ವಿಜಯಪುರ: ಕಾಂಗ್ರೆಸ್ (Congress) ಪಕ್ಷವನ್ನು ಜನರು ನಂಬುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದ ನಿಡೋಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಗೆ ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ ಘೊಷಣೆ ಮಾಡಿದೆ. ಅವರು ಈಗ ಒಂದೊಂದು ಏರಿಯಾಗೆ ಒಂದೊಂದು ಪ್ರಣಾಳಿಕೆ ಮಾಡಿಕೊಂಡು ಹೊರಟಿದ್ದಾರೆ. 5 ವರ್ಷದ ಆಡಳಿತದಲ್ಲಿ ಏನು ಕೊಟ್ಟಿದ್ದೇವೆ, ಏನು ಕೊಡುತ್ತೇವೆ ಅನ್ನೋದನ್ನ ಹೇಳಬೇಕಲ್ಲ. ಪ್ರಣಾಳಿಕೆ ಮಾಡೋದು ಬೇರೆ. 5 ಮತ್ತು 2 ಕಾಂಗ್ರೆಸ್ ಪಕ್ಷದ ಏನು ಕೊಟ್ಟಿದೆ ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ (BJP) ರಾಜ್ಯದ ಅರ್ಥಿಕವಾಗಿ ಏನು ಹೊರೆ ಹೊರೆಸಿದ್ದಾರೆ, ಹದಗೆಡೆಸಿದ್ದಾರೆ ಅದನ್ನ ಸರಿ ಪಡಿಸೋದು ಹೇಗೆ ಅಂತಾ ಯೋಚಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರಿದರು. ಇದನ್ನೂ ಓದಿ: ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ
ಇಲ್ಲಿ ಘೋಷಣೆ ಮಾಡೋದು ಬೇರೆ. ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಕೊಡುವುದಾದರೆ 120 ವರ್ಷ ಕಾಂಗ್ರೆಸ್ ಪಕ್ಷ ಅಂತಾರೆ. ಬೇರೆ ಯಾವ ಪಕ್ಷಕ್ಕೂ ಅವರಿಗೆ ಇರುವಷ್ಟು ಅನುಭವ ಇಲ್ಲ. ಹಾಗಾದ್ರೆ ಆವಾಗ ಯಾಕೆ ಮಾಡಲಿಲ್ಲ. ಈಗೇಕೆ ಮಾಡ್ತಿದ್ದಾರೆ. ಹೀಗಾಗಿನೇ ಜನರು ಕಾಂಗ್ರೆಸ್ ಪಕ್ಷವನ್ನ ನಂಬುವ ಪರಿಸ್ಥಿತಿಯಲ್ಲಿಲ್ಲ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k