ಬೆಂಗಳೂರು: ಲೋಕಾಯುಕ್ತ ಸರ್ಚ್ ವಾರಂಟ್ ವಿಚಾರದಲ್ಲಿ ನಾನೇನು ತಪ್ಪು ಮಾಡಿಲ್ಲ. ಐ ಡೋಂಟ್ ಕೇರ್ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಹೇಳಿದ್ದಾರೆ.
ಮುಡಾ (MUDA Scam) ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಚ್ ವಾರಂಟ್ ಕೊಟ್ಟವರು ಯಾರು? ದಾಳಿ ಮಾಡಬೇಡಿ ಅಂತ ಲೋಕಾಯುಕ್ತವನ್ನು ತಡೆದವರು ಯಾರು? ಲೋಕಾ ಮೇಲೆ ಯಾರಾದ್ರೂ ಪ್ರೆಷರ್ ಹಾಕಲು ಆಗುತ್ತಾ? ಸಿಎಂ ಮೇಲೆ ಲೋಕಾಯುಕ್ತ ನೋಟಿಸ್ ಕೊಟ್ಟಿಲ್ವಾ? ಸಿಎಂ ಪತ್ನಿ ಪಾರ್ವತಿಗೆ, ಬಾಮೈದನಿಗೆ, ಅಧಿಕಾರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿಲ್ವಾ? ಏನು ನಡೆಯುತ್ತಿದೆ ನನಗೆ ಅರ್ಥವಾಗುತ್ತಿಲ್ಲ ಎಂದರು. ಇದನ್ನೂ ಓದಿ: ಸಿಎಂ ಬಂಪರ್ ಗಿಫ್ಟ್ – ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ನೇಮಕ
ನಮ್ಮ ಕೆಳಗಡೆ ಲೋಕಾಯುಕ್ತ ಇದೆಯಾ? ಯಾವ ಐಎಎಸ್ ಅಧಿಕಾರಿ ಯಾಕೆ ಫೈಲ್ ತೆಗೆದುಕೊಂಡು ಹೋಗಿದ್ದಾರೆ? ಅದಕ್ಕೇನಾದರೂ ಸಾಕ್ಷಿ ಇದೆಯಾ? ದೂರುದಾರನ ಪ್ರಶ್ನೆ ಏನು? ಲೋಕಾಯುಕ್ತ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಅವರನ್ನು ಹೋಗಿ ಕೇಳಲಿ. ದಿನ ಬೆಳಗಾದರೆ ತನಿಖೆಯೊಳಗೆ ಮೂಗು ತೂರಿಸೋದು ಸರಿಯಾ? ನಮ್ಮದೇ ಅಧಿಕಾರಿ ಮೇಲೆ ನಂಬಿಕೆ ಇಲ್ಲ ಅಂದರೆ ಇನ್ಯಾರಿಂದ ತನಿಖೆ ಮಾಡಿಸಬೇಕು? ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್. ಲೋಕಾಯುಕ್ತವೇ ಸರಿ ಇಲ್ಲ ಅಂದರೆ ತನಿಖೆ ಯಾರಿಗೆ ಕೊಡೋಣ. ಇದು ಕೊನೆ ಇಲ್ಲದ ಪ್ರಶ್ನೆ. ದೂರುದಾರರೇ ಎಲ್ಲವನ್ನೂ ಊಹೆ ಮಾಡಿಕೊಂಡು ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 10.75 ಕೋಟಿ ಬಿಡ್ – ಅಭಿಮಾನಿಗಳ ಮನವಿಗೆ ಭುವಿ ಖರೀದಿ ಎಂದ ಆರ್ಸಿಬಿ
ನಗರಾಭಿವೃದ್ಧಿಗೂ ಲೋಕಾಯುಕ್ತಕ್ಕೂ ಏನು ಸಂಬಂಧ? ಲೋಕಾಯುಕ್ತಕ್ಕೆ ಅವರದ್ದೇ ಆದ ನಿಯಮವಿದೆ. ಯಾರಿಗೆ ಶಿಕ್ಷೆ ಕೊಡಬೇಕು ಎಂಬುದು ಅವರಿಗೆ ಗೊತ್ತಿದೆ. ಹಿಂದೆ ಮಾಜಿ ಸಿಎಂ ಅವರನ್ನು ಜೈಲಿಗೆ ಕಳಹಿಸಿದ್ದು ಅದೇ ಲೋಕಾಯುಕ್ತ ಅಲ್ವಾ? ದೂರುದಾರ ಅನುಮಾನಪಟ್ಟರೆ ಅವರು ಪಕ್ಷಪಾತಿಯಾಗಿದ್ದಾರೆ ಎಂದು ಅರ್ಥ. ಇದರಲ್ಲಿ ನನ್ನ ಹೆಸರು ಯಾಕೆ ಬರುತ್ತದೆ? ನಾನು ಮುಡಾ ಸಚಿವ. ನಮ್ಮ ಇಲಾಖೆಯ ನಮ್ಮ ಕಚೇರಿಗೆ ಹೋಗಲು ಯಾರದ್ದೋ ಅನುಮತಿ ತೆಗೆದುಕೊಂಡು ಹೋಗಬೇಕಾ? ಮುಡಾದಲ್ಲಿ ಏನೋ ಆಯ್ತು ಎಂದು ದೊಡ್ಡ ಸೀನ್ ಆಯಿತು. ಅದಕ್ಕಾಗಿ ನಾನು ಮುಡಾ ಕಚೇರಿಗೆ ಹೋದೆ. ನಾನು ನನ್ನ ಕಚೇರಿಗೆ ಹೋಗಲು ನನಗೆ ಯೋಗ್ಯತೆ ಇಲ್ವಾ? ಯಾರನ್ನೋ ಕೇಳಿಕೊಂಡು ಹೋಗಬೇಕಾ? ಸುಮ್ಮನೆ ನಮ್ಮ ಮೇಲೆ ಆರೋಪ ಮಾಡಿದರೆ ನಮಗೂ ಉತ್ತರ ಕೊಡಲು ಬರುತ್ತದೆ. ಅದು ಯಾರೇ ಆಗಿರಲಿ ನನಗೂ ಸ್ವಾಭಿಮಾನ ಇದೆ. ಐ ಡೋಂಟ್ ಕೇರ್ ಎಂದು ಹರಿಹಾಯ್ದರು. ಇದನ್ನೂ ಓದಿ: ಬಣ ಬಡಿದಾಟ ಜೋರು – ಯತ್ನಾಳ್ ಟೀಂ ವಿರುದ್ಧವೇ ಬಿಜೆಪಿಯಿಂದ ಪೊಲೀಸ್ ದೂರು
ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು ತಪ್ಪಾ? ಅಕ್ರಮ ಆಗಿದೆ ಎಂದು ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿದ್ದು ನನ್ನ ತಪ್ಪಾ? ಯಾರನ್ನ ಕೇಳಿ ಮಾಡಬೇಕಿತ್ತು ನಾನು? ನಾನು 2021ರಲ್ಲಿ ಮಂತ್ರಿಯೇ ಅಲ್ಲ. ಕೆಲವರು ಪ್ರೆಸ್ಗಳ ಮುಂದೆ ದೊಡ್ಡದಾಗಿ ಹೀರೋ ತರಹ ಬಿಲ್ಡಪ್ ಕೊಡುತ್ತಿದ್ದಾರೆ. ಅವರು ಹೋಗಿ ಲೋಕಾಯುಕ್ತ ಮುಖ್ಯಸ್ಥರ ಮುಂದೆ ದೂರು ಕೊಡಲಿ. ಅವರಿಗೆ ಏನು ಮಾಡಬೇಕೋ ಲೋಕಾಯುಕ್ತದವರೇ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಮಾರಸ್ವಾಮಿ ರಣಹೇಡಿ, ಮಗನನ್ನೇ ಗೆಲ್ಲಿಸೋಕೆ ಆಗಿಲ್ಲ ಅಂದ್ರೆ ಕೇಂದ್ರ ಸಚಿವನಾಗಿ ಏನು ಪ್ರಯೋಜನ?: ಸಿಪಿವೈ