ಬೆಂಗಳೂರು: ಬಿಜೆಪಿಯವರು ಸಿಎಂ ಮತ್ತು ಡಿಸಿಎಂ ಅವರ ರಾಜೀನಾಮೆ ಕೇಳೋದು ಬಾಯಿ ಪಾಠ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ (Laxman Savadi) ವಾಗ್ದಾಳಿ ನಡೆಸಿದ್ದಾರೆ.
ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣದಲ್ಲಿ ಸಿಎಂ, ಡಿಸಿಎಂ ರಾಜೀನಾಮೆಗೆ ವಿಪಕ್ಷಗಳಿಂದ ಒತ್ತಾಯ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ರಾಜೀನಾಮೆ ಬಿಟ್ಟು ಬೇರೆ ಏನು ಕೇಳಿಲ್ಲ. ಆಕ್ಸಿಡೆಂಟ್ ಆಗಲಿ ಏನೇ ಆಗಲಿ ರಾಜೀನಾಮೆ ಕೇಳ್ತಾರೆ. ಅವರು ವಿರೋಧ ಪಕ್ಷದವರಾಗಿ ಕೆಲಸ ಮಾಡ್ತಿಲ್ಲ.ಪ್ರತಿ ಪಕ್ಷ ಎಂದರೆ ಯಾವುದೇ ಸರಿ, ತಪ್ಪು ಅಂತ ವಿವೇಚನೆ ಇಟ್ಟುಕೊಂಡು ಮಾತಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲ, ಸಚಿವ ಸ್ಥಾನ ಕೊಟ್ರೆ ನಿಭಾಯಿಸುತ್ತೇನೆ: ಲಕ್ಷ್ಮಣ್ ಸವದಿ
ಇವ್ರು ಎಲ್ಲದ್ದಕ್ಕೂ ವಿರೋಧ ಮಾಡ್ತಾರೆ. ನಾವು ಪೂರ್ವ ಅಂದರೆ ಅವರು ಪಶ್ಚಿಮ ಅಂತಾರೆ. ನಾವು ದಕ್ಷಿಣ ಅಂದರೆ ಅವರು ಉತ್ತರ ಅಂತಾರೆ. ಪ್ರತಿಯೊಂದಕ್ಕೂ ವಿರೋಧ ಮಾಡೋ ಸ್ಥಿತಿ ಬಂದಿದೆ. ಸಿಎಂ, ಡಿಸಿಎಂ ರಾಜೀನಾಮೆ ಕೇಳೋದು ರೂಢಿ ಆಗಿದೆ. ಬಾಯಿ ಪಾಠ ಮಾಡಿಕೊಂಡಿದ್ದಾರೆ. ಮಕ್ಕಳು ಕಂಠಪಾಠ ಮಾಡಿದ ರೀತಿ ರಾಜೀನಾಮೆ ಕೊಡಿ ಅಂತಿದ್ದಾರೆ. ರಾತ್ರಿ ಮಲಗೋವಾಗಲೂ ರಾಜೀನಾಮೆ ಕೊಡಿ ಬಡಬಡಾಯಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾಗೆ ದೇವರೇ ದಿಕ್ಕು – ರವೀನಾ ಟಂಡನ್
ಲೋಪ ಅಗಿಲ್ಲ ಅಂತ ನಾವು ಹೇಳಿಲ್ಲ. ಅಚಾತುರ್ಯವಾಗಿ ಘಟನೆ ಆಗಿದೆ. ಅಷ್ಟು ಜನ ಸೇರ್ತಾರೆ ಎಂದು ಯಾರೂ ಊಹೆ ಮಾಡಿರಲಿಲ್ಲ. ನಾವು ಸಮಾವೇಶ ಮಾಡೋವಾಗ ಎಷ್ಟು ಕಷ್ಟ ಇರುತ್ತೆ. ಇದು 18 ವರ್ಷ ಆದ ಮೇಲೆ ಗೆದ್ದಿರೋದು. ಹೀಗಾಗಿ ಸಂಭ್ರಮ ಮಾಡೋಣ ಅಂತ ಜನರ ಮನಸ್ಸಿಗೆ ಬಂದಿದೆ. ಏಕಕಾಲಕ್ಕೆ ಅಷ್ಟು ಜನ ಬಂದಿದ್ದರು. ಇದೊಂದು ಆಕಸ್ಮಿಕ ದುರ್ಘಟನೆ. ಇದನ್ನ ಸಮರ್ಥ ಮಾಡಿಕೊಳ್ಳಲ್ಲ. ಇದಕ್ಕೆ ರಾಜೀನಾಮೆ ಕೇಳೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಾತಿಗಣತಿ ಲೋಪ ಸರಿ ಮಾಡಲು ಹೊಸ ಜಾತಿಗಣತಿ: ಲಕ್ಷ್ಮಣ್ ಸವದಿ
ವೀರಪ್ಪ ಮೊಯ್ಲಿ (Virappa Moily) ಏನು ಪತ್ರ ಬರೆದಿದ್ದಾರೆ ಗೊತ್ತಿಲ್ಲ. ಓಡೋವಾಗ ಬೀಳೋದು ಸಹಜ. ಈಗ ಸಿಎಂ ಅವರು ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಘಟನೆ ಬಗ್ಗೆ ವಿಷಾದ ಇದೆ. ಮುಂಜಾಗ್ರತಾ ತೆಗೆದುಕೊಳ್ಳೋದ್ರಲ್ಲಿ ಲೋಪ ಆಗಿದೆ. ಆ ಲೋಪ ಆಗಿರೋದಕ್ಕೆ ಸಿಎಂ, ಡಿಸಿಎಂ ರಾಜೀನಾಮೆ ಕೇಳೋದು ಸರಿಯಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತಮ ಆಡಳಿತ ನೀಡ್ಬೇಕಾದ್ರೆ ಜನಗಣತಿ ಆಗ್ಬೇಕು, ಬಿಜೆಪಿ ಸಮೀಕ್ಷೆಯೇ ಮಾಡಿಲ್ಲ: ಹೆಚ್.ಸಿ ಮಹದೇವಪ್ಪ
ವಿಮಾನ ದುರಂತಕ್ಕೆ ಪ್ರಧಾನಿಯವರ ರಾಜೀನಾಮೆ ಕೇಳೋಕಾಗುತ್ತಾ?
ಗುಜರಾತ್ನಲ್ಲಿ ವಿಮಾನ ಅಪಘಾತ ಆಯ್ತು. 300 ಜನ ಸತ್ರು, ಪ್ರಧಾನಿಗಳ ರಾಜೀನಾಮೆ ಕೇಳಬಹುದಾ ನಾವು. ನಿಮ್ಮ ರಾಜ್ಯದಲ್ಲಿ ಘಟನೆ ಆಗಿದೆ. ಯಾಕೆ ಮೋದಿ ರಾಜೀನಾಮೆ ಕೊಡಲಿಲ್ಲ ಅಂತ ಕೇಳೋಕೆ ಆಗುತ್ತಾ? ನಾವೇನು ಪ್ರಧಾನಿಗಳ ರಾಜೀನಾಮೆ ಕೇಳಿದ್ದೀವಾ? ಇದನ್ನ ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.