ನವದೆಹಲಿ: ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಪ್ರತಿಭಟನೆ ಕಾವು ಹೆಚ್ಚಾಗಿದೆ. ಕಳೆದ ಶುಕ್ರವಾರದಿಂದ ಪ್ರತಿಭಟನೆಗಳು ಆರಂಭವಾಗಿದ್ದು ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ.
ದೆಹಲಿಯಲ್ಲಿ ಇಂದು ಕೆಂಪುಕೋಟೆ, ಮಂಡಿ ಹೌಸ್, ಜಂತರ್ ಮಂತರ್ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದೆ. ಪ್ರತಿಭಟನೆಗೆ ನಿನ್ನೆಯೇ ಅವಕಾಶ ಕೇಳಲಾಗಿತ್ತು ಪ್ರತಿಭಟನೆ ಅವಕಾಶ ನಿರಾಕರಿಸಿದ್ದ ದೆಹಲಿ ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದರು.
Delhi CM Arvind Kejriwal on being asked about protests over #CitizenshipAct: Today, law and order situation in the country is deteriorating. There is a fear among all citizens today. I appeal to the central government to not bring this law but give employment to the youth. pic.twitter.com/bxQQDCDtde
— ANI (@ANI) December 19, 2019
ವಿರೋಧ ನಡುವೆ ಪ್ರತಿಭಟನೆ ನಡೆಸಿದ್ದ ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್, ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಮುಖಂಡ ಉಮರ್ ಖಾಲಿದ್, ಎಡ ಪಕ್ಷದ ನಾಯಕರು ಹಾಗೂ 100 ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಪ್ರತಿಭಟನೆ ಕಾವು ಪಡೆದುಕೊಳ್ಳುತ್ತಿದ್ದಂತೆ ದೆಹಲಿಯ 6 ಕಡೆ ಏರ್ಟೆಲ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಮುಸ್ತಫಾಬಾದ್, ಜಫರಾಬಾದ್, ಜಾಮಿಯಾ ನಗರ್, ಶಾಹೀನಾ ಬಾದ್, ಮಂಡಿ ಹೌಸ್, ಭಾವನ್ ಗಳಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಮಂಡಿ ಹೌಸ್, ಕೆಂಪು ಕೋಟೆಯಲ್ಲಿ 144 ಸೆಕ್ಷನ್ ಜಾರಿ ಮಾಡಿದೆ.
Delhi: Congress leader Sandeep Dikshit detained by police at Mandi House. He says, "I was not allowed to go to Red Fort (for protest), so, I came to Mandi House". #CitizenshipAct pic.twitter.com/QIiiMRXfNg
— ANI (@ANI) December 19, 2019
ಸೆಂಟ್ರಲ್ ಸೆಕ್ರೆಟರಿ, ಕೆಂಪು ಕೋಟೆ, ಮಂಡಿಹೌಸ್, ಪಟೇಲ್ ಚೌಕ್, ಲೋಕ ಕಲ್ಯಾಣ ಮಾರ್ಗ್, ಐಟಿಓ, ಉದ್ಯೋಗ ಭವನ ಸೇರಿ 16 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.