– ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಎದುರು ಜಟಾಪಟಿ
– ಡಿಮ್ಯಾಂಡ್ ಕಂಡು ಸಿಎಂಗೆ ಫುಲ್ ನಗು
ಬೆಂಗಳೂರು: ಉಪ ಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆದೊಯ್ಯಲು ಸಚಿವರು ಕಿತ್ತಾಡಿಕೊಂಡಿದ್ದಾರೆ.
ಉಪ ಚುನಾವಣೆ ಪ್ರಚಾರದ ವಿಚಾರವಾಗಿ ಬುಧವಾರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ವೇಳೆ ಸಿಎಂ ಯಡಿಯೂರಪ್ಪ ಅವರು ಕೆಲವು ಸಲಹೆಗಳನ್ನು ನೀಡಿದರು. ಬಳಿಕ ಚುನಾವಣಾ ಪ್ರಚಾರ ಉಸ್ತುವಾರಿ ಸಚಿವರು, ಸಿಎಂ ನಮಗೆ ಬೇಕು, ನಮಗೆ ಬೇಕು, ನಾವು ಬಿಡಲ್ಲ ಎಂದು ಪ್ರಚಾರಕ್ಕೆ ಕರೆದೊಯ್ಯಲು ಪಟ್ಟು ಹಿಡಿದ ವಿಚಾರ ಮೂಲಗಳಿಂದ ಲಭ್ಯವಾಗಿದೆ.
ಈ ಮಧ್ಯೆ ಸಿಎಂ ಪ್ರಚಾರದ ದಿನಾಂಕ ಬದಲಾವಣೆಗೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡು. ಜೊತೆಗೆ ಕಾಗವಾಡ, ಅಥಣಿ ಕ್ಷೇತ್ರಗಳಿಗೆ ಮುಂದಿನ ವಾರ ಬರಬೇಕು ಅಂತ ಪಟ್ಟು ಹಿಡಿದರು. ಸಚಿವರ ನಡುವಿನ ಡಿಮ್ಯಾಂಡ್ ಫೈಟ್ ಕಂಡು ಸಿಎಂ ಯಡಿಯೂರಪ್ಪ ಅವರಿಗೆ ಫುಲ್ ನಗು ಬಂದಿದೆ.
ಸಚಿವ ಜಟಾಪಟಿ ನೋಡಿ ಮಧ್ಯ ಪ್ರವೇಶಿಸಿದ ಸಿಎಂ ಯಡಿಯೂರಪ್ಪ ಅವರು, ಕಷ್ಟ ಇರುವ ಕ್ಷೇತ್ರಗಳಲ್ಲಿ ಎರಡು ಬಾರಿ ಪ್ರಚಾರ ಮಾಡುವ ಭರವಸೆ ನೀಡಿದರು. ಇದರಿಂದಾಗಿ ಸಚಿವರ ಮಧ್ಯದ ಫೈಟ್ಗೆ ಬ್ರೇಕ್ ಬಿತ್ತು ಎಂದು ತಿಳಿದು ಬಂದಿದೆ.