ಉಳುಮೆ ಮಾಡಲು ಬಂದಿದ್ದ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ!

Public TV
1 Min Read
DVG 3

ದಾವಣಗೆರೆ: ಬಡ ರೈತರೊಬ್ಬರ ಮೇಲೆ ಅರಣ್ಯ ಇಲಾಖೆಯ ಅಧಿಕಾರಗಳು ದೌರ್ಜನ್ಯ ನಡೆಸಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚಕಾರಕ್ಕಿ ಕಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಬಗರ್ ಹುಕುಂ ಜಮೀನಿನಲ್ಲಿ ಜಯ್ಯಪ್ಪ ಎಂಬ ರೈತರ ಮೇಲೆ ಹಲ್ಲೆ ನಡೆದಿದೆ.
DVG 4
ಜಯ್ಯಪ್ಪ ಅರಣ್ಯ ಪ್ರದೇಶದ ಪಕ್ಕದಲ್ಲಿ ಇದ್ದ ತಮ್ಮ 2 ಎಕರೆ ಭೂಮಿಯಲ್ಲಿ ಉಳುಮೆ ಮಾಡಲು ಮುಂದಾದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಜಯ್ಯಪ್ಪ 30 ವರ್ಷ ದಿಂದ ಉಳುಮೆ ಮಾಡುತ್ತಾ ಬಂದಿದ್ದರು. ಆದ್ರೆ ಇದೀಗ ತನ್ನ ಜಮೀನಿನಲ್ಲಿ ಉಳುಮೆ ಮಾಡಲು ಬಂದಿದ್ದ ವೇಳೆ ನಾಲ್ವರು ಅಧಿಕಾರಿಗಳಾದ ಷಡಕ್ಷರಪ್ಪ, ಶ್ರೀ ಶೈಲ, ಭೀಮಪ್ಪ ಹಾಗೂ ರವಿ ಎಂಬವರಿಂದ ಹಲ್ಲೆ ನಡೆದಿದೆ.

ಸದ್ಯ ಜಯ್ಯಪ್ಪ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

DVG 2

DVG 1

DVG 6

DVG 5

Share This Article
Leave a Comment

Leave a Reply

Your email address will not be published. Required fields are marked *