ನವದೆಹಲಿ: ಎಂಟು ತಿಂಗಳ ಹಸುಗೂಸಿನ ಮೇಲೆ ಕಾರು ಹರಿದ ಘಟನೆ ನೈಋತ್ಯ ದೆಹಲಿಯ ದ್ವಾರಕಾದ ನೇತಾಜಿ ಸುಭಾಶ್ ತಂತ್ರಜ್ಞಾನ ವಿಶ್ವವಿದ್ಯಾಯ(ಎನ್ಎಸ್ಐಟಿ)ದ ಕ್ಯಾಂಪಸ್ನಲ್ಲಿ ನಡೆದಿದೆ.
ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರು ಮಗುವಿನ ಮೇಲೆ ಕಾರು ಓಡಿಸಿದ್ದು, ವೆಂಕಟೇಶ್ವರ ಆಸ್ಪತ್ರೆಯಿಂದ ದ್ವಾರಕಾ ನಾರ್ತ್ನಲ್ಲಿನ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ಘಟನೆ ಕುರಿತು ನಮಗೆ ಮಾಹಿತಿ ನೀಡಿದ್ದಾರೆ. 8 ತಿಂಗಳ ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಇನ್ನೂ ಯಾರೂ ದೂರು ನಮಗೆ ನೀಡಿಲ್ಲ. ಘಟನೆ ಸೆಪ್ಟೆಂಬರ್ 13ರಂದು ಸಂಭವಿಸಿದೆ ಎಂದು ದ್ವಾರಕಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 9.30ರ ಹೊತ್ತಿಗೆ ಎಸ್ಎಸ್ಐಟಿ ಕ್ಯಾಂಟೀನ್ ಬಳಿ ಈ ಘಟನೆ ಸಂಭವಿಸಿದೆ ಎಂದು ಮಗುವಿನ ತಾಯಿ ತಿಳಿಸಿದ್ದಾರೆ. ಮಗುವಿನ ಶವವನ್ನು ಶುಕ್ರವಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಇನ್ನೂ ವರದಿ ಬಂದಿಲ್ಲ. ಪೋಷಕರು ಹಾಗೂ ಇತರ ಸಂಬಂಧಿಕರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಆದರೆ ಕಾಲೇಜು ನೌಕರ ಮಗುವಿನ ಮೇಲೆ ಕಾರು ಓಡಿಸಿದ್ದಾನೆ ಎಂಬ ಆರೋಪವನ್ನು ಪೋಷಕರು ನಿರಾಕರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚಲಾಗುತ್ತಿದೆ. ಎಂಟು ತಿಂಗಳ ಮಗು ರಸ್ತೆಗೆ ಹೇಗೆ ಬಂತು ಎಂಬುದರ ಕುರಿತು ಸಹ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.