ಬೆಂಗಳೂರು: ಡಿ.ಕೆ ಶಿವಕುಮಾರ್ (DK Shivakumar) ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಓಲಾ-ಊಬರ್ (Ola Uber) ಚಾಲಕರ ಸಂಘಟನೆ ಆಗ್ರಹಿಸಿದೆ.
ಡಿಕೆ ಶಿವಕುಮಾರ್ ಮನೆ ಮುಂದೆ ಡಿಕೆಶಿ ಸಿಎಂ, ಅವರ ಜೊತೆ ನಾವಿದ್ದೇವೆ ಅಂತಾ ಚಾಲಕರು ಬ್ಯಾನರ್ ಹಿಡಿದು ನಿಂತಿದ್ದಾರೆ. ಈ ವೇಳೆ ಮಾತನಾಡಿದ ಓಲಾ, ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷಾ, ಡಿಕೆ ಶಿವಕುಮಾರ್ ಅಂತಾ ಬಲಿಷ್ಟ ನಾಯಕರು ನಮಗೆ ಬೇಕು. ಎಲ್ಲಾ ನಾಯಕರನ್ನೂ ಬೆಂಬಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಡಿಕೆಶಿ ಚಾಲಕರ ಪರವಾಗಿ ನಿಂತವರು. ಹೀಗಾಗಿ ಅವರೇ ಸಿಎಂ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಜರಂಗದಳಕ್ಕೆ ಪಿಎಫ್ಐ ಹೋಲಿಕೆ – ಖರ್ಗೆಗೆ ಕೋರ್ಟ್ ಸಮನ್ಸ್
ಡಿಕೆಶಿ ಸಿಎಂ ಆಗಲಿ ಅಂತಾ ಮಲ್ಲಿಕಾರ್ಜುನ ಖರ್ಗೆ (Mallikarjun Kharge) , ಸಿದ್ದರಾಮಯ್ಯ (Siddaramaiah) ಹಾಗೂ ರಾಹುಲ್ ಗಾಂಧಿ (Rahul Gandhi) ಗೆ ಪತ್ರ ಬರೆದಿದ್ದೇವೆ. ಕೆಪಿಸಿಸಿ (KPCC) ಯಲ್ಲಿ ಚಾಲಕರಿಗಾಗಿಯೇ ಸಾರಿಗೆ ವಿಭಾಗ ತೆರೆದವರು. ಪ್ರಣಾಳಿಕೆಯಲ್ಲಿ ನಮ್ಮ ಪರವಾಗಿಯೂ ಘೋಷಿಸಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರು.