ಕೋಲಾರ: ಶಾಸಕ ವರ್ತೂರ್ ಪ್ರಕಾಶ್ ಅವರನ್ನು ಚಲುವನಹಳ್ಳಿ ಗ್ರಾಮದ ಮಹಿಳೆಯರು ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕರು ಇಂದು ಚಲುವನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲ ಮಹಿಳೆಯರು ಸೇರಿ ರಸ್ತೆ ಮಧ್ಯೆ ಶಾಸಕರನ್ನು ತಡೆದು ವಾಗ್ದಾಳಿ ನಡೆಸಿದ್ದಾರೆ.
ಇಷ್ಟು ದಿನದಿಂದ ಏನು ಮಾಡಿದ್ದೀರಿ? ನಮ್ಮ ಊರಿಗೆ 2 ತಿಂಗಳಿನಿಂದ ನೀರಿಗಾಗಿ ಪರದಾಡಿದ್ದರೂ ಕ್ಯಾರೇ ಎಂದಿಲ್ಲ. ನೀರು ಕೊಡಲಿಲ್ಲ ಎಂದು ವರ್ತೂರ್ ಪ್ರಕಾಶ್ನ ಅಡ್ಡಗಟ್ಟಿ ಮಹಿಳೆಯರು ದಬಾಯಿಸಿದ್ದಾರೆ.
ಈ ವೇಳೆ ಅಡ್ಡಿಪಡಿಸಲು ಬಂದ ವರ್ತೂರ್ ಬೆಂಬಲಿಗರ ಮೇಲೂ ಮಹಿಳೆಯರು ಆಕ್ರೋಶಗೊಂಡರು. ಇವತ್ತು ಬಂದು ಹೋದ್ರೆ ಮತ್ತೇ ಬರೋದು ಯಾವಾಗ ನಮ್ಮ ಸಮಸ್ಯೆ ಕೇಳೋರು ಯಾರೂ ಎಂದು ಪ್ರಶ್ನಿಸಿದ್ದಾರೆ.