ಮದುವೆ ಆಗುತ್ತಿಲ್ಲವೇ? ದಾಂಪತ್ಯ ಕಲಹವೇ? – ದೋಷ ನಿವಾರಣೆಗೆ ಸುಲಭ ಪರಿಹಾರ

Public TV
1 Min Read
Marriage FF

ಕೆಲವರಿಗೆ ಮದುವೆ ಆಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದರೇ, ಹಲವರಿಗೆ ದಾಂಪತ್ಯ ಜೀವನ ಕಲಹದಿಂದಲೇ ಕೂಡಿರುತ್ತದೆ. ದಾಂಪತ್ಯಗಳಲ್ಲಿ ಕಲಹಗಳಿದ್ದರೆ ಅದಕ್ಕೆ ದೋಷಗಳೇ ಕಾರಣ ಎಂದು ಹೇಳಲಾಗುತ್ತಿದೆ. ಜೋತಿಷ್ಯದಲ್ಲಿ ಇದನ್ನು ಮಾಂಗಲ್ಯ ದೋಷ ಎಂದು ಕರೆಯಲಾಗುತ್ತದೆ.

ವಧು-ವರರಿಗೆ ವಿವಾಹ ಮಾಡುವ ಸಂದರ್ಭದಲ್ಲಿ ಮಾಂಗಲ್ಯ ದೋಷ ಇದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಬೇಕು. ಮಾಂಗಲ್ಯಕ್ಕೆ ಅಧಿಪತಿ ಆಗಿದ್ದವನ ಬಲಗಳು ಸಂಪೂರ್ಣವಾಗಿರಬೇಕು. ತಾರಾ, ಲಗ್ನ ಮತ್ತು ಜಾತಕಕ್ಕೆ ಮೂರು ಬಲಗಳು ವ್ಯವಸ್ಥಿತವಾಗಿ ಕೂಡಿದಾಗ ಮಾತ್ರ ವಿವಾಹ ಸಂಪೂರ್ಣವಾಗುತ್ತದೆ. ಕೆಲವರಿಗೆ ಕುಜ, ರಾಹು ಸಮಯದಲ್ಲಿಯೂ ಮದುವೆ ಮಾಡುತ್ತಾರೆ. ಇನ್ನು ಕೆಲವರಿಗೆ ಗುರು ಬಲವಿಲ್ಲದಿದ್ದರೂ ಮದುವೆ ಮಾಡುವುದರಿಂದ ದಾಂಪತ್ಯದಲ್ಲಿ ಕಲಹ ಉಂಟಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

Mangalya

ಮದುವೆ (ಮಾಂಗಲ್ಯ ಧಾರಣೆ) ಸಮಯವನ್ನು ಕುಜನ ಬಲ ನೋಡಿಕೊಂಡು ನಿಗದಿ ಮಾಡಲಾಗುತ್ತದೆ. ವ್ಯಕ್ತಿಗೆ ಗುರು ಬಲ, ಕುಜ ಬಲ ಇಲ್ಲ ಅಂದ್ರೆ ಮದುವೆ ನಿಧಾನವಾಗುತ್ತದೆ. ಈ ಎರಡು ಬಲಗಳು ಕೂಡಿದಾಗ ಮದುವೆ ನಿಶ್ಚಯವಾಗುತ್ತದೆ. ಈ ಬಲಗಳು ಇಲ್ಲದಿದ್ದರೆ ನಾನಾ ಕಾರಣಗಳಿಂದ ಮದುವೆ ಮುಂದೆ ಹೋಗುತ್ತಾ ಹೋಗುತ್ತದೆ.

ಪರಿಹಾರ: ಪ್ರಾಪ್ತ ವಯಸ್ಸಿನಲ್ಲಿ ಮದುವೆ ಆಗಿಲ್ಲ ಅಂದ್ರೆ ನಿಮಗೆ ಮಾಂಗಲ್ಯ ಬಲ ಬಂದಿಲ್ಲ ಎಂದರ್ಥ. ಮಾಂಗಲ್ಯ ಬಲ ಬರಬೇಕೆಂದ್ರೆ ಪ್ರತಿ ಮಂಗಳವಾರ ನಿಮ್ಮ ಶಕ್ತಿಗನುಸಾರವಾಗಿ ಅಡಕ ಧಾನ್ಯ (ತೊಗರಿ ಬೇಳೆ)ಯನ್ನು ಲಕ್ಷ್ಮಿ ನಾರಾಯಣನ ದೇಗುಲಕ್ಕೆ ನೀಡಿ ದೀರ್ಘ ದಂಡ ನಮಸ್ಕಾರ ಹಾಕಬೇಕು. ಬೆಟ್ಟದ ಮೇಲಿರುವ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳಿ ಪಂಚಾಮೃತ ಅಭಿಷೇಕ ಸೇರಿದಂತೆ ಇನ್ನಿತರ ಸೇವೆಗಳನ್ನು ದೇವರಿಗೆ ಸಲ್ಲಿಸುವುದರಿಂದ ಮಾಂಗಲ್ಯ ಬಲ ನಿಮ್ಮದಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *