Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: `ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | `ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು

Bengaluru City

`ಕುರುಬ’ ಸಮುದಾಯದ ಮೇಲೆ `ಕೇಸರಿ’ ಕಣ್ಣು

Public TV
Last updated: December 12, 2019 11:46 am
Public TV
Share
4 Min Read
bjp kuruba
SHARE

ಬದ್ರುದ್ದೀನ್ ಕೆ ಮಾಣಿ
ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಿರ್ಣಾಯಕ ಪಾತ್ರ ವಹಿಸುತ್ತಿರುವ ಪ್ರಬಲ ಕುರುಬ ಸಮುದಾಯದ ಮೇಲೆ ಈಗ `ಕೇಸರಿ’ ಕಣ್ಣು ಬಿದ್ದಿದೆ. ಹೌದು, ಮಾಜಿ ಸಿಎಂ ಸಿದ್ದರಾಮಯ್ಯ ಸಮುದಾಯದ `ಐಕಾನ್’ ಎಂಬ ನೆಲೆಯಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿರುವ ಈ ಮತಬ್ಯಾಂಕ್‍ಗೆ ಲಗ್ಗೆ ಇಡಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ.

80-90ರ ದಶಕದಲ್ಲಿ ರಾಜ್ಯದ ಕುರುಬ ಸಮುದಾಯ ಬಹುತೇಕ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ರಾಜ್ಯಾದ್ಯಂತ ಸುಮಾರು 50 ಲಕ್ಷದಷ್ಟಿರುವ ಈ ಸಮುದಾಯ 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ. ಈ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಒಲವಿರುವ ಅಭ್ಯರ್ಥಿಗಳೇ ಬಹುತೇಕ ಗೆಲ್ಲುತ್ತಾ ಬಂದಿದ್ದಾರೆ. ಹೀಗಾಗಿಯೇ ರಾಜ್ಯ ರಾಜಕಾರಣದಲ್ಲಿ ಈಗ ಸಮುದಾಯ ನಿರ್ಣಾಯಕ ಎಂಬುದು ರಾಜಕೀಯ ಪಡಸಾಲೆಯ ವಿಶ್ಲೇಷಣೆ.

kuruba 7

ಚಾಮುಂಡೇಶ್ವರಿ ಕ್ಷೇತ್ರದಿಂದ 1983ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಸಿದ್ದರಾಮಯ್ಯ, ಅಂದಿನ ರಾಮಕೃಷ್ಣ ಹೆಗಡೆಯವರ ಕಣ್ಣಿಗೆ ಬಿದ್ದಿದ್ದರ ಪರಿಣಾಮ ರಾಜಕೀಯವಾಗಿ ಮುಖ್ಯವಾಹಿನಿಗೆ ಬಂದಿದ್ದರು. ಕಾಲಕ್ರಮೇಣ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿರುವ ಸಮುದಾಯದ ಒಲವು ಪಡೆದು ರಾಜ್ಯ ನಾಯಕರಾಗಿ ಬೆಳೆದದ್ದು ಇತಿಹಾಸ. ನಂತರದ ದಿನಗಳಲ್ಲಿ ದೇವೇಗೌಡರ ನಿಷ್ಠಾವಂತರ ಪಾಳೆಯದಲ್ಲಿ ಗುರುತಿಸಿಕೊಂಡವರು, ಗೌಡರು ಪ್ರಧಾನಿ ಹುದ್ದೆಗೇರಿದಾಗ 1996ರಲ್ಲಿ ಸಿಎಂ ಅಭ್ಯರ್ಥಿಯಾಗುವಲ್ಲಿಗೆ ಬಂದು ತಲುಪಿದ್ದರು. ಜೆ.ಹೆಚ್.ಪಟೇಲ್‍ರಿಗೆ ಸಿಎಂ ಗಾದಿ ತಪ್ಪಿಸಲು ಅಂದು ಗೌಡರು ಸಿದ್ದರಾಮಯ್ಯರನ್ನು ಮುಂದಿಟ್ಟು ರಾಜಕೀಯ ದಾಳ ಎಸೆದಿದ್ದರು. ಆದ್ರೆ, ಅದು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಜನತಾದಳ (ಎಸ್)ನಲ್ಲಿ ಗೌಡರ ನೀಲಿಗಣ್ಣಿನ ನಾಯಕನಾಗಿ ಬೆಳದರು ಸಿದ್ದರಾಮಯ್ಯ. ಜನತಾದಳ (ಎಸ್) ಪಕ್ಷ ಮುನ್ನಡೆಸಿ 2004ರಲ್ಲಿ ಚುನಾವಣೆ ಎದುರಿಸಿದ ಸಿದ್ದರಾಮಯ್ಯ, ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿ ಕುರುಬ ಸಮುದಾಯದ ಏಕೈಕ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡು ಸಮುದಾಯವನ್ನು ಪೂರ್ಣಪ್ರಮಾಣದಲ್ಲಿ ಜೆಡಿಎಸ್ ವೋಟ್ ಬ್ಯಾಂಕ್ ಮಾಡಿದ್ದು ಇತಿಹಾಸ. ಅಂದು ಬಹುತೇಕ ಕುರುಬ ಸಮುದಾಯ ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂಬ ಕಾರಣಕ್ಕೆ ಜೆಡಿಎಸ್ ಬೆಂಬಲಿಸಿತ್ತು.

kuruba 1 e1576131098223

ಕಾಂಗ್ರೆಸ್ ಜೆಡಿಎಸ್ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಅವಕಾಶ ಕಳೆದುಕೊಂಡ ಸಿದ್ದರಾಮಯ್ಯ, ಅದೇ ಮುನಿಸಿನಲ್ಲಿ ಮುಂದೆ ಜೆಡಿಎಸ್‍ನೊಂದಿಗೆ ವಿರಸದೊಂದಿಗೆ ಪಕ್ಷದಿಂದ ಹೊರಹಾಕಲ್ಪಟ್ಟರು. ಅಹಿಂದ ಸಂಘಟಿಸಿ ಸಮುದಾಯವನ್ನು ತನ್ನೊಂದಿಗೆ ಇಟ್ಟುಕೊಂಡ ಅವರು ಕಾಂಗ್ರಸ್ ಸೇರಿದಾಗಲೂ ಕುರುಬ ಸಮುದಾಯ ತಮ್ಮೊಂದಿಗೆ ಇರುವಂತೆ ನೋಡಿಕೊಂಡರು. ಅಲ್ಲಿಂದ ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ಏನೇನೋ ಕಸರತ್ತು ಮಾಡಿ ಯಾರನ್ನೇ ನಾಯಕನಾಗಿ ಬಿಂಬಿಸಿದರೂ ಸಮುದಾಯ ಸಿದ್ದರಾಮಯ್ಯನವರ ಕಾರಣಕ್ಕೆ ಕಾಂಗ್ರೆಸ್ ಜೊತೆ ನಿಂತಿರುವುದು ಸತ್ಯ.

ಆದರೆ ಈಗ ಕಾಲ ಬದಲಾಗಿದೆ. 2013ರಲ್ಲಿ ಬಹುಮತದೊಂದಿಗೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿ 5 ವರ್ಷ ರಾಜ್ಯವನ್ನಾಳಿ ಸಮುದಾಯ ಏಕಮೇವಾದ್ವಿತೀಯ ನಾಯಕನಾಗಿ ಮೆರೆದರು. ಸಮುದಾಯದ ಎರಡನೇ ಪಂಕ್ತಿ ನಾಯಕರನ್ನು ಬೆಳೆಸದೇ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟ ಸಿದ್ದರಾಮಯ್ಯ ವಿರುದ್ಧ ಈಗ ಸಮುದಾಯದ ನಾಯಕರೇ ತಿರುಗಿ ಬೀಳತೊಡಗಿದ್ದಾರೆ. 2018ರ ಫಲಿತಾಂಶದ ಬಳಿಕವಂತೂ, ಅವರು ಸಮುದಾಯದ ಹಿಡಿತ ಕಳೆದುಕೊಳ್ಳತೊಡಗಿದ್ದಾರೆ. ಬಿಜೆಪಿಯಂತೂ ಈವರೆಗೆ ಮಾಡಿದ ಎಲ್ಲಾ ಕಸರತ್ತುಗಳಲ್ಲೂ ಕುರುಬ ಸಮುದಾಯವನ್ನು ಸೆಳೆಯಲು ವಿಫಲವಾಗಿದ್ದಂತೂ ಸತ್ಯ. ಪಕ್ಷದ ಹಿರಿಯ ನೇತಾರ ಕೆ.ಎಸ್.ಈಶ್ವರಪ್ಪ, ಸಮುದಾಯದ ‘ಐಕಾನ್’ ಆಗಲು ಸಾಧ್ಯವಾಗಿಲ್ಲ. ಪಕ್ಷ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ, ಡಿಸಿಎಂ ಪಟ್ಟ, ಮಂತ್ರಿ ಪದವಿ ನೀಡಿದರೂ ಸಮುದಾಯವನ್ನು ಸೆಳೆಯಲು ಆಗಲೇ ಇಲ್ಲ. ಈಗ ಮತ್ತೆ ‘ಕುರುಬಾಸ್ತ್ರ’ ಬಿಜೆಪಿಗೆ ದೊರೆತಿರುವುದು ಈ ಉಪಚುನಾವಣೆ ಬಳಿಕ. ಕುರುಬ ನಾಯಕರನ್ನು ಸಿದ್ದರಾಮಯ್ಯ ಮುಗಿಸ್ತಾ ಇದ್ದಾರೆ ಎಂದು ಬಿಂಬಿಸಿ, ಎರಡನೇ ಹಂತದ ನಾಯಕರನ್ನೆಲ್ಲಾ ಸೆಳೆದು ಅವರಿಗೆ ಜವಾಬ್ದಾರಿ ನೀಡಿ ಸಮುದಾಯದ ಒಲವು ಗಳಿಸಲು ತಂತ್ರ ರೂಪಿಸುತ್ತಿದೆ ಬಿಜೆಪಿ. ಅಹಿಂದಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತಂದ ರಾಯಣ್ಣ ಬ್ರಿಗೇಡ್‍ಗೆ ಲಗಾಮು ಹಾಕಿದ್ದ ಕೇಸರಿ ಪಾಳಯ ಈಗ ಮತ್ತೆ ಹೊಸ ತಂತ್ರಗಾರಿಕೆಗೆ ಕೈಹಾಕಿದೆ.

yeddyurappa

ಉಪಚುನಾವಣೆಯಲ್ಲಿ 3 ಹಿರಿಯ ಪ್ರಮುಖ ನಾಯಕರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಆದ್ರೆ ನಾವು ಅವರಿಗೆ ಮನ್ನಣೆ ನೀಡುತ್ತೇವೆ, ಪಕ್ಷ ನಿಮ್ಮೊಂದಿಗೆ ಇದೆ, ನಮ್ಮೊಂದಿಗೆ ನೀವು ಇರಿ ಎಂದು ಸಂದೇಶ ರವಾನಿಸಲು ಆರಂಭಿಸಿದೆ ಕೇಸರಿ ಬ್ರಿಗೇಡ್. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಮುದಾಯದ ‘ಮತ ಬ್ಯಾಂಕ್’ಗೆ ಬಿಜೆಪಿ ಲಗ್ಗೆ ಇಡುತ್ತಿರುವುದಂತೂ ಸತ್ಯ.

ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರನ್ನು ಸೆಳೆದು ಕುರುಬ ಸಮುದಾಯದ ವಿಶ್ವಾಸ ಗಳಿಸುವುದು ‘ಕೇಸರಿ’ ಟೀಂನ ಅಜೆಂಡಾ, ಜೊತೆಗೆ ಕಾಂಗ್ರೆಸ್‍ನಲ್ಲೂ ಸಿದ್ದರಾಮಯ್ಯ ವಿರೋಧಿ ಪಾಳೆಯ ಈಗ ಪ್ರಬಲವಾಗತೊಡಗಿ, ಅವರನ್ನು ಮೂಲೆಗುಂಪು ಮಾಡ್ತಾ ಇದ್ದಾರೆ ಎಂದು ಬಿಂಬಿಸುವುದು ಕೂಡಾ ಮತ್ತೊಂದು ತಂತ್ರದ ಭಾಗವೂ ಹೌದು. ಕಾಂಗ್ರೆಸ್‍ನೊಳಗೆ ವಿರೋಧಿಗಳು ಸಿದ್ದರಾಮಯ್ಯಗೆ ಈಗ ಹೆಚ್ಚಾಗತೊಡಗಿರುವುದು ಸಹಜವಾಗಿ ಕುರುಬ ಸಮುದಾಯದಲ್ಲಿ ಅಭದ್ರತೆ ಕಾಡತೊಡಗಿರುವುದಂತೂ ನಿಜ. ಇದನ್ನೇ ಬಂಡವಾಳ ಮಾಡಿಕೊಳ್ಳಲಿರುವ ಬಿಜೆಪಿ ಎರಡು ಮತ್ತು ಮೂರನೇ ಹಂತದ ನಾಯಕರನ್ನು ಸೆಳೆದು ಸಮುದಾಯದ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡಲು ನಿರ್ಧರಿಸಿದೆ.

kuruba 4

ಹೀಗಾಗಿ ಸಹಜವಾಗಿ ಕುರುಬ ಸಮುದಾಯ ಅಲ್ಪ ಪ್ರಮಾಣದಲ್ಲಾದ್ರೂ ಬಿಜೆಪಿ ಕಡೆಗೆ ವಾಲುವುದರಲ್ಲಿ ಅನುಮಾನವಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕುರುಬ ಸಮುದಾಯದ ಕನಿಷ್ಠ ಅರ್ಧ ಭಾಗದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡರೆ ಪಕ್ಷಕ್ಕೆ ಅದು ದೊಡ್ಡ ಆಸ್ತಿ ಎಂಬುದೇ ಬಿಜೆಪಿ ಪಡಸಾಲೆಯ ಲೆಕ್ಕಾಚಾರ. ಒಂದು ವೇಳೆ ಸಿದ್ದರಾಮಯ್ಯ ನಾಯಕತ್ವಕ್ಕೆ ಕಾಂಗ್ರೆಸ್‍ನಲ್ಲಿ ಕೊಕ್ಕೆ ಬಿದ್ದರೆ, ಬಿಜೆಪಿ ಗುರಿಯಂತೂ ಇನ್ನಷ್ಟು ಸುಲಭವಾಗುವುದರಲ್ಲಿ ಸಂಶಯವಿಲ್ಲ.

TAGGED:bjpelectionskarnatakakurubaVote Bankಕರ್ನಾಟಕಕಾಂಗ್ರೆಸ್ಕುರುಬಕುರುಬರುಚುನಾವಣೆಯಡಿಯೂರಪ್ಪಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood
ranveer singh deepika padukone 2
ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ರಣವೀರ್ ಸಿಂಗ್‌ಗೆ ಬೆದರಿಕೆ – ವಾಯ್ಸ್‌ ಮೆಸೇಜ್‌ನಲ್ಲಿ ಕೋಟಿ ಕೋಟಿ ಡಿಮ್ಯಾಂಡ್‌
Bollywood Cinema Crime Latest Top Stories
Gilli
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
Cinema Latest Sandalwood Top Stories

You Might Also Like

Sherfane Rutherford
Cricket

ರುದರ್‌ಫೋರ್ಡ್‌ ಬೆಂಕಿ ಬ್ಯಾಟಿಂಗ್‌ಗೆ ಇಂಗ್ಲೆಂಡ್‌ ಬರ್ನ್‌!

Public TV
By Public TV
4 hours ago
HAL Techie Murder
Bengaluru City

ಹಣಕಾಸಿನ ವಿಚಾರಕ್ಕಾಗಿ ಡಬಲ್ ಮರ್ಡರ್ – ತಂದೆ, ತಾಯಿಯನ್ನೇ ಕೊಂದ ಟೆಕ್ಕಿ ಅರೆಸ್ಟ್

Public TV
By Public TV
4 hours ago
Bengaluru Road Rage
Bengaluru City

ಗಾಡಿ ಟಚ್ ಆಗಿದ್ದಕ್ಕೆ ಕಿರಿಕ್ – ಕಾರ್‌ ಬಾನೆಟ್ ಮೇಲೆ ಗೂಡ್ಸ್ ಚಾಲಕನನ್ನು 1 ಕಿ.ಮೀ ಎಳೆದೊಯ್ದು ದುರ್ವರ್ತನೆ

Public TV
By Public TV
5 hours ago
9 year old girl dies in accident belagavi
Belgaum

ಅಪಘಾತದಲ್ಲಿ 9 ವರ್ಷದ ಬಾಲಕಿ ಸಾವು

Public TV
By Public TV
5 hours ago
Byrati Basavaraj 1
Bengaluru City

ನಿರೀಕ್ಷಣಾ ಜಾಮೀನು ಅರ್ಜಿ ವಜಾ – ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಬೈರತಿ ಬಸವರಾಜ್

Public TV
By Public TV
5 hours ago
Cattle fair begins in Motagi Bagalkote 2
Bagalkot

ಬಾಗಲಕೋಟೆ ಮೋಟಗಿಯಲ್ಲಿ ಶುರುವಾಗಿದೆ ಜಾನುವಾರು ಜಾತ್ರೆ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?