ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ ವೀರಮರಣ ಹೇಗೆ ಆಗುತ್ತೆ: ರಾಷ್ಟ್ರಪತಿಗಳಿಗೆ ಪ್ರತಾಪ್ ಸಿಂಹ ಪ್ರಶ್ನೆ

Public TV
1 Min Read
prathap simha f

ಬೆಂಗಳೂರು: ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ, ವೀರಮರಣ ಹೇಗೆ ಆಗುತ್ತದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

ರಾಜ್ಯ ವಿಧಾನಸಭೆ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಟಿಪ್ಪುವನ್ನು ಹೊಗಳಿ ರಾಷ್ಟ್ರಪತಿಗಳು ಭಾಷಣ ಮಾಡಿದ ವಿಚಾರದ ಬಗ್ಗೆ ಪ್ರಶ್ನೆ ಎತ್ತಿ ಪ್ರತಾಪ್ ಸಿಂಹ ಅವರು ಎರಡು ಟ್ವೀಟ್ ಮಾಡಿದ್ದಾರೆ.

ಟಿಪ್ಪು ಯುದ್ಧ ಭೂಮಿಯಲ್ಲಿ ಹೋರಾಟ ಮಾಡುತ್ತಾ ಮರಣ ಹೊಂದಿಲ್ಲ. ಕೋಟೆಯಲ್ಲಿ ಮರಣ ಹೊಂದಿದ್ದಾನೆ. ಕೋಟೆಯಲ್ಲಿ ಮರಣ ಹೊಂದಿದರೆ ಅದು ಹೇಗೆ ವೀರ ಮರಣವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಒಂದು ವೇಳೆ ಟಿಪ್ಪು ಕ್ಷಿಪಣಿಯ ಜನಕನಾಗಿದ್ದರೆ ಬ್ರಿಟಿಷರ ವಿರುದ್ಧ ಕ್ಷಿಪಣಿಯನ್ನು ಪ್ರಯೋಗಿಸಬಹುದಿತ್ತು. ಆದರೆ 3ನೇ ಮತ್ತು 4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋತಿದ್ದು ಯಾಕೆ? ಕ್ಷಿಪಣಿಯನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸದ್ದು ಯಾಕೆ ಎಂದು ಪ್ರಶ್ನಿಸಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಇಂದು ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಟಿಪ್ಪು ಸುಲ್ತಾನ್ ಬಗ್ಗೆ ಗುಣಗಾನ ಮಾಡಿದ್ದರು. ಅಲ್ಲದೇ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರಮರಣವನ್ನಪ್ಪಿದ. ಭಾರತದ ಮೊದಲ ಕ್ಷಿಪಣಿ ಜನಕ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿಹೊಗಳುವ ವೇಳೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ ಶಾಸಕರು ಮಾತ್ರ ಸುಮ್ಮನೆ ಕುಳಿತಿದ್ದರು.

ram nath kovind

kovind session 2

kovind session 3

kovind session 4

kovind session 1

kovind session 7

kovind session 6

kovind session 5

Share This Article
Leave a Comment

Leave a Reply

Your email address will not be published. Required fields are marked *