ಚಿಕ್ಕಬಳ್ಳಾಪುರ: ಶೀಲ ಶಂಕಿಸಿದ ಪತಿಯೊಬ್ಬ ಪತ್ನಿಯ ತಲೆ ಹಿಡಿದು ನೆಲಕ್ಕೆ ಜಜ್ಜಿ ಕೊಲೆ ಮಾಡಿದರುವ ಘಟನೆ ಚಿಕ್ಕಬಳ್ಳಾಪುರ ನಗರದ ಕೊರಚರಪೇಟೆಯಲ್ಲಿ ನಡೆದಿದೆ.
ಮಮತಾ(30) ಮೃತ ದುರ್ದೈವಿ. ಮಮತಾ ಮತ್ತು ಆಕೆಯ ಪತಿ ಅರವಿಂದ್ ಮೂಲತಃ ಉತ್ತರಪ್ರದೇಶದವರಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದರು. ಅರವಿಂದ್ ಚಾಟ್ಸ್ ಸೆಂಟರ್ನಲ್ಲಿ ಕೆಲಸ ಮಾಡ್ತಿದ್ದ. ಮಮತಾ ಮನೆಯಲ್ಲಿ ಇರುತ್ತಿದ್ದಳು. ಇವರಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ.
ತಡರಾತ್ರಿ ಮಮತಾಳ ಶೀಲವನ್ನು ಶಂಕಿಸಿದ ಅರವಿಂದ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಅವನು ಆಕೆಯ ತಲೆ ಹಿಡಿದು ಬಲವಾಗಿ ನೆಲಕ್ಕೆ ಜಜ್ಜಿದ್ದಾನೆ. ಪರಿಣಾಮ ಮಮತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ನಂತರ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ಅರವಿಂದ್ ನನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿ ಫ್ಲೈಓವರ್ನಲ್ಲಿ ಭೀಕರ ಅಪಘಾತ – ಸವಾರ ಸಾವು
ಮಮತಾ ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.