ಶಿವಮೊಗ್ಗ: ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ (Kimmane Ratnkar) ಹೇಳಿದ್ದಾರೆ.
ಶಿವಮೊಗ್ಗ (Shivamogga) ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಭರವಸೆ ಕೊಟ್ಟಿತ್ತು. ಗ್ಯಾರಂಟಿಗಳನ್ನು ಸರ್ಕಾರ ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿದೆ. ಗ್ಯಾರಂಟಿಗಳ ಬಗ್ಗೆ ಬಿಜೆಪಿ (BJP) ಯವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಇವರ ತಲೆಯೊಳಗೆ ಏನು ಸಗಣಿ ಇದೆಯಾ..? ನನಗೆ ಅರ್ಥ ಅಗುತ್ತಿಲ್ಲ. ಸಾಮಾನ್ಯ ಕಾರ್ಯಕರ್ತ ಹೇಳಿದರೆ ತಲೆ ಕೆಡಿಸಿಕೊಳ್ಳಲ್ಲ. ಸಂಸತ್ ಸದಸ್ಯರು, ಸಚಿವರು, ರಾಜ್ಯವನ್ನು ಆಳಿದವರು ಜವಾಬ್ದಾರಿಯಿಂದ ಮಾತನಾಡಬೇಕು. ಗಾಂಧಿ ಪ್ರತಿಮೆ ಎದುರು ಜುಲೈ 3 ರಂದು ಪ್ರತಿಭಟನೆ ಮಾಡ್ತೇವೆ ಅಂದಿದ್ದಾರೆ ಎಂದರು.
ಯಡಿಯೂರಪ್ಪ (BS Yediyurappa) ಬಗ್ಗೆ ಗೌರವ ಇದೆ. ಅವರಿಗೆ ಪ್ರಶ್ನೆ ಮಾಡುತ್ತೆನೆ. ನೀವು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಮನ್ನಾ ಮಾಡ್ತೇವೆ ಎಂದಿದ್ರು, ಮಾಡಿದ್ರಾ..?. 605 ಅಂಶಗಳ ಪ್ರಣಾಳಿಕೆ ನೀಡಿದ್ರು, ಅದರಲ್ಲಿ 50 ಅಂಶನಾದ್ರೂ ಅನುಷ್ಟಾನ ಮಾಡಿದ್ರಾ? 2 ಕೋಟಿ ಉದ್ಯೋಗ ಕೋಡ್ತೇವೆ ಎಂದು ಹೇಳಿದ್ರು. 9 ವರ್ಷಕ್ಕೆ 18 ಕೋಟಿ ಉದ್ಯೋಗವನ್ನು ಕೊಡ್ತೇವೆ ಎಂದವರು ಕೊಟ್ರಾ?. ಇದಕ್ಕೆಲ್ಲಾ ಯಡಿಯೂರಪ್ಪ, ಈಶ್ವರಪ್ಪ, ಪ್ರತಾಪ್ ಸಿಂಹ ಉತ್ತರ ಕೋಡ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕೊಪ್ಪಳದ ವಿದ್ಯಾರ್ಥಿನಿ ಪತ್ರಕ್ಕೆ ಸಿದ್ದರಾಮಯ್ಯ ಸಂತಸ – ಮರಳಿ ಪತ್ರ ಬರೆದ ಸಿಎಂ
ಬಿಜೆಪಿಯವರಿಗೆ ಕಾಂಗ್ರೆಸ್ ಗ್ಯಾರಂಟಿ (Congress Guarantee) ಬಗ್ಗೆ ಮಾತನಾಡುವ ನೈತಿಕತೆ, ಅರ್ಹತೆ ಇಲ್ಲ. ಇವೆಲ್ಲವನ್ನೂ ಒಂದೇ ಸರಿ ಮಾಡುವುದು ಅಷ್ಟು ಸುಲಭ ಅಲ್ಲ. ಬಸ್ ವ್ಯವಸ್ಥೆ ಕೊಟ್ಟಷ್ಟು ಉಳಿದ ಗ್ಯಾರಂಟಿ ಇಲ್ಲ. ಕೆಲವೊಂದು ವ್ಯವಸ್ಥೆ ಅಗಬೇಕು. ಒಂದೆರಡು ದಿನದಲ್ಲಿ ಮನೆಯ ಸಮಸ್ಯೆಯೇ ಬಗೆಹರಿಯಲ್ಲ. ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು. ಜುಲೈ 3 ರಂದು ನಾನು ಕೂಡ ಉಪವಾಸ ಹೋರಾಟ ಮಾಡುತ್ತೇನೆ. ಶಿವಮೊಗ್ಗದ ಗಾಂಧಿ ಪಾರ್ಕ್ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡ್ತೇನೆ. ಕೇಂದ್ರ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಅವರು 15 ಲಕ್ಷ ಕೊಟ್ರೆ ನಾವೆಲ್ಲರೂ ರಾಜ್ಯ ಸರ್ಕಾರಕ್ಕೆ ಜಮಾ ಮಾಡ್ತೇವೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರ ಹಗರಣ ತನಿಖೆ ಮಾಡಲಿ ಎಂಬ ಆರಗ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕೂಡ ಹಗರಣಗಳ ತನಿಖೆಗೆ ಒತ್ತಾಯ ಮಾಡಿದ್ದೇನೆ. ಪಿಎ ಹಗರಣವನ್ನು ತನಿಖೆ ಮಾಡಲು ಒತ್ತಾಯಿಸುತ್ತೇನೆ. ಆ ಹಗರಣದ ದುಡ್ಡಲ್ಲೇ ನಾನು ತೀರ್ಥಹಳ್ಳಿಯಲ್ಲಿ ಸೋತಿದ್ದೇನೆ. ಆರತಿ ಮಾಡಿದ್ರಲ್ಲಾ ಆ ದಿವ್ಯಾ ಹಾಗರಗಿ, ಸ್ಯಾಂಟ್ರೋ ರವಿ, ಆರ್ ಜೆ.ಪಾಟೀಲ್ ಹಣದಿಂದಲೇ ಸೋತಿದ್ದೇನೆ ಎಂದು ಹೇಳಿದರು.
ತೀರ್ಥಹಳ್ಳಿಯಲ್ಲಿ 70 ಕೋಟಿ ಖರ್ಚು ಮಾಡಿದ್ದಾರೆ. ಈ ಹಿಂದೆ ನಂದಿತಾ ಪ್ರಕರಣ ಹೇಳಿದ್ರಲ್ಲಾ ಇವರದ್ದೇ ಸರ್ಕಾರ ಇತ್ತಲ್ಲ ಏನು ಮಾಡಿದ್ರು. ಸಿಬಿಐ ತನಿಖೆ ಮಾಡಿದ್ರೇ ಇವರೇ ಒಳಗೆ ಹೋಗ್ತಾರೆ. ಅಕ್ಕಿ ಕೊಡಲ್ಲ ಎಂದು ಹೇಳ್ತಾ ಇದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇವೆಲ್ಲಾ ದೇಶದ ಏಕತೆಗೆ ಧಕ್ಕೆ ಉಂಟು ಮಾಡುತ್ತವೆ. ಪ್ರತ್ಯೇಕ ಕೇಳಿದ್ರೇ ದೇಶದ ಏಕತೆ ಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಲಿ ಎಂದು ತಿಳಿಸಿದರು.