Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: `ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

`ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು

Public TV
Last updated: December 12, 2019 11:46 am
Public TV
Share
4 Min Read
bjp kuruba
SHARE

ಬದ್ರುದ್ದೀನ್ ಕೆ ಮಾಣಿ
ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಿರ್ಣಾಯಕ ಪಾತ್ರ ವಹಿಸುತ್ತಿರುವ ಪ್ರಬಲ ಕುರುಬ ಸಮುದಾಯದ ಮೇಲೆ ಈಗ `ಕೇಸರಿ’ ಕಣ್ಣು ಬಿದ್ದಿದೆ. ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಸಮುದಾಯದ `ಐಕಾನ್’ ಎಂಬ ನೆಲೆಯಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿರುವ ಈ ಮತಬ್ಯಾಂಕ್‍ಗೆ ಲಗ್ಗೆ ಇಡಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.

80-90ರ ದಶಕದಲ್ಲಿ ರಾಜ್ಯದ ಕುರುಬ ಸಮುದಾಯ ಬಹುತೇಕ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ರಾಜ್ಯಾದ್ಯಂತ ಸುಮಾರು 50 ಲಕ್ಷದಷ್ಟಿರುವ ಈ ಸಮುದಾಯ 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ. ಈ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಒಲವಿರುವ ಅಭ್ಯರ್ಥಿಗಳೇ ಬಹುತೇಕ ಗೆಲ್ಲುತ್ತಾ ಬಂದಿದ್ದಾರೆ. ಹೀಗಾಗಿಯೇ ರಾಜ್ಯ ರಾಜಕಾರಣದಲ್ಲಿ ಈಗ ಸಮುದಾಯ ನಿರ್ಣಾಯಕ ಎಂಬುದು ರಾಜಕೀಯ ಪಡಸಾಲೆಯ ವಿಶ್ಲೇಷಣೆ.

kuruba 7

ಚಾಮುಂಡೇಶ್ವರಿ ಕ್ಷೇತ್ರದಿಂದ 1983ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಸಿದ್ದರಾಮಯ್ಯ, ಅಂದಿನ ರಾಮಕೃಷ್ಣ ಹೆಗಡೆಯವರ ಕಣ್ಣಿಗೆ ಬಿದ್ದಿದ್ದರ ಪರಿಣಾಮ ರಾಜಕೀಯವಾಗಿ ಮುಖ್ಯವಾಹಿನಿಗೆ ಬಂದಿದ್ದರು. ಕಾಲಕ್ರಮೇಣ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿರುವ ಸಮುದಾಯದ ಒಲವು ಪಡೆದು ರಾಜ್ಯ ನಾಯಕರಾಗಿ ಬೆಳೆದದ್ದು ಇತಿಹಾಸ. ನಂತರದ ದಿನಗಳಲ್ಲಿ ದೇವೇಗೌಡರ ನಿಷ್ಠಾವಂತರ ಪಾಳೆಯದಲ್ಲಿ ಗುರುತಿಸಿಕೊಂಡವರು, ಗೌಡರು ಪ್ರಧಾನಿ ಹುದ್ದೆಗೇರಿದಾಗ 1996ರಲ್ಲಿ ಸಿಎಂ ಅಭ್ಯರ್ಥಿಯಾಗುವಲ್ಲಿಗೆ ಬಂದು ತಲುಪಿದ್ದರು. ಜೆ.ಹೆಚ್.ಪಟೇಲ್‍ರಿಗೆ ಸಿಎಂ ಗಾದಿ ತಪ್ಪಿಸಲು ಅಂದು ಗೌಡರು ಸಿದ್ದರಾಮಯ್ಯರನ್ನು ಮುಂದಿಟ್ಟು ರಾಜಕೀಯ ದಾಳ ಎಸೆದಿದ್ದರು. ಆದ್ರೆ, ಅದು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಜನತಾದಳ (ಎಸ್)ನಲ್ಲಿ ಗೌಡರ ನೀಲಿಗಣ್ಣಿನ ನಾಯಕನಾಗಿ ಬೆಳದರು ಸಿದ್ದರಾಮಯ್ಯ. ಜನತಾದಳ (ಎಸ್) ಪಕ್ಷ ಮುನ್ನಡೆಸಿ 2004ರಲ್ಲಿ ಚುನಾವಣೆ ಎದುರಿಸಿದ ಸಿದ್ದರಾಮಯ್ಯ, ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿ ಕುರುಬ ಸಮುದಾಯದ ಏಕೈಕ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡು ಸಮುದಾಯವನ್ನು ಪೂರ್ಣಪ್ರಮಾಣದಲ್ಲಿ ಜೆಡಿಎಸ್ ವೋಟ್ ಬ್ಯಾಂಕ್ ಮಾಡಿದ್ದು ಇತಿಹಾಸ. ಅಂದು ಬಹುತೇಕ ಕುರುಬ ಸಮುದಾಯ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂಬ ಕಾರಣಕ್ಕೆ ಜೆಡಿಎಸ್ ಬೆಂಬಲಿಸಿತ್ತು.

kuruba 1 e1576131098223

ಕಾಂಗ್ರೆಸ್ ಜೆಡಿಎಸ್ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಅವಕಾಶ ಕಳೆದುಕೊಂಡ ಸಿದ್ದರಾಮಯ್ಯ, ಅದೇ ಮುನಿಸಿನಲ್ಲಿ ಮುಂದೆ ಜೆಡಿಎಸ್‍ನೊಂದಿಗೆ ವಿರಸದೊಂದಿಗೆ ಪಕ್ಷದಿಂದ ಹೊರಹಾಕಲ್ಪಟ್ಟರು. ಅಹಿಂದ ಸಂಘಟಿಸಿ ಸಮುದಾಯವನ್ನು ತನ್ನೊಂದಿಗೆ ಇಟ್ಟುಕೊಂಡ ಅವರು ಕಾಂಗ್ರಸ್ ಸೇರಿದಾಗಲೂ ಕುರುಬ ಸಮುದಾಯ ತಮ್ಮೊಂದಿಗೆ ಇರುವಂತೆ ನೋಡಿಕೊಂಡರು. ಅಲ್ಲಿಂದ ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ಏನೇನೋ ಕಸರತ್ತು ಮಾಡಿ ಯಾರನ್ನೇ ನಾಯಕನಾಗಿ ಬಿಂಬಿಸಿದರೂ ಸಮುದಾಯ ಸಿದ್ದರಾಮಯ್ಯನವರ ಕಾರಣಕ್ಕೆ ಕಾಂಗ್ರೆಸ್ ಜೊತೆ ನಿಂತಿರುವುದು ಸತ್ಯ.

ಆದರೆ ಈಗ ಕಾಲ ಬದಲಾಗಿದೆ. 2013ರಲ್ಲಿ ಬಹುಮತದೊಂದಿಗೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿ 5 ವರ್ಷ ರಾಜ್ಯವನ್ನಾಳಿ ಸಮುದಾಯ ಏಕಮೇವಾದ್ವಿತೀಯ ನಾಯಕನಾಗಿ ಮೆರೆದರು. ಸಮುದಾಯದ ಎರಡನೇ ಪಂಕ್ತಿ ನಾಯಕರನ್ನು ಬೆಳೆಸದೇ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟ ಸಿದ್ದರಾಮಯ್ಯ ವಿರುದ್ಧ ಈಗ ಸಮುದಾಯದ ನಾಯಕರೇ ತಿರುಗಿ ಬೀಳತೊಡಗಿದ್ದಾರೆ. 2018ರ ಫಲಿತಾಂಶದ ಬಳಿಕವಂತೂ, ಅವರು ಸಮುದಾಯದ ಹಿಡಿತ ಕಳೆದುಕೊಳ್ಳತೊಡಗಿದ್ದಾರೆ. ಬಿಜೆಪಿಯಂತೂ ಈವರೆಗೆ ಮಾಡಿದ ಎಲ್ಲಾ ಕಸರತ್ತುಗಳಲ್ಲೂ ಕುರುಬ ಸಮುದಾಯವನ್ನು ಸೆಳೆಯಲು ವಿಫಲವಾಗಿದ್ದಂತೂ ಸತ್ಯ. ಪಕ್ಷದ ಹಿರಿಯ ನೇತಾರ ಕೆ.ಎಸ್.ಈಶ್ವರಪ್ಪ, ಸಮುದಾಯದ ‘ಐಕಾನ್’ ಆಗಲು ಸಾಧ್ಯವಾಗಿಲ್ಲ. ಪಕ್ಷ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ, ಡಿಸಿಎಂ ಪಟ್ಟ, ಮಂತ್ರಿ ಪದವಿ ನೀಡಿದರೂ ಸಮುದಾಯವನ್ನು ಸೆಳೆಯಲು ಆಗಲೇ ಇಲ್ಲ. ಈಗ ಮತ್ತೆ ‘ಕುರುಬಾಸ್ತ್ರ’ ಬಿಜೆಪಿಗೆ ದೊರೆತಿರುವುದು ಈ ಉಪಚುನಾವಣೆ ಬಳಿಕ. ಕುರುಬ ನಾಯಕರನ್ನು ಸಿದ್ದರಾಮಯ್ಯ ಮುಗಿಸ್ತಾ ಇದ್ದಾರೆ ಎಂದು ಬಿಂಬಿಸಿ, ಎರಡನೇ ಹಂತದ ನಾಯಕರನ್ನೆಲ್ಲಾ ಸೆಳೆದು ಅವರಿಗೆ ಜವಾಬ್ದಾರಿ ನೀಡಿ ಸಮುದಾಯದ ಒಲವು ಗಳಿಸಲು ತಂತ್ರ ರೂಪಿಸುತ್ತಿದೆ ಬಿಜೆಪಿ. ಅಹಿಂದಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತಂದ ರಾಯಣ್ಣ ಬ್ರಿಗೇಡ್‍ಗೆ ಲಗಾಮು ಹಾಕಿದ್ದ ಕೇಸರಿ ಪಾಳಯ ಈಗ ಮತ್ತೆ ಹೊಸ ತಂತ್ರಗಾರಿಕೆಗೆ ಕೈಹಾಕಿದೆ.

yeddyurappa

ಉಪಚುನಾವಣೆಯಲ್ಲಿ 3 ಹಿರಿಯ ಪ್ರಮುಖ ನಾಯಕರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಆದ್ರೆ ನಾವು ಅವರಿಗೆ ಮನ್ನಣೆ ನೀಡುತ್ತೇವೆ, ಪಕ್ಷ ನಿಮ್ಮೊಂದಿಗೆ ಇದೆ, ನಮ್ಮೊಂದಿಗೆ ನೀವು ಇರಿ ಎಂದು ಸಂದೇಶ ರವಾನಿಸಲು ಆರಂಭಿಸಿದೆ ಕೇಸರಿ ಬ್ರಿಗೇಡ್. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಮುದಾಯದ ‘ಮತ ಬ್ಯಾಂಕ್’ಗೆ ಬಿಜೆಪಿ ಲಗ್ಗೆ ಇಡುತ್ತಿರುವುದಂತೂ ಸತ್ಯ.

ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರನ್ನು ಸೆಳೆದು ಕುರುಬ ಸಮುದಾಯದ ವಿಶ್ವಾಸ ಗಳಿಸುವುದು ‘ಕೇಸರಿ’ ಟೀಂನ ಅಜೆಂಡಾ, ಜೊತೆಗೆ ಕಾಂಗ್ರೆಸ್‍ನಲ್ಲೂ ಸಿದ್ದರಾಮಯ್ಯ ವಿರೋಧಿ ಪಾಳೆಯ ಈಗ ಪ್ರಬಲವಾಗತೊಡಗಿ, ಅವರನ್ನು ಮೂಲೆಗುಂಪು ಮಾಡ್ತಾ ಇದ್ದಾರೆ ಎಂದು ಬಿಂಬಿಸುವುದು ಕೂಡಾ ಮತ್ತೊಂದು ತಂತ್ರದ ಭಾಗವೂ ಹೌದು. ಕಾಂಗ್ರೆಸ್‍ನೊಳಗೆ ವಿರೋಧಿಗಳು ಸಿದ್ದರಾಮಯ್ಯಗೆ ಈಗ ಹೆಚ್ಚಾಗತೊಡಗಿರುವುದು ಸಹಜವಾಗಿ ಕುರುಬ ಸಮುದಾಯದಲ್ಲಿ ಅಭದ್ರತೆ ಕಾಡತೊಡಗಿರುವುದಂತೂ ನಿಜ. ಇದನ್ನೇ ಬಂಡವಾಳ ಮಾಡಿಕೊಳ್ಳಲಿರುವ ಬಿಜೆಪಿ ಎರಡು ಮತ್ತು ಮೂರನೇ ಹಂತದ ನಾಯಕರನ್ನು ಸೆಳೆದು ಸಮುದಾಯದ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡಲು ನಿರ್ಧರಿಸಿದೆ.

kuruba 4

ಹೀಗಾಗಿ ಸಹಜವಾಗಿ ಕುರುಬ ಸಮುದಾಯ ಅಲ್ಪ ಪ್ರಮಾಣದಲ್ಲಾದ್ರೂ ಬಿಜೆಪಿ ಕಡೆಗೆ ವಾಲುವುದರಲ್ಲಿ ಅನುಮಾನವಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕುರುಬ ಸಮುದಾಯದ ಕನಿಷ್ಠ ಅರ್ಧ ಭಾಗದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡರೆ ಪಕ್ಷಕ್ಕೆ ಅದು ದೊಡ್ಡ ಆಸ್ತಿ ಎಂಬುದೇ ಬಿಜೆಪಿ ಪಡಸಾಲೆಯ ಲೆಕ್ಕಾಚಾರ. ಒಂದು ವೇಳೆ ಸಿದ್ದರಾಮಯ್ಯ ನಾಯಕತ್ವಕ್ಕೆ ಕಾಂಗ್ರೆಸ್‍ನಲ್ಲಿ ಕೊಕ್ಕೆ ಬಿದ್ದರೆ, ಬಿಜೆಪಿ ಗುರಿಯಂತೂ ಇನ್ನಷ್ಟು ಸುಲಭವಾಗುವುದರಲ್ಲಿ ಸಂಶಯವಿಲ್ಲ.

Share This Article
Facebook Whatsapp Whatsapp Telegram
Previous Article ranu himesh ರಾನು ಮೊಂಡಲ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಿಮೇಶ್ ಗರಂ
Next Article CM BSY HDK DKSHI ಎಚ್‍ಡಿಕೆ, ಡಿಕೆಶಿ ವಿರುದ್ಧ ಸಿಎಂ ಬಿಎಸ್‍ವೈ ಬ್ರಹ್ಮಾಸ್ತ್ರ

Latest Cinema News

Vinay Rajkumar Ramya
ಅಮೆರಿಕದಲ್ಲಿ ವಿನಯ್ & ವಂದಿತಾ ಜೊತೆ ರಮ್ಯಾ ಸುತ್ತಾಟ
Cinema Latest Sandalwood Top Stories
time pass movie
ಪ್ರೇಕ್ಷಕರನ್ನು ಸೆಳೆಯುತ್ತಿದೆ ‘ಟೈಮ್ ಪಾಸ್’ ಟೀಸರ್!
Cinema Latest Sandalwood Top Stories
kichcha sudeep wife priya sudeep
ಅಂಗ & ಅಂಗಾಂಶ ದಾನ ಮಾಡಿದ ಕಿಚ್ಚ ಸುದೀಪ್‌ ಪತ್ನಿ
Cinema Latest Main Post Sandalwood
Ilaiyaraja Mookambika Temple Kolur
ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ
Cinema Districts Karnataka Latest Top Stories Udupi
ramesh aravind 1
ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್
Bengaluru City Cinema Latest Sandalwood Top Stories

You Might Also Like

Siddaramaiah 3
Bengaluru City

ವಿದೇಶಕ್ಕೆ ಅನ್ನಭಾಗ್ಯ ಅಕ್ಕಿ ಸಾಗಣೆ; ವಾಹನಗಳಿಗೆ GPS ಟ್ರ್ಯಾಕರ್, ಗೋದಾಮುಗಳಿಗೆ ಸಿಸಿಟಿವಿ ಅಳವಡಿಕೆಗೆ ಸಿಎಂ ಸೂಚನೆ

59 minutes ago
maddur ganesh visarjane
Latest

ಮದ್ದೂರಿನಲ್ಲಿ ʼಕೇಸರಿʼ ಘರ್ಜನೆ; ಬಿಜೆಪಿ-ಜೆಡಿಎಸ್ ಒಗ್ಗೂಡಿ ಗಣೇಶ ಮೆರವಣಿಗೆ – ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ

1 hour ago
Abhishek Sharma Asia Cup
Cricket

ಕೇವಲ 4.3 ಓವರ್‌ನಲ್ಲೇ ಗುರಿ ತಲುಪಿದ ಟೀಂ ಇಂಡಿಯಾ – ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

2 hours ago
kea
Bengaluru City

ಎಂಸಿಸಿ ಫಲಿತಾಂಶ ಬಳಿಕ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅವಕಾಶ: ಕೆಇಎ

2 hours ago
team india T20
Cricket

ಕುಲ್ದೀಪ್‌, ದುಬೆ ಮಿಂಚು; 57 ರನ್‌ಗೆ ಯುಎಇ ಆಲೌಟ್ – ಟಿ20 ಇತಿಹಾಸದಲ್ಲೇ ಕೆಟ್ಟ ದಾಖಲೆ

4 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?