ಇಂದು ಡಾ. ವಿಷ್ಣುವರ್ಧನ್ 8ನೇ ಪುಣ್ಯಸ್ಮರಣೆ- ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

Public TV
1 Min Read
visnhuvardhan

ಬೆಂಗಳೂರು: ಚಂದನವನದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳನ್ನ ಅಗಲಿ ಇಂದಿಗೆ 8 ವರ್ಷಗಳು ಕಳೆದಿವೆ. ಇಂದು ಅವರ 8ನೇ ಪುಣ್ಯಸ್ಮರಣೆ ದಿನವಾಗಿದೆ.

ಡಾ.ವಿಷ್ಣುವರ್ಧನ್ ಮರೆಯಲಾಗದ ಮಾಣಿಕ್ಯವಾಗಿದ್ದು, 8ನೇ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನದ ಜೊತೆಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.

visnhuvardhan 3

ಬೆಳಗ್ಗೆಯೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದು, ವಿವಿಧ ಹೂವುಗಳಿಂದ ಸಮಾಧಿಯನ್ನು ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಭಾರತಿ ವಿಷ್ಟುವರ್ಧನ್ ತಮ್ಮ ನಿವಾಸದಲ್ಲೇ ಪೂಜೆ ಸಲ್ಲಿಸಲಿದ್ದಾರೆ. ವಿಷ್ಣುವರ್ಧನ್ 2009 ಡಿಸೆಂಬರ್ 30 ರಂದು ಅಭಿಮಾನಿಗಳನ್ನ ಅಗಲಿದ್ದರು.

ವಿಷ್ಣುವಧನ್ ನಾಗರಹಾವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಸುಮಾರು 200 ಚಿತ್ರಗಳನ್ನ ಮಾಡಿದ್ದು, ಕೊನೆಯ ಚಿತ್ರವಾಗಿ ಆಪ್ತರಕ್ಷಕ ಸಿನಿಮಾವನ್ನು ಮಾಡಿದ್ದರು. ಆದರೆ ಇಂದಿಗೂ ವಿಷ್ಣುವರ್ಧನ್ ಅಭಿಮಾನಿಗಳ ಮನಸ್ಸಿನಲ್ಲಿ ಚಿರಸ್ಮರಣಿಯವಾಗಿ ಉಳಿದಿದ್ದಾರೆ.

visnhuvardhan 2

visnhuvardhan 4

visnhuvardhan 5

visnhuvardhan 7

visnhuvardhan 8

visnhuvardhan 9

visnhuvardhan 10

visnhuvardhan 11

visnhuvardhan 12

visnhuvardhan 13

visnhuvardhan 14

visnhuvardhan 15

visnhuvardhan 1

Share This Article
Leave a Comment

Leave a Reply

Your email address will not be published. Required fields are marked *