ಕಾರವಾರ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಕಳೆದ ಎರಡು ದಿನದಿಂದ ಧಾರ್ಮಿಕ ಕ್ಷೇತ್ರ ಪರ್ಯಟನೆ ಮಾಡುತಿದ್ದು, ಇಂದು ಗೋಕರ್ಣದ (Gokarna) ಮಹಾಬಲೇಶ್ವರ ದೇವಸ್ಥಾನ ಹಾಗೂ ಕಾಲಭೈರವೇಶ್ವರ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದ ಮುಖ್ಯಮಂತ್ರಿಯಾಗುವಂತೆ ಸಂಕಲ್ಪ ಮಾಡಿಕೊಂಡರು.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಮುಂಜಾನೆ ಆಗಮಿಸಿದ್ದ ಅವರು ಮೊದಲು ಪೂಜಾ ಸಂಕಲ್ಪ ನೆರವೇರಿಸಿ ನಂತರ ಮಹಾಬಲೇಶ್ವರನ ಆತ್ಮಲಿಂಗ ಸನ್ನಿಧಿಯಲ್ಲಿ ಪೂಜಾಕಾರ್ಯ ನೆರವೇರಿಸಿದರು. ಇದೇ ವೇಳೆ ಅರ್ಚಕರು ಮುಂದೆ ಮುಖ್ಯಮಂತ್ರಿಯಾಗುವಂತೆ ಸಂಕಲ್ಪ ಮಾಡಿಸಿದರು. ಇದನ್ನೂ ಓದಿ: ಸುಧಾಕರ್ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ
ಇದಾದ ನಂತರ ಅಧಿಕಾರ ಹಾಗೂ ನಾಯಕತ್ವ ಕೇಂದ್ರೀಕರಣಕ್ಕಾಗಿ ಕಾಲಭೈರವನ ಮೊರೆಹೋದ ಡಿಕೆಶಿ ಮುಂದೆ ಮುಖ್ಯಮಂತ್ರಿ ಹುದ್ದೆಗಾಗಿ ವಿಶೇಷ ಪೂಜೆ ನೆರವೇರಿಸಿದರು. ಇದನ್ನೂ ಓದಿ: ಗೋವಿಂದ ಕಾರಜೋಳಗೆ ಚಿತ್ರದುರ್ಗ ಬಿಜೆಪಿ ಟಿಕೆಟ್