ಸಿಎಂ ಸೂಚನೆ ಪಾಲನೆ – ಆಂಜನೇಯ ದೇವಾಲಯಕ್ಕೆ ಉಡುಗೊರೆ ಸಮರ್ಪಣೆ

Public TV
1 Min Read
silver lining vijayapura Vizhjugauda Patil 3

ವಿಜಯಪುರ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಬೆಳ್ಳಿ ಗದೆಯನ್ನು ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ನಿಗಮ ಅಧ್ಯಕ್ಷ ವಿಜ್ಜುಗೌಡಾ ಪಾಟೀಲ್ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ.

silver lining vijayapura Vizhjugauda Patil 2

ಜಿಲ್ಲೆಯ ವಿಜಯಪುರ, ಬಬಲೇಶ್ವರ, ಸಿಂದಗಿ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಇದೇ ವೇಳೆ ಬೊಮ್ಮಾಯಿ ಅವರಿಗೆ ವಿಜ್ಜುಗೌಡಾ ಪಾಟೀಲ್ ಅವರು ಬೆಳ್ಳಿಯ ಗದೆ ಉಡುಗೊರೆ ನೀಡಿದ್ದರು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

c m bommai 1

ಬೊಮ್ಮಾಯಿ ಅವರು, ನಾನು ಯಾವುದೇ ಕಾರ್ಯಕ್ರಮದಲ್ಲಿ ನೀಡಿದ ಬೆಳ್ಳಿಯ ಉಡುಗೊರೆಯನ್ನು ಕೊಂಡೊಯ್ಯೋಲ್ಲ. ಅದಕ್ಕೆ ಇದನ್ನು ಯಾವುದಾದರು ಆಂಜನೇಯ ದೇವಸ್ಥಾನಕ್ಕೆ ನೀಡಿ ಎಂದು ಸೂಚಿಸಿದ್ದರು.

silver lining vijayapura Vizhjugauda Patil

ಸಿಎಂ ಸೂಚನೆಯನ್ನ ಚಾಚು ತಪ್ಪದೆ ವಿಜ್ಜುಗೌಡಾ ಪಾಟೀಲ್ ಅವರು ಪಾಲಿಸಿದ್ದು, ಆ ಗದೆಯನ್ನು ವಿಜಯಪುರ ನಗರದ ಮದಲಾ ಮಾರುತಿ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಇದನ್ನೂ ಓದಿ: ಹಾಡಿನ ಚಿತ್ರೀಕರಣದ ವೇಳೆ ಗಾಯಕಿಯ ಮುಖಕ್ಕೆ ಕಚ್ಚಿದ ಹಾವು!

silver lining vijayapura Vizhjugauda Patil 1

ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಭೀಮಾಶಂಕರ ಹದನೂರ, ವಿಜಯ ಜೋಶಿ, ವಿನಾಯಕ್ ದಹಿಂದೆ, ಶಾಶ್ವತಗೌಡ ಪಾಟೀಲ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *