ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ವಿಧಾನಸೌಧದ ಮುಂಭಾಗದಲ್ಲಿರುವ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದೆ.
ವಿಧಾನ ಸೌಧದ ಮುಂಭಾಗ ಮತ್ತು ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು ವಾಹನಗಳು ಚಲಿಸಿದಾಗ ಗಢ ಗಢ ಎನ್ನುತ್ತಿದೆ. ಘನವಾಹನಗಳಾದ ಬಸ್, ಲಾರಿ ಬಂದರೆ ರಸ್ತೆ ಸಂಪೂರ್ಣ ಕುಸಿದುಬಿದ್ದಂತೆ ಆಗುತ್ತಿದೆ.
ರಸ್ತೆ ಕೆಳಭಾಗದಲ್ಲಿ ಮೆಟ್ರೋ ರೈಲಿನ ಅಂಡರಪಾಸ್ ಸಹ ಇದೆ. ಕೂಡಲೇ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದೆ ದೊಡ್ಡ ಅನಾಹುತವಾಗುವ ಸಾಧ್ಯತೆಯಿದೆ.
https://youtu.be/7geiwdyVck0