ಹಾಸನ: ಬಿಜೆಪಿ ಅಭ್ಯರ್ಥಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್ ಹಾಕಿದ್ದಾರೆ ಎಂದು ಹೇಳಲಾದ ವೈರಲ್ ಆಡಿಯೋ ಬಗ್ಗೆ ಸ್ವತಃ ಶಾಸಕರೇ ಇದೀಗ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗ ಎ. ಮಂಜು ಬಿಜೆಪಿಗೆ ಬಂದಿರಲಿಲ್ಲ ಇನ್ನೂ ಚರ್ಚೆಯ ಹಂತದಲ್ಲಿತ್ತು. ಆಗ ಮಾತನಾಡಿದ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ಪ್ರೀತಂಗೌಡನನ್ನು ವಿಕ್ ಮಾಡಿದ್ರೆ, ಬಿಜೆಪಿ ವಿಕ್ ಆಗುತ್ತೆ ಅನ್ನೋ ಮನೋಭಾವನೆ ಕೆಲವರದ್ದು ಇರಬೇಕು ಎಂದು ಆಡಿಯೋದಲ್ಲಿನ ವಿವರಣೆಗೆ ಗೊಂದಲದ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಎ.ಮಂಜು ಪಕ್ಷ ಸೇರ್ಪಡೆಗೂ ಮುಂಚೆ ಮಾತನಾಡಿದ ಆಡಿಯೋ ಇರಬಹುದು. ಆಗ ಕಾಂಗ್ರೆಸ್ ನಲ್ಲಿ ಇದ್ದವರ ಕುರಿತು ನಾನು ಹೊಗಳಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
ಇದು ಎಡಿಟೆಟ್ ಆಡಿಯೋ ಆಗಿದೆ. ನನ್ನ ಕಟ್ಟಿಹಾಕಲು ಇದು ವಿರೋಧಿಗಳ ಪಿತೂರಿ. ನನ್ನ ಮತ್ತು ಎ.ಮಂಜು ನಡುವೆ ವೈಮನಸ್ಸು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಎ. ಮಂಜುಗಿಂತ ಪ್ರೀತಂ ಗೌಡ ಜಾಸ್ತಿ ಓಡಾಡುತ್ತಿದ್ದಾರೆ. ಇವರ ಮಧ್ಯ ಏನಾದ್ರು ಕಂದಕ ಮೂಡಿಸಲು ಈ ಪ್ರಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಇದು ವೈರಲ್ ಆಗೋರದಿಕ್ಕೆ ವಿರೋಧ ಪಕ್ಷದವರು ಮಾಡಿರುವ ಪಿತೂರಿ ಎಂದು ಆರೋಪಿಸಿದರು. ಇದನ್ನೂ ಓದಿ: ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್
ಹೊಳೇನರಸೀಪುರ ಮತ್ತು ಚನ್ನರಾಯಪಟ್ಟಣದಂತಹ ಕ್ಷೇತ್ರಗಳನ್ನು ನಾನು ಉಸ್ತುವಾರಿ ವಹಿಸಿಕೊಂಡಿದ್ದೇನೆ. ಚುನಾವಣಾ ಫಲಿತಾಂಶ ಬಂದ ದಿನ ನಾನೂ ಕೂಡ ಮಾತನಾಡುತ್ತೇನೆ. ಮಂಡ್ಯದಲ್ಲಿ ಕೂಡ ನಾಲ್ಕು ಮಂದಿ ಸುಮಲತಾರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಎ. ಮಂಜಣ್ಣ ನನ್ನ ಆತ್ಮೀಯ ಸ್ನೇಹಿತರು. ನನ್ನ ಮನೆಗೆ ಕಲ್ಲು ಹೊಡೆದಾಗಲೂ ಮಂಜಣ್ಣ ಬಂದಿದ್ದರು ಎಂದು ಹೇಳಿದರು.
ದಿನಕ್ಕೆ ಸಾವಿರ ಮಂದಿ ಜೊತೆ ಮಾತನಾಡುತ್ತೇನೆ. ಫೇಕ್ ಆಡಿಯೋದಿಂದಾಗಿ ಎರಡು ಲಕ್ಷ ಮತಗಳು ಹೆಚ್ಚಾಗಿ ಬಿಜೆಪಿಗೆ ಬೀಳುತ್ತವೆ. ಯಾರು ವಿಚಲಿತರಾಗಿದ್ದಾರೆ ಅವರು ಆಡಿಯೋ ಹಿಂದೆ ಹೋಗ್ತಾರೆ. ದೇಶ ಕಟ್ಟುವವರು ನಾವು ಮತದಾರರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.
ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಭದ್ರತೆಯನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ. ಫೇಕ್ ಆಡಿಯೋ, ಎಡಿಟ್ ಆಡಿಯೋ ಮಾಡಿ ಬಿಟ್ರೆ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಅಂದಿದ್ದಾರೆ.