ಕರಾವಳಿ ಬ್ಯೂಟಿ ಪೂಜಾ ಹೆಗ್ಡೆಗೆ (Pooja Hegde) ಲಕ್ ಕೈಕೊಟ್ಟಿದೆ. ಸಾಲು ಸಾಲು ಸಿನಿಮಾ ಸೋಲುಗಳಿಂದ ಪೂಜಾ ಕಂಗೆಟ್ಟಿದ್ದಾರೆ. ಬಿಗ್ ಬ್ರೇಕ್ಗಾಗಿ ಎದುರು ನೋಡ್ತಿದ್ದಾರೆ. ಹೀಗಿರುವಾಗ ನಿರ್ದೇಶಕ ತ್ರಿವಿಕ್ರಮ್ (Director Trivikram) ಕೂಡ ಪೂಜಾಗೆ ಒಂದಿಷ್ಟು ಸಲಹೆ ಕೊಟ್ಟಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ.
ನಟಿ ಪೂಜಾ ಹೆಗ್ಡೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಂತಹ ನಟಿ, ರಶ್ಮಿಕಾ (Rashmika) ಜೊತೆ ಪೈಪೋಟಿ ಕೊಟ್ಟವರಲ್ಲಿ ಪೂಜಾ ಕೂಡ ಒಬ್ಬರು. ಹೀಗಿರುವಾಗ ಕಳೆದ ವರ್ಷ ಪೂಜಾ ನಟಿಸಿರುವ ಬ್ಯಾಕ್ ಟು ಬ್ಯಾಕ್ ಚಿತ್ರಗಳು ನೆಲಕಚ್ಚಿದೆ. ತಮ್ಮ ವೃತ್ತಿ ಜೀವನಕ್ಕೆ ಬಿಗ್ ಬ್ರೇಕ್ಗಾಗಿ ಕಾಯ್ತಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ
ಪೂಜಾ ಸದ್ಯ ದಕ್ಷಿಣದ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಸತತ ಸೋಲುಗಳನ್ನು ಕಂಡಿರೋ ಪೂಜಾ ಹೆಗ್ಡೆ ಕೈಯಲ್ಲಿ ತೆಲುಗಿನ ಏಕೈಕ ಸಿನಿಮಾವಿದೆ. ಈಗಾಗಲೇ ಮಹೇಶ್ ಬಾಬು (Mahesh Babu) ಅಭಿನಯದ 28ನೇ ಸಿನಿಮಾಗೆ ಸಹಿ ಮಾಡಿರೋ ನಟಿ ಸಿನಿಮಾದಲ್ಲಿ ನಟಿಸೋಕೆ ಹೈದರಾಬಾದ್ಗೆ ಬಂದಿದ್ದಾರೆ. ಇನ್ನೇನು ಲ್ಯಾಂಡ್ ಆಗುತ್ತಿದ್ದಂತೆ ಜುಬಿಲಿ ಹಿಲ್ಸ್ನಲ್ಲಿರುವ ದೇವಿ ಟೆಂಪಲ್ಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
ಮಹೇಶ್ ಬಾಬು ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ಸಿನಿಮಾಗೆ ತ್ರಿವಿಕ್ರಮ್ (Trivikram) ಆಕ್ಷನ್ ಕಟ್ ಹೇಳುತ್ತಿರೋದು ಗೊತ್ತೇ ಇದೆ. ಇವರಿಗೂ ಸಿನಿಮಾ ಬಗ್ಗೆ ಭಯ ಇರೋದ್ರಿಂದ ಪೂಜಾ ಹೆಗ್ಡೆಗೆ ಟೆಂಪಲ್ ರನ್ ಮಾಡುವಂತೆ ಸಲಹೆಗಳನ್ನು ನೀಡಿದ್ದಾರಂತೆ. ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಸಲ್ಲಿಸುವಂತೆ ನಟಿಗೆ ನಿರ್ದೇಶಕರು ಸಲಹೆ ನೀಡಿದ್ದಾರಂತೆ. ಪೂಜಾ ಹೆಗ್ಡೆ ಕೂಡ ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನೋ ಮಾತು ಟಾಲಿವುಡ್ನಲ್ಲಿ ಓಡಾಡುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k