಯಕ್ತಿಯನ್ನ ಢಾಬಾದ ಮೂವರು ಸಿಬ್ಬಂದಿ ಸೇರಿ ಕೊಲೆ ಮಾಡಿರೋ ಘಟನೆ ದೆಹಲಿಯ ಪ್ರೀತ್ ವಿಹಾರ್‍ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಪವನ್ ಅವರು ಮಂಡಾವ್ಲಿಯಲ್ಲಿ ತನ್ನದೇ ಸ್ವಂತ ಉಪಹಾರಗೃಹವನ್ನ ಹೊಂದಿದ್ದಾರೆ. ಅವರು ಭಾನುವಾರ ಸಂಜೆ ಕಮಲ್ ಢಾಬಾಗೆ ಊಟಕ್ಕೆಂದು ಹೋಗಿದ್ದು, ಅಲ್ಲಿ ನೀಡಲಾಗಿದ್ದ ಆಹಾರದ ಗುಣಮಟ್ಟದ ಬಗ್ಗೆ ಸಿಬ್ಬಂದಿಗೆ ದೂರಿದ್ದರು. ಇದರಿಂದ ಕೋಪಗೊಂಡ ಢಾಬಾ ಸಿಬ್ಬಂದಿ ಪವನ್ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಢಾಬಾ ಮಾಲೀಕ ಹಾಗೂ ಮತ್ತೋರ್ವ ನೌಕರ ಸೇರಿ ಭಾರವಾದ ಪಾತ್ರೆಗಳಿಂದ ಪವನ್ ಮೇಲೆ ಹಲ್ಲೆ ಮಾಡಿದ್ದಾರೆ.

police

ಪವನ್ ಅವರ ತಲೆ, ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹಲವು ಬಾರಿ ಹೊಡೆಯಲಾಗಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದರು ಎಂದು ವರದಿಯಾಗಿದೆ.

ಸ್ಥಳೀಯರೊಬ್ಬರು ಕರೆ ಮಾಡಿ ವಿಷಯ ತಿಳಿಸಿದ ಬಳಿಕ ನಾವು ಸ್ಥಳಕ್ಕೆ ಹೋದೆವು. ಬಳಿಕ ಪವನ್ ಅವರನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೇ ಭಾನುವಾರ ರಾತ್ರಿ ಪವನ್ ಸಾವನ್ನಪ್ಪಿದ್ರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

delhi police 1

ಢಾಬಾ ಸಿಬ್ಬಂದಿಯಾದ ಸಚಿನ್, ಗೋವಿಂದ್ ಹಾಗೂ ಕರಣ್ ಎಂಬ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ಹಾಗೂ 302(ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *