ನಾಳೆ ಮಂಡ್ಯಗೆ ಹೋಗ್ತಿದ್ದೇನೆ, ಅದ್ಯಾರು ಗೋ ಬ್ಯಾಕ್ ಅಂತಾರೋ ನೊಡೋಣ: ಎಚ್‍ಡಿಡಿ ಸವಾಲು

Public TV
1 Min Read
Nikhil kumaraswamy HDD

ಹಾಸನ: ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಅಂತಿಮಗೊಳಿಸಿ ಘೋಷಣೆ ಮಾಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರು, ನಾಳೆ ಮಂಡ್ಯ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ನಾಳೆ ಮಂಡ್ಯಗೆ ಎಚ್‍ಡಿಡಿ ಭೇಟಿ ನೀಡುವುವುದರಿಂದ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಚುನಾವಣೆಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಆ ಮೂಲಕ ಲೋಕಸಮರಕ್ಕೆ ನಿಖಿಲ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ವೇಳೆ ದೇವೇಗೌಡರಿಗೆ ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್ ನೀಡಲಿದ್ದಾರೆ.

HDD REVANNA

ಮಂಡ್ಯಕ್ಕೆ ತೆರಳುವ ಬಗ್ಗೆ ಇಂದು ಹಾಸನದಲ್ಲಿ ಪ್ರಸ್ತಾಪ ಮಾಡಿದ ದೇವೇಗೌಡರು, ಮಂಡ್ಯದಲ್ಲಿ ಕೆಲವರು ನಿಖಿಲ್ ಗೋ ಬ್ಯಾಕ್ ಎಂದಿದ್ದಾರೆ. ನಾನು ನಾಳೆ ಮಂಡ್ಯಕ್ಕೆ ಹೋಗುತ್ತೇನೆ ಗೋ ಬ್ಯಾಕ್ ಎಂದು ಕೂಗಲಿ ನೋಡೋಣ ಎಂದು ಹೇಳುವ ಮೂಲಕ ಮಂಡ್ಯದಲ್ಲಿ ಗೋ ಬ್ಯಾಕ್ ಚಳವಳಿ ಮಾಡಿದವರಿಗೆ ಸವಾಲು ಎಸೆದಿದ್ದಾರೆ.

ತುಮಕೂರು ಕೇಳಿದರೆ ಮಂಡ್ಯ ನಮಗೆ ಬಿಟ್ಟು ಕೊಡಿ ಎಂದು ಕಾಂಗ್ರೆಸ್ ಕೇಳಿದೆ. ಆದ್ದರಿಂದ ನನ್ನ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ ರಾಷ್ಟ್ರದ ಎಲ್ಲಾ ಮುಖಂಡರಿಂದ ನನ್ನ ಸ್ಪರ್ಧೆ ಬಗ್ಗೆ ಒತ್ತಾಯವಿದೆ ಎಂದರು.

ಸಿಎಂ ಕುಮಾರಸ್ವಾಮಿ ಅವರು ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ಮಾಡುತ್ತಾರೆ. ನಮಗೆ ಮೊದಲು 12 ಸ್ಥಾನ ನಂತರ 10 ಅಂತಾ ಹೇಳುತ್ತಿದ್ದಾರೆ. ಏನಾಗುತ್ತೋ ಕಾದು ನೋಡೋಣ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *