ಬಳ್ಳಾರಿ: ಕಣ್ಣು ಇದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಅನ್ನೋ ನಾಣ್ಣುಡಿಯಿದೆ. ವಿಶ್ವ ವಿಖ್ಯಾತ ಹಂಪಿಯನ್ನು ನೋಡುವುದೇ ಒಂದು ವೈಶಿಷ್ಟ್ಯ.
ವಿಶ್ವ ವಿಖ್ಯಾತ ಹಂಪಿಯನ್ನು ನೋಡಲು ಎರಡು ಕಣ್ಣು ಸಾಲದೂ ಅಂತಾರೆ. ಆದರೆ ಮೋಡಗಳ ಮರೆಯಲ್ಲಿ ನಿಮಿಷ ನಿಮಿಷಕ್ಕೂ ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ನೋಡುವುದೇ ಒಂದು ಹಬ್ಬವಾಗಿದೆ. ಛಾಯಾ ಚಿತ್ರಗ್ರಾಹಕ ಮತ್ತು ಪತ್ರಕರ್ತ ಅವರು ತಮ್ಮ ಕ್ಯಾಮೆರಾದಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿಯ ಕೆಲವು ಸ್ಥಳಗಳನ್ನು ಸೆರೆ ಹಿಡಿದಿದ್ದಾರೆ.
ಕಮಲಾಪುರದ ನಿವಾಸಿ ರಾಚಯ್ಯ ತಮ್ಮ ಕ್ಯಾಮೆರಾಗಳಲ್ಲಿ ಮೋಡಗಳ ಚೆಲ್ಲಾಟಗಳ ಮಧ್ಯೆ ಹಂಪಿ ಹೇಗೆ ಬಿಂಬಿಸುತ್ತವೆ ಅನ್ನೋ ವಿಶೇಷವಾದ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ವಿಜಯ ವಿಠ್ಠಲ ದೇವಾಲಯ ಹಾಗೂ ಹಂಪಿಯ ಕಲ್ಲಿನ ರಥದ ಮೇಲೆ ಮೋಡಗಳು ಹಾಯ್ದು ಹೋಗುವ ವೇಳೆ ಈ ಚಿತ್ರಗಳನ್ನು ರಾಚಯ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಮನೋಜ್ಞವಾಗಿ ಮೂಡಿಬಂದಿದೆ.