– ಪೇಜಾವರ ಮಠದಲ್ಲೂ ರಾಜಕೀಯ ಇದೆ
ಉಡುಪಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ನಟ ಪ್ರಕಾಶ್ ರೈ ಇಷ್ಟು ದಿನ ಬಿಜೆಪಿಯನ್ನು ಕ್ಯಾನ್ಸರ್ ಎನ್ನುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಕೂಡಾ ಕ್ಯಾನ್ಸರ್ ಬಂದಂತೆ ಕಾಣಿಸುತ್ತಿದೆ. ಹೀಗೆ ರೈ ಹೇಳುತ್ತಲೇ ಪ್ರಕಾಶ್ ರೈ ಮತ ವಿಭಜನೆಗೆ ಹೊರಟಿದ್ದಾರೆ ಎಂದು ದಿನೇಶ್ ಅಮಿನ್ ಮಟ್ಟು ಹೇಳಿದರು.
ಉಡುಪಿಯಲ್ಲಿ ಸಹಬಾಳ್ವೆ ಸಂಸ್ಥೆ ಆಯೋಜಿಸಿದ್ದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಮರೆತು ಮುಖವಾಡಗಳನ್ನು ಬಿಟ್ಟು ಬಿಡಿ. ಮುಖಗಳನ್ನು ನೋಡಿ ಮತ ನೀಡಿ ಎಂದು ಕರೆ ನೀಡಿದ ಅವರು, 6 ತಿಂಗಳ ಹಿಂದೆ ರೈ ಅವರು ಬಿಜೆಪಿಗೆ ಕ್ಯಾನ್ಸರ್ ಎನ್ನುತ್ತಿದ್ದರು. ಈಗ ಕಾಂಗ್ರೆಸನ್ನು ಕ್ಯಾನ್ಸರ್ ಎಂದು ಕರೆಯುತ್ತಿದ್ದಾರೆ. 6 ತಿಂಗಳ ಅವಧಿಯಲ್ಲಿ ಈ ಪಕ್ಷಕ್ಕೆ ಏನಾಯ್ತು ಅಥವಾ ಅವರ ರೈ ಅವರ ದೃಷ್ಟಿಗೆ ಏನಾಯ್ತು ಎಂಬುವುದು ನನಗೆ ತಿಳಿದಿಲ್ಲ ಎಂದರು.
ಇದೇ ವೇಳೆ ಪೇಜಾವರ ಶ್ರೀಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅವರು, ಉಡುಪಿ ಕೃಷ್ಣ ಮಠದಲ್ಲೂ ರಾಜಕೀಯ ಇದೆ. ಪೇಜಾವರ ಸ್ವಾಮಿಗಳು ಹಿಂದೂ ಯಾರು ಅಂತ ಹೇಳಬೇಕು. ಬಿಜೆಪಿ ಶಾಸಕ ರಘುಪತಿ ಭಟ್ ನಿಜವಾದ ಹಿಂದೂವೋ? ಅಥವಾ ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಿಂದೂವಾ ಎಂದು ಪೇಜಾವರ ಶ್ರೀಗಳು ಹೇಳಬೇಕು. ಒಂದು ಪಕ್ಷದ ಪರ ಬೆಂಬಲ ನೀಡುವ ಮೂಲಕ ಹಿಂದೂಗಳ ಪರ ಅಂತ ಧರ್ಮ ದ್ರೋಹ ಮಾಡ ಬೇಡಿ ಎಂದರು. ಇದನ್ನು ಓದಿ: ನಿಮ್ಮ ಕ್ಷೇತ್ರದ ಮೇಲೆ ನಿಮಗೆ ನಂಬಿಕೆ ಇಲ್ವಾ: ಮೋದಿ, ರಾಹುಲ್ಗೆ ಪ್ರಕಾಶ್ ರೈ ಟಾಂಗ್