ರಾಜ್ಯದಲ್ಲಿ ಅಬ್ಬರದ ಬೇಸಿಗೆಯ ನಡುವೆಯೂ ಕಳೆದ ಎರಡು ದಿನಗಳ ಕಾಲ ಕೆಲವೆಡೆ ಮಳೆಯಾಗಿದೆ. ಇಂದು ರಾಜ್ಯದಲ್ಲಿ ಯಾವುದೇ ಭಾಗಗಳಲ್ಲಿ ಮಳೆ ಬರುವ ಲಕ್ಷಣಗಳಿಲ್ಲ, ಬದಲಾಗಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾ.21ರಿಂದ ಎರಡು ದಿನಗಳ ಕಾಲ ಸುಮಾರು 12 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 33-22
ಮಂಗಳೂರು: 32-24
ಶಿವಮೊಗ್ಗ: 37-20
ಬೆಳಗಾವಿ: 34-22
ಮೈಸೂರು: 36-23
ಮಂಡ್ಯ: 36-23
ಮಡಿಕೇರಿ: 34-19
ರಾಮನಗರ: 35-23
ಹಾಸನ: 34-20
ಚಾಮರಾಜನಗರ: 37-22
ಚಿಕ್ಕಬಳ್ಳಾಪುರ: 32-22
ಕೋಲಾರ: 33-22
ತುಮಕೂರು: 32-22
ಉಡುಪಿ: 32-24
ಕಾರವಾರ: 32-23
ಚಿಕ್ಕಮಗಳೂರು: 39-19
ದಾವಣಗೆರೆ: 37-22
ಹುಬ್ಬಳ್ಳಿ: 37-23
ಚಿತ್ರದುರ್ಗ: 35-23
ಹಾವೇರಿ: 37-23
ಬಳ್ಳಾರಿ: 38-26
ಗದಗ: 36-24
ಕೊಪ್ಪಳ: 37-26
ರಾಯಚೂರು: 39-27
ಯಾದಗಿರಿ: 38- 27
ವಿಜಯಪುರ: 37- 25
ಬೀದರ್: 37- 26
ಕಲಬುರಗಿ: 38-27
ಬಾಗಲಕೋಟೆ: 37-25