ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಕೃಷ್ಣ ಪಕ್ಷ,
ಚತುರ್ಥಿ, ಗುರುವಾರ,
ಜೇಷ್ಠ ನಕ್ಷತ್ರ
ರಾಹುಕಾಲ: 01:56 ರಿಂದ 03:29
ಗುಳಿಕಕಾಲ: 09:16 ರಿಂದ 10:49
ಯಮಗಂಡಕಾಲ: 06:09 ರಿಂದ 07:43
ಮೇಷ: ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಬಂಧುಗಳಿಂದ ನಷ್ಟ.
ವೃಷಭ: ಕಾನೂನುಬಾಹಿರ ಚಟುವಟಿಕೆ, ಧನ ಸಂಪಾದನೆ, ಆಸ್ತಿ ವಿಚಾರದಲ್ಲಿ ತೊಂದರೆ, ಕೆಲಸ ಕಾರ್ಯಗಳಲ್ಲಿ ನಿಧಾನ ಪ್ರಗತಿ.
ಮಿಥುನ: ಸಾಲ ಮಾಡುವ ಪರಿಸ್ಥಿತಿ, ಕೆಲಸ ಕಾರ್ಯಗಳಿಗೆ ಅಡೆತಡೆ, ಕೆಟ್ಟ ಮತ್ತು ದುರಾಲೋಚನೆಗಳು.
ಕಟಕ: ನಿದ್ರಾಭಂಗ, ದಾಂಪತ್ಯದಲ್ಲಿ ಕಲಹ, ಅಧಿಕ ಖರ್ಚು.
ಸಿಂಹ: ಸಾಲದಿಂದ ಮುಕ್ತಿ ಹೊಂದುವ ಆಲೋಚನೆ, ಮಾನಸಿಕ ನೋವು, ಮನೆಯ ವಾತಾವರಣ ಕಲುಷಿತ.
ಕನ್ಯಾ: ಸಹೋದರಿಯಿಂದ ಲಾಭ, ಮಿತ್ರರಿಂದ ಸಹಕಾರ, ಪಾಲುದಾರಿಕೆಯಲ್ಲಿ ನಷ್ಟ, ಅಧಿಕಾರಿಗಳಿಂದ ಕಷ್ಟ.
ತುಲಾ: ಉದ್ಯೋಗದಿಂದ ಅನುಕೂಲ. ಕೆಲಸ ಕಾರ್ಯ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ ವಿಚಾರವಾಗಿ ವಾಗ್ವಾದ.
ವೃಶ್ಚಿಕ: ವಂಶಪಾರಂಪರ್ಯ ವೃತ್ತಿಪರರಿಗೆ ಅನುಕೂಲ, ಮಕ್ಕಳಿಗೋಸ್ಕರ ಪ್ರಯಾಣ, ಬಂಧುಗಳು ಆಗಮನ.
ಧನಸ್ಸು: ನೆಮ್ಮದಿ ಭಂಗ, ಆರ್ಥಿಕ ದುಸ್ಥಿತಿ, ಉದ್ಯೋಗ ದೊರಕುವ ಭರವಸೆ.
ಮಕರ: ಮಿತ್ರರೇ ಶತ್ರುಗಳಾಗುವರು, ವ್ಯಾಪಾರದಲ್ಲಿ ಅನುಕೂಲ, ಪ್ರಯಾಣದಲ್ಲಿ ಗೊಂದಲ.
ಕುಂಭ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮಕ್ಕಳಿಂದ ಅನುಕೂಲ, ಆದಾಯ ಮತ್ತು ಖರ್ಚು ಸಮ ಪ್ರಮಾಣ.
ಮೀನ: ತಂದೆಯಿಂದ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ದೂರ ಆಗುವ ಮನಸ್ಸು.