ಅಯ್ಯಪ್ಪ ಮಾಲೆ ಧರಿಸಿದ ಸ್ಯಾಂಡಲ್‍ವುಡ್ ಚಕ್ರವರ್ತಿ ದರ್ಶನ್

Public TV
1 Min Read
darshan

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮಾಲಾಧಾರಿಯಾಗಿದ್ದಾರೆ. ಕಳೆದ ಆರೇಳು ವರ್ಷಗಳಿಂದ ನಟ ದರ್ಶನ್ ಶಬರಿಮಲೆಗೆ ಹೋಗುತ್ತಿದ್ದು ಪ್ರತಿ ವರ್ಷವೂ ದರ್ಶನ್ ಶ್ರೀರಾಮಪುರ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾಲೆ ಹಾಕಿ, ಒಂದು ವಾರಗಳ ಕಾಲ ಮಾಲಾಧಾರಿಯಾಗಿದ್ದು ನಂತರ ಶಬರಿಮಲೆಗೆ ತೆರಳೋದು ವಾಡಿಕೆ.

darshan 3

ಇಂದು ಬೆಳಗ್ಗೆ 7.30ರ ವೇಳೆಗೆ ದರ್ಶನ್, ಶ್ರೀರಾಮಪುರದ ಅಯ್ಯಪ್ಪಸ್ವಾಮಿ ಮಂದಿರಕ್ಕೆ ತೆರಳಿ ಪೂಜೆ ಮಾಡಿಸಿ ಮಾಲೆ ಧರಿಸಿದ್ರು. ಈ ಬಾರಿ ಸುಮಾರು 35 ಜನರ ತಂಡ ದರ್ಶನ್ ಜೊತೆ ಶಬರಿಮಲೆಗೆ ತೆರಳುತ್ತಿದೆ.

darshan 4

ದರ್ಶನ್ ಆಪ್ತರು, ಸಿನಿಮಾ ಸಹೋದ್ಯೋಗಿಗಳು ಸೇರಿದಂತೆ ಅನೇಕರು ದರ್ಶನ್ ಜೊತೆಯಲ್ಲಿರ್ತಾರೆ. ದರ್ಶನ್ ಸಹೋದರ ದಿನಕರ್, ನಿರ್ದೇಶಕ ಹೆಚ್ ವಾಸು, ನಿರ್ದೇಶಕ ಶಿವಮಣಿ, ಎಂಡಿ ಶ್ರೀಧರ್ ಸೇರಿದಂತೆ ಅನೇಕರು ದರ್ಶನ್ ಜೊತೆ ಇಂದು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ರು. ನಿರ್ದೇಶಕ ಎಂ ಡಿ ಶ್ರೀಧರ್ ಮಗ ಈ ಬಾರಿ ಕನ್ನಿಸ್ವಾಮಿಯಾಗಿ ಹೋಗುತ್ತಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

darshan 5

ಏಪ್ರಿಲ್ 6 ರಂದು ಇರುಮುಡಿ ಪೂಜೆ ನಡೆಸಿ ಅಂದೇ ಶಬರಿಮಲೆಗೆ ದರ್ಶನ್ ಪ್ರಯಾಣ ಬೆಳೆಸಲಿದ್ದಾರೆ. ಏಪ್ರಿಲ್ 8ರ ಮುಂಜಾನೆ ವಾಪಸ್ಸಾಗಲಿದ್ದಾರೆ.

darshan 2 darshan 1

Share This Article
Leave a Comment

Leave a Reply

Your email address will not be published. Required fields are marked *