Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಕುರಿ ಕಾಯುತ್ತಿದ್ದವನು 2 ಬಾರಿ ಸಿಎಂ ಆದ್ನಲ್ಲಾ ಅಂತ ಬಿಜೆಪಿಗೆ ಹೊಟ್ಟೆ ಉರಿ: ಸಿಎಂ ಕೆಂಡಾಮಂಡಲ

Public TV
Last updated: October 5, 2024 7:00 pm
Public TV
Share
3 Min Read
Siddaramaiah 4
SHARE

– ಪ್ರತಿದಿನ ರಾಜೀನಾಮೆ ಕೊಡಿ ಅಂತ ಕೇಳಿ ಕೇಳಿ ಬೇಜಾರಾಗಿದೆ

ರಾಯಚೂರು: ಹಿಂದುಳಿದ ಜಾತಿಗೆ ಸೇರಿದವನು, ಕುರಿ ಕಾಯುತ್ತಿದ್ದವನು 2 ಬಾರಿ ಸಿಎಂ ಆದನಲ್ಲಾ ಅಂತ ಬಿಜೆಪಿಗೆ (BJP) ಹೊಟ್ಟೆ ಉರಿ ಸಿಎಂ ಸಿದ್ದರಾಮಯ್ಯ (Siddaramaiah) ಲೇವಡಿ ಮಾಡಿದ್ದಾರೆ.

ರಾಯಚೂರಿನ (Raichur) ಮಾನ್ವಿಯಲ್ಲಿ ನಡೆದ ಕಾಂಗ್ರೆಸ್‌ ʻಸ್ವಾಭಿಮಾನಿʼ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ-ಜೆಡಿಎಸ್‌ ಮೈತ್ರಿಕೂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾಷಣ ಆರಂಭಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಶಿಳ್ಳೆ, ಚಪ್ಪಾಳೆ ಸಂಭ್ರಮ ಮುಗಿಲು ಮುಟ್ಟಿತ್ತು. ಸಿಎಂ ʻಈ ಸ್ವಾಭಿಮಾʼ ಎನ್ನುತ್ತಿದ್ದಂತೆ ಕೇಕೆ, ಶಿಳ್ಳೆ ಹಾಕುವ ಮೂಲಕ ಜೈಕಾರ ಕೂಗಿದರು.

ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ, ವಿರೋಧ ಪಕ್ಷದವರು ಸುಮ್ ಸುಮ್ಮನೆ ಟೀಕೆ ಮಾಡ್ತಾರೆ. ಗ್ಯಾರಂಟಿ ಕೊಟ್ಟ ಮೇಲೆ ಖಜಾನೆ ಖಾಲಿಯಾಗಿದೆ ಅಂತ ಹೇಳ್ತಾರೆ. ಇದು ಎಂತಾ ಹಸಿ ಸುಳ್ಳು, ಖಜಾನೆ ಖಾಲಿಯಾಗಿದ್ರೆ ಇಲ್ಲಿ ಕೋಟ್ಯಂತರ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲು ಆಗ್ತಿತ್ತಾ ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ – ಪ್ರತಿದಿನ 1,000 ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ

ಬಿಜೆಪಿ-ಜೆಡಿಎಸ್‌ನವರು ನಾನು 2ನೇ ಬಾರಿ ಸಿಎಂ ಆದ ಮೇಲೆ ಸುಳ್ಳು ಆರೋಪ ಮಾಡಲು ಶುರು ಮಾಡಿದ್ದಾರೆ. ಅದಕ್ಕೆ ಈ ಸ್ವಾಭಿಮಾನಿ ಸಭೆ ಮಾಡಿರುವುದು. ಇದರ ಮೂಲಕ, ನಿಮ್ಮ ಮೂಲಕ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ದೇವರಾಜು ಅರಸು ಬಳಿಕ 5 ವರ್ಷ ಅಧಿಕಾರ ಪೂರ್ಣಗೊಳಿಸಿದ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ. 5 ವರ್ಷದ ಹಲವು ಯೋಜನೆ ಜಾರಿಗೆ ಮಾಡಿದ್ದೇನೆ. ಯಾರೊಬ್ಬರು ಇನ್ನೊಬ್ಬರ ಮನೆ ಮುಂದೆ ಹೋಗಿ ಕೈ ಒಡ್ಡಬಾರದು, ಭಿಕ್ಷುಕರು ಈ ರಾಜ್ಯದಲ್ಲಿ ಇರಬಾರದು ಅಂತ ಅನ್ನಭಾಗ್ಯ ಯೋಜನೆ ಮಾಡಿದೆವು ಎಂದಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ರು ಆಗ ಏನೂ ಮಾಡಲಿಲ್ಲ. 1 ವರ್ಷ 2 ತಿಂಗಳಲ್ಲಿ ಏನೂ ಕೆಲಸ ಮಾಡಲಿಲ್ಲ. ʻಕೊಟ್ಟ ಕುದುರೆ ಏರದವನು ವೀರನೂ ಅಲ್ಲಾ ಶೂರನೂ ಅಲ್ಲಾʼ ಎಂದು ವ್ಯಂಗ್ಯವಾಡಿದ ಸಿಎಂ, 17 ಜನ ಶಾಸಕರನ್ನ ಬಿಜೆಪಿಯವರು ಕೊಂಡುಕೊಂಡು ಸರ್ಕಾರ ಮಾಡಿದ್ರು. ಒಬ್ಬೊಬ್ಬರಿಗೆ 25 ಲಕ್ಷ ರೂ. ಖರ್ಚು ಮಾಡಿದರು. ಯಡಿಯೂರಪ್ಪ ಸಿಎಂ ಆದ್ರೂ, ಬೊಮ್ಮಾಯಿ ಸಿಎಂ ಆದ್ರೂ ಏನೂ ಮಾಡಲಿಲ್ಲ ಬರೀ ಲೂಟಿ ಮಾಡಿದ್ರು. ನಂತ್ರ ಜನ ನೀವು ನಮಗೆ ಆಶಿರ್ವಾದ ಮಾಡಿದ್ರಿ. ಬಿಜೆಪಿ ,ಜೆಡಿಎಸ್‌ಗೆ ಯಾವಾಗಲೂ ಜನ ಬೆಂಬಲ ಆಶಿರ್ವಾದ ಇರಲಿಲ್ಲ. ನಾವು ಗೆದ್ದ ಮೇಲೆ 5 ಗ್ಯಾರೆಂಟಿ ಕೊಡ್ತಿವಿ ಅಂತ ಹೇಳಿದ್ದೇವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಬೊಬ್ಬರಿದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಕೇಂದ್ರ ಸಚಿವರಾದ್ರೂ ರಾಜ್ಯಕ್ಕೆ ಪ್ರಯೋಜನ ಆಗ್ತಿಲ್ಲ: ಕೃಷ್ಣಬೈರೇಗೌಡ ಟಕ್ಕರ್‌

ನಮ್ಮ ಸರ್ಕಾರ ಬಡವರಿಗೆ ಕಾರ್ಯಕ್ರಮ ಕೊಡುತ್ತಿರುವುದು ಬಿಜೆಪಿಗೆ ತಡೆದುಕೊಳ್ಳಲು ಆಗ್ತಿಲ್ಲ. ಮಹಿಳೆಯರು, ದಲಿತರಿಗೆ ಶಕ್ತಿ ತುಂಬುತ್ತಿದ್ದೇವೆ ಅದು ತಡೆದುಕೊಳ್ಳಲು ಆಗ್ತಿಲ್ಲ. ನನ್ನ ಹೆಂಡ್ತಿ ಎಂದೂ ರಾಜಕೀಯಕ್ಕೆ ಬಂದವಳಲ್ಲಾ, ಅಂತಹವಳನ್ನ ಇವತ್ತು ಬೀದಿಗೆ ತಂದಿದ್ದೀರಲ್ಲಾ, ಹೊರಗಡೆ ತಂದಿದ್ದೀರಲ್ಲಾ, ನಾನು ಏನ್ ತಪ್ಪು ಮಾಡಿದ್ದೇನೆ ಏನೂ ತಪ್ಪು ಮಾಡದಿದ್ದರೂ. ರಾಜಕೀಯವಾಗಿ ಕಪ್ಪು ಚುಕ್ಕೆ ಇಡಬೇಕು ಅಂತ ಇದನ್ನ ಮಾಡುತ್ತಿದ್ದಾರೆ. ನಾನು ಹಿಂದುಳಿದ ಜಾತಿಗೆ ಸೇರಿದವನು ಅನ್ನೋದೇ ಇದಕ್ಕೆ ಕಾರಣ. ಕುರಿ ಕಾಯುತ್ತಿದ್ದವನು 2 ಬಾರಿ ಸಿಎಂ ಆದನಲ್ಲಾ ಅಂತ ಹೊಟ್ಟೆಉರಿ. ಯಡಿಯೂರಪ್ಪ, ಅಶೋಕ್, ವಿಜಯಯೇಂದ್ರ, ಕುಮಾರಸ್ವಾಮಿಗೆ ಹೊಟ್ಟೆಉರಿ. ಇದನ್ನ ಜನ ನೀವು ಸಹಿಕೊಳ್ಳುತ್ತೀರಾ? ಸಮಸಮಾಜದ ಯೋಚನೆ ಅವರ ಪ್ರಕಾರ ನಾನು ಮಾಡಿದ ತಪ್ಪು ಎಂದು ತಿವಿದಿದ್ದಾರೆ.

ಯಾವುದೇ ಕಾರಣ ಇಲ್ಲದಿದ್ದರೂ ಪ್ರತಿದಿನ ರಾಜೀನಾಮೆ ಕೊಡಿ… ರಾಜೀನಾಮೆ ಕೊಡಿ… ರಾಜೀನಾಮೆ ಕೊಡಿ… ಅಂತ ಕೇಳಿ ಬೇಜಾರಾಗಿದೆ. ಆದ್ರೆ ನಿಮಗಾಗಿ ನನ್ನ ಹೋರಾಟ ಮುಂದುವರೆಸುತ್ತೇನೆ. ನಾನು ಹೆದರಿ ಓಡುವುದಿಲ್ಲ, ಯಾಕಂದ್ರೆ ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲಾ ನ್ಯಾಯಾಲಯಕ್ಕಿಂತಲೂ ಆತ್ಮಸಾಕ್ಷಿ ಮೇಲೆ ಇದೆ ಎನ್ನತ್ತಾ ಮತ್ತೊಮ್ಮೆ ಸಿಎಂ ಆತ್ಮಸಾಕ್ಷಿ ಹೇಳಿಕೆ ಪುನರುಚ್ಚರಿಸಿದರು. ಇದನ್ನೂ ಓದಿ: ರಾಜ್ಯದ ರಾಜಕೀಯ ಬೆಳವಣಿಗೆಗಳು ಸರಿಯಲ್ಲ, ಹೀಗೆ ಮುಂದುವರಿದ್ರೆ ಜನ ಕಲ್ಲಲ್ಲಿ ಹೊಡೀತಾರೆ: ಡಿ.ಕೆ.ಸುರೇಶ್

TAGGED:bjpcongressraichursiddaramaiahSwabhimani Samaveshaಕಾಂಗ್ರೆಸ್ಬಿಜೆಪಿರಾಯಚೂರುಸಿದ್ದರಾಮಯ್ಯಸ್ವಾಭಿಮಾನಿ ಸಮಾವೇಶ
Share This Article
Facebook Whatsapp Whatsapp Telegram

You Might Also Like

05
Districts

ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

Public TV
By Public TV
4 hours ago
Iran Israel
Latest

ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

Public TV
By Public TV
4 hours ago
allu arjun received gaddar film award as best actor for pushpa 2 movie 2
Cinema

ಸಿಎಂ ರೇವಂತ್ ರೆಡ್ಡಿ ಕೈಯಿಂದ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್‌

Public TV
By Public TV
4 hours ago
Honeymoon Murder
Crime

ಪತಿ ಕೊಲೆ ಬಳಿಕ ಇಂದೋರ್‌ನ ಫ್ಲ್ಯಾಟ್‌ನಲ್ಲಿ ವಾಸವಿದ್ದ ಹನಿಮೂನ್ ಹಂತಕಿ

Public TV
By Public TV
5 hours ago
11A Seat
Latest

ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

Public TV
By Public TV
5 hours ago
Fire Accident Dubai UAE
Latest

ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?