ಬಿಜೆಪಿ ಪರಿವರ್ತನಾ ಯಾತ್ರೆ: ವೇದಿಕೆಯ ಮೇಲೆ ರಾಜ್ಯ ನಾಯಕರಿಗೆ ಶಾ ಕ್ಲಾಸ್

Public TV
1 Min Read
amith sha f

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಮೊದಲ ದಿನವೇ ವೇದಿಕೆಯ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವೇದಿಕೆಯ ಮೇಲೆ ಹಿರಿಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಾರ್ಯಕ್ರಮ ಆಯೋಜನೆಗೊಂಡಿದ್ದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಹಾಕಿದ್ದ ಕುರ್ಚಿಗಳ ಮಧ್ಯಭಾಗ ಖಾಲಿ ಇತ್ತು. ಇದನ್ನು ನೋಡಿ ಅಸಮಾಧಾನಗೊಂಡ ಅಮಿತ್ ಶಾ ಕೇಂದ್ರ ಸಚಿವರಾದ ಅನಂತ್ ಕುಮಾರ್ ಮತ್ತು ಡಿವಿ ಸದಾನಂದ ಗೌಡರನ್ನು ತರಾಟೆಗೆ ತೆಗೆದುಕೊಂಡರು.

ಶಾ ಗರಂ ಆಗಿದ್ದನ್ನು ನೋಡಿ ನಾಯಕರು, ಶಾಸಕರು ವೇದಿಕೆ ಮೇಲಿನಿಂದ ಇಳಿದು ಜನರನ್ನು ಖಾಲಿ ಕುರ್ಚಿಗಳಲ್ಲಿ ಕೂರಿಸಲು ಮುಂದಾದರು.

ಬಿಜೆಪಿ ಪರಿವರ್ತನಾ ಯಾತ್ರೆಗೆ ಜನ ಕರೆತರುವಲ್ಲಿ ವೈಫಲ್ಯ ಆಗಿದ್ದು ಯಾಕೆ ಎಂದು ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಪಿಯುಷ್ ಗೋಯಲ್, ಅನಂತ್ ಕುಮಾರ್‍ಗೆ ಶಾ ಕ್ಲಾಸ್ ಮಾಡಿದರು.

ಅಮಿತ್ ಶಾ ಅಸಮಾಧಾನಗೊಂಡಿದ್ದರಿಂದ ಸಮಾವೇಶದ ವೇದಿಕೆ ಮೌನವಾಗಿತ್ತು. ಬಿಜೆಪಿ ನಾಯಕರು ಪೆಚ್ಚು ಮೊರೆ ಹಾಕಿ ಕುಳಿತುಕೊಂಡಿದ್ದರು.

amith sha 1

amith sha 2

amith sha 3

amith sha 4

amith sha 5

BJP RALLY 1 2 1

vlcsnap 2017 11 02 16h34m44s947

vlcsnap 2017 11 02 16h34m28s035

vlcsnap 2017 11 02 16h34m14s959

vlcsnap 2017 11 02 16h34m03s759

vlcsnap 2017 11 02 16h33m54s160

vlcsnap 2017 11 02 16h33m43s086

vlcsnap 2017 11 02 16h33m35s931

vlcsnap 2017 11 02 16h30m15s290

vlcsnap 2017 11 02 16h29m08s842

vlcsnap 2017 11 02 16h27m55s138

vlcsnap 2017 11 02 16h27m16s950

vlcsnap 2017 11 02 16h27m08s090

vlcsnap 2017 11 02 16h26m33s363

vlcsnap 2017 11 02 16h23m12s478

 

vlcsnap 2017 11 02 16h20m52s888

vlcsnap 2017 11 02 16h20m09s680

Share This Article
Leave a Comment

Leave a Reply

Your email address will not be published. Required fields are marked *