ಸಿದ್ದರಾಮಯ್ಯ ನಮ್ಮ ನಾಯಕ, ರಾಜ್ಯಕ್ಕೆ ಅನ್ನದಾತ – ಡಿಕೆಶಿ ಗುಣಗಾನ

Public TV
2 Min Read
DK Shivakumar 2

ಚಾಮರಾಜನಗರ: ಸಿದ್ದರಾಮಯ್ಯ (Siddaramaiah) ನಮ್ಮ ನಾಯಕ, ಈ ರಾಜ್ಯಕ್ಕೆ ಅನ್ನದಾತ ಎಂದು ಹಾಡಿ ಹೊಗಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar), ಸಿದ್ದರಾಮಯ್ಯ ಅವರನ್ನ ಹೊಡೆದು ಹಾಕಿ ಎಂದಿರುವ ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

DK Shivakumar 1

ಚಾಮರಾಜನಗರ (Chamarajanagar) ಜಿಲ್ಲೆ ಹನೂರು ತಾಲೂಕಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಸೇವೆ ಮಾಡಿದ ಸಿದ್ದರಾಮಯ್ಯ ಅವರನ್ನ ಒಬ್ಬ ಮಂತ್ರಿ ಕೊಲೆ ಮಾಡಿ ಅಂತಾ ಹೇಳ್ತಿದ್ದಾರೆ. ಆ ಮಂತ್ರಿಯನ್ನ ಸರ್ಕಾರ ಇನ್ನೂ ಬಂಧಿಸಿಲ್ಲ. ಬೇರೆ ಯಾರಾದ್ರೂ ಅಂದಿದ್ರೆ ಸುಮ್ಮನೆ ಬಿಡ್ತಿದ್ರಾ? ಕೊಲೆ ಮಾಡಿ ಎಂದ ಮಂತ್ರಿನಾ ಕ್ಷಮಿಸಬೇಕಾ ಅಂತಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಜೋ ಬೈಡನ್ ಅಚ್ಚರಿ ಭೇಟಿ – ಭಾರೀ ಶಸ್ತ್ರಾಸ್ತ್ರ ನೆರವು ಘೋಷಿಸಿದ US ಅಧ್ಯಕ್ಷ

SV Raghavendra 3

ಟಿಪ್ಪುವನ್ನು ಯಾರೋ ಹುರಿಗೌಡ-ನಂಜೇಗೌಡ ಕೊಚ್ಚಿ ಕೊಲೆ ಮಾಡಿಬಿಟ್ಟರಂತೆ. ಅದೇ ರೀತಿ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಿ ಅಂತಾ ಆ ಮಂತ್ರಿ ಹೇಳಿದ್ದಾನೆ. ಸರ್ಕಾರ, ಹೋಮ್ ಮಿನಿಸ್ಟರ್, ಚೀಫ್ ಮಿನಿಸ್ಟರ್ ಏನ್ ಮಾಡ್ತಿದ್ದಾರೆ? ಸಿದ್ದರಾಮಯ್ಯ ರಾಜ್ಯಕ್ಕೆ ದೊಡ್ಡ ಆಸ್ತಿ. ಅಧಿಕಾರದ ಮತ್ತಿನಲ್ಲಿ ಅವರನ್ನ ಕೊಲೆ ಮಾಡಿ ಎಂದಿರುವ ಅವನೊಬ್ಬ ನೀಚ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿಯ ದುಷ್ಕರ್ಮಿಗಳು ಇನ್ನೂ ಮುಕ್ತವಾಗಿ ಓಡಾಡಿಕೊಂಡಿದ್ದಾರೆ – ಪಾಕ್ ನೆಲದಲ್ಲೇ ಜಾವೇದ್ ಅಖ್ತರ್ ಕಿಡಿ

Congress Programme

ಸರ್ಕಾರದಲ್ಲಿ ಹೋಮ್ ಮಿನಿಸ್ಟರ್, ಚೀಫ್ ಮಿನಿಸ್ಟರ್, ಮುಖ್ಯ ಕಾರ್ಯದರ್ಶಿ, ಡಿಜಿಪಿ ಏನ್ ಮಾಡ್ತಿದ್ದಾರೆ. ಆತನನ್ನ ಮಂತ್ರಿ ಸ್ಥಾನದಿಂದ ವಜಾ ಮಾಡಿ ಅಂತಾ ನಾನು ಹೇಳಲ್ಲ. ಆದ್ರೆ ಈ ನೆಲದ ಕಾನೂನು ಪಾಲಿಸಿ ಅಂತಾ ಒತ್ತಾಯಿಸುತ್ತೇನೆ. ಆತ ಎಲ್ಲಿ ಹೇಳಿದ್ದಾನೋ ಆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವತ್ತೆ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *