ಹಾಸನ: ಸಚಿವ ಎಚ್.ಡಿ ರೇವಣ್ಣನವರು ಸೂಟ್ಕೇಸ್ ಇಟ್ಟುಕೊಂಡು ಎಲ್ಲ ಕಾರ್ಯಕರ್ತರ ಮನೆ ಮನೆಗೆ ಸುತ್ತುತ್ತಿದ್ದಾರೆ. ಆದ್ರೆ ನಮ್ಮ ಮನೆಗೆ ಬರೋದು ಬೇಡ. ನಾನು ಇದೇ 19ರಂದು ರೇವಣ್ಣನವರ ಮನೆಗೆ ಹೋಗುತ್ತೇನೆ ಎಂದು ಮಾಜಿ ಶಾಸಕ ಹೆಚ್. ಎಂ ವಿಶ್ವನಾಥ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ದಲಿತರಲ್ಲಿ ಮಾತ್ರ ಅಲ್ಲ ಒಕ್ಕಲಿಗರಲ್ಲಿಯೂ ಬಹಳ ದೊಡ್ಡ ಕ್ರಾಂತಿ ಇದೆ. ಒಕ್ಕಲಿಗರು ನಿಮಗೆ ಮತ ಹಾಕಲ್ಲ. ಒಕ್ಕಲಿಗರು ಜಾತಿಯ ಆಧಾರದಲ್ಲಿ ವೋಟು ಹಾಕೋದಾದ್ರೆ ಅಲ್ಲಿ ಜಾತಿಗೂ ಬೆಲೆ ಇಲ್ಲ. ಒಕ್ಕಲಿಗರಲ್ಲಿ ಹಲವು ಒಳ ಜಾತಿಗಳಿವೆ. ಬಿಜೆಪಿ ಅಭ್ಯರ್ಥಿ ಎ ಮಂಜು ಗೆಲುವು ನಿಶ್ಚಿತ ಎಂದು ಹೇಳಿದ್ರು.
ನೀವು ಕೈಯಲ್ಲಿ ನಿಂಬೆಹಣ್ಣು ಹಿಡಿಯುತ್ತೀರಿ ಎಂದು ಏನು ಬೇಕಾದರೂ ಮಾತನಾಡುತ್ತೀರಿ. ಜಾತಿ ಬಗ್ಗೆ, ಪತಿ ಸಾವನ್ನಪ್ಪಿದ ಸುಮಲತಾ ಬಗ್ಗೆ ಮಾತಾಡ್ತೀರಿ. ನೀವು ಹೇಳಿದ್ದೆ ಮಂತ್ರ-ತಂತ್ರ ಎಂದು ಗರಂ ಆದ ಮಾಜಿ ಶಾಸಕರು, ಮೂರನೇ ತಲೆಮಾರಿನ ಪ್ರಜ್ವಲ್ ರನ್ನು ಸೋಲಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಕರೆ ನೀಡಿದರು.