Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸಿದ್ದರಾಮಯ್ಯ ಗೋಮುಖ ವ್ಯಾಘ್ರ – ವಿಪಕ್ಷ ನಾಯಕ ಅಶೋಕ್‌ ಲೇವಡಿ

Public TV
Last updated: October 13, 2024 1:36 pm
Public TV
Share
4 Min Read
R Ashok
SHARE

ಬೆಂಗಳೂರು: ಮುಸ್ಲಿಂ ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ. ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯ ಗೋಮುಖ ವ್ಯಾಘ್ರ, ಈ ಥರಹದ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರದಿಂದ ವಾಪಸ್‌ ಪಡೆದಿರುವ ಬಗ್ಗೆ ಸಿಎಂ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಈ ಸಂಬಂಧ ವಿಪಕ್ಷ ನಾಯಕ ಆರ್.‌ ಅಶೋಕ್‌ ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ವಿವಾದದ ಬಳಿಕ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ ಸಿಎ ನಿವೇಶನ ವಾಪಸ್ ನೀಡಿದ ಖರ್ಗೆ ಕುಟುಂಬ

ಮುಸ್ಲಿಂ ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ. ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಸರ್ಕಾರದ ಈ ನಡೆ ಪೊಲೀಸರ ಸ್ಥೈರ್ಯ ಕುಂದಿಸುವ ಕೆಲಸ. ಪೊಲೀಸರಿಗೇ ಈಗ ಅನಿಸಿಬಿಟ್ಟಿದೆ, ಈ ಸಮುದಾಯದವರ ಮೇಲೆ ದೂರು ದಾಖಲಿಸಬಾರದು ಅಂತ. ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರಚೋದನೆ ಕೊಡ್ತಿದೆ. ಇದರ ಬಗ್ಗೆ ಬಿಜೆಪಿಯಿಂದ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡ್ತೇವೆ. ಈಗಾಗಲೇ ರಾಜ್ಯದಲ್ಲಿ ಪಾಕ್, ಬಾಂಗ್ಲಾದಿಂದ ಅಕ್ರಮವಾಗಿ ಬಂದಿರುವವರನ್ನು ಬಂಧಿಸಿದ್ದಾರೆ. ಇವರ ಮೇಲಿನ ಕೇಸ್‌ಗಳನ್ನೂ ವಾಪಸ್ ಪಡೆದುಕೊಳ್ಳಿ. ಸಿದ್ದರಾಮಯ್ಯ ಗೋಮುಖ ವ್ಯಾಘ್ರ, ಈ ಥರಹದ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಲೇವಡಿ ಮಾಡಿದ್ದಾರೆ.

ಇನ್ನೂ ತೆರಿಗೆ ಪಾಲಿನಲ್ಲಿ ತಾರತಮ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದುವರೆಗೆ ಕೇಂದ್ರದಿಂದ ಕೊಟ್ಟ ಹಣವನ್ನು ಈ ಸರ್ಕಾರ ಲೂಟಿ ಹೊಡೆದಿದೆ. ಮುಡಾ, ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆಯಲಾಗಿದೆ. ಕೇಂದ್ರದಿಂದ ತಾರತಮ್ಯ ಆಗಿಲ್ಲ, ಈ ಹಿಂದೆಯೇ ನಾವು ಅಂಕಿಅಂಶ ಬಿಡುಗಡೆ ಮಾಡಿದ್ದೇವೆ. ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಬರ್ತಿತ್ತು? ಮೋದಿ ಕಾಲದಲ್ಲಿ ಎಷ್ಟು ಬಂದಿದೆ ನೋಡಲಿ. ಮೆಟ್ರೋ, ಹೈವೇ, ರೈಲು, ಬೆಂಗಳೂರು ಅಭಿವೃದ್ಧಿಗೆ ಇತ್ಯಾದಿಗಳಿಗೆ ಎಷ್ಟು ಬಂದಿದೆ ಹೇಳಿ? ಮೆಟ್ರೋಗೆ ಎಷ್ಟು ಬಂದಿದೆ ಅಂತ ಸಿದ್ದರಾಮಯ್ಯ ಹೇಳೋದೇ ಇಲ್ಲ. ಬಂದ ಹಣ ಎಲ್ಲ ಲೂಟಿ ಹೊಡೀತಾರೆ. ಜಲಜೀವನ್ ಮಿಷನ್‌ಗೆ ಎಷ್ಟು ಬಂದಿದೆ, ಲೆಕ್ಕ ಕೊಡಿ. ಎಲ್ಲ ಲೆಕ್ಕ ಕೊಡಿ, ಜನ ತೀರ್ಮಾನ ಮಾಡ್ತಾರೆ ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಉಗ್ರಗಾಮಿ ಪಕ್ಷ ಎಂಬ ತಂದೆ ಮಾತು ಸಮರ್ಥನೆ ಮಾಡಿಕೊಂಡ ಪುತ್ರ ಪ್ರಿಯಾಂಕ್ ಖರ್ಗೆ

ಮುಡಾ, ವಾಲ್ಮೀಕಿ ಹಗರಣಗಳನ್ನು ಡೈವರ್ಟ್ ಮಾಡಲು ಈಥರ ಆರೋಪ ಮಾಡ್ತಿದ್ದಾರೆ. ಜಿಎಸ್‌ಟಿ ಸಭೆಗೆ ಹೋದಾಗ ಏನ್ ಕಡಲೆ ಕಾಯಿ ತಿಂತೀರಾ? ರಾಜ್ಯದಿಂದ ಆಯ್ಕೆಯಾದ ಕಾಂಗ್ರೆಸ್ ಸಂಸದರು, ಖರ್ಗೆಯವರು ಇದುವರೆಗೆ ಸಂಸತ್, ರಾಜ್ಯಸಭೆಯಲ್ಲಿ ಇದರ ಬಗ್ಗೆ ಯಾಕೆ ಮಾತಾಡಿಲ್ಲ? ವೋಟ್ ಪಾಲಿಟಿಕಗ್ಸ್‌ಗಾಗಿ ಇಲ್ಲಿ ಮಾತಾಡ್ತೀರ, ಅಲ್ಲೂ ಮಾತಾಡಿ, ಯಾಕೆ ಅಲ್ಲಿ ಬಾಯಿ ಬಿಡಲ್ಲ? ನಿಮ್ಮ ಲೂಟಿತನ ಜನಕ್ಕೆ ಗೊತ್ತಾಗಿ ಹೋಗಿದೆ ಎಂದು ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಎಂಪಿಗಳಿಗೆ ಮೋದಿ, ಅಮಿತ್ ಶಾ ಕಂಡ್ರೆ ಭಯ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕೇಂದ್ರ ತೆರಿಗೆ ಪಾಲಿನಲ್ಲಿ ತಾರತಮ್ಯ ಮಾಡ್ತಿದೆ ಅಂತಾರಲ್ಲ, ಇಲ್ಲಿ ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳಿಗೂ ಸಮನಾದ ಅನುದಾನ ಕೊಡ್ತಿದ್ದಾರಾ? ನೀವು ಇಲ್ಲಿ ತಾರತಮ್ಯ ಮಾಡಿ, ಕೇಂದ್ರದಲ್ಲಿ ತಾರತಮ್ಯ ಆಗಿದೆ ಅನ್ನೋದು ಎಷ್ಟು ಸರಿ? ಕರ್ನಾಕದಲ್ಲಿ ನೀವು ಅನುದಾನ ತಾರತಮ್ಯ ಮಾಡಿಲ್ಲ ಅಂದ್ರೆ ನಾವು ಕೇಳ್ತೀವಿ. ಮೊದಲು ನೀವು ಇಲ್ಲಿ ತಾರತಮ್ಯ ಸರಿಪಡಿಸಿ. ಉತ್ತರದ ರಾಜ್ಯಗಳಿಗೆ ಹೆಚ್ಚು ಅನುದಾನವನ್ನು ಜನಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಹಂಚಿಕೆ ಮಾಡುತ್ತಿದೆ. ಈ ನೀತಿಯನ್ನು ಮಾಡಿದವರು ಮನಮೋಹನಗ್ ಸಿಂಗ್ ಅವರೇ, ಸಿಂಗ್ ಅವರು ಮಾಡಿರುವ ನೀತಿಯನ್ವಯವೇ ರಾಜ್ಯಗಳಿಗೆ ತೆರಿಗೆ ಪಾಲು ಬರ್ತಿದೆ. ಇಲ್ಲೂ ಎಲ್ಲಾ ಕ್ಷೇತ್ರಗಳು, ಜಿಲ್ಲೆಗಳಿಗೆ ತಾರತಮ್ಯ ಮಾಡ್ತಿಲ್ಲ ಅಂತ ತೋರಿಸಿ. ನಿಮ್ಮನೆ ದೋಸೆಯೇ ತೂತು, ಕೇಂದ್ರದ ದೋಸೆ ಬಗ್ಗೆ ಮಾತಾಡುವ ಹಕ್ಕಿಲ್ಲ ನಿಮಗೆ ಎಂದು ಲೇವಡಿ ಮಾಡಿದ್ದಾರೆ.

ಇದೇ ವೇಳೆ ಸ್ವಪಕ್ಷದ ವಿರುದ್ದವೇ ಕಾಂಗ್ರೆಸ್ ಶಾಸಕ ರಾಜುಕಾಗೆ ಅಸಮಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್‌, ಕಾಂಗ್ರೆಸ್ ಶಾಸಕರಿಗೆ ಅರ್ಜಿ ಕೊಟ್ಟು ಕೊಟ್ಟು ಸಾಕಾಗಿದೆ. ರಾಜು ಕಾಗೆ ಹೇಳಿದಂತೆ ಕಾಂಗ್ರೆಸ್ ಶಾಸಕರಿಗೆ ಆತ್ಮಹತ್ಯೆಯೊಂದೇ ದಾರಿ. ಕಾಂಗ್ರೆಸ್ ಶಾಸಕರ ಪಾಡೇ ಹೀಗಾದರೆ ವಿಪಕ್ಷ ಶಾಸಕರ ಗತಿ ಏನು..? ನಮಗಂತೂ ಒಂದು ನಯಾಪೈಸೆ ಅನುದಾನ ಕೊಟ್ಟಿಲ್ಲ. ನಾವು ಪ್ರಶ್ನೆ ಮಾಡಿದ್ರೆ ಗ್ಯಾರಂಟಿ ಕೊಟ್ಟಿಲ್ವೇನ್ರಿ ಅಂತಾರೆ. ಫ್ರೀ ಗ್ಯಾರಂಟಿ ತಗೊಂಡು ರಸ್ತೆ, ಸ್ಕೂಲ್ ಮಾಡೋಕಾಗುತ್ತಾ..? ಕಾಂಗ್ರೆಸ್‌ನಲ್ಲಿ ಮಂತ್ರಿಗಳು ಗೌರವ ಕಳೆದುಕೊಂಡಿದ್ದಾರೆ. ಡಿಕೆಶಿ ಅವ್ರು ಹೇಳ್ತಾರೆ, ಗ್ಯಾರಂಟಿ ಹಣದಿಂದ ಫ್ರಿಡ್ಜ್ ತಗೊಂಡ್ರು ಅಂತ ಏನ್ ಚಂದ್ರ ಲೋಕದಿಂದ ಇಂಪೋರ್ಟ್ ಮಾಡಿರೋ ವಸ್ತುನಾ ಅದು? ಇವ್ರು ಗ್ಯಾರಂಟಿ ಕೊಡೋದಕ್ಕೆ ಮೊದಲಿನಿಂದಲೂ ಜನರ ಬಳಿ ಫ್ರಿಡ್ಜ್, ಟಿವಿ ಇತ್ತು ಎಂದು ಕುಟುಕಿದ್ದಾರೆ.

TAGGED:bjpcongressHubballi Riots CaseR. Ashokasiddaramaiahಆರ್. ಅಶೋಕ್‍ಕಾಂಗ್ರೆಸ್ಬಿಜೆಪಿಸಿದ್ದರಾಮಯ್ಯಹುಬ್ಬಳ್ಳಿ ಗಲಭೆ ಕೇಸ್
Share This Article
Facebook Whatsapp Whatsapp Telegram

You Might Also Like

Ahmedabad Air India Plane Crash Money
Latest

ಅಹಮದಾಬಾದ್ ವಿಮಾನ ದುರಂತ – ಅವಶೇಷಗಳಡಿ ಸೂಟ್‌ಕೇಸ್‌ನಲ್ಲಿದ್ದ ಹಣ ಪತ್ತೆ

Public TV
By Public TV
4 minutes ago
malnad tawa fry
Food

ಮಲ್ನಾಡ್‌ ಸ್ಪೆಷಲ್‌ ತವಾ ಫ್ರೈ ಮಾಡಿ.. ಸವಿಯಿರಿ

Public TV
By Public TV
8 hours ago
05
Districts

ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

Public TV
By Public TV
8 hours ago
Iran Israel
Latest

ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

Public TV
By Public TV
8 hours ago
allu arjun received gaddar film award as best actor for pushpa 2 movie 2
Cinema

ಸಿಎಂ ರೇವಂತ್ ರೆಡ್ಡಿ ಕೈಯಿಂದ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್‌

Public TV
By Public TV
8 hours ago
Honeymoon Murder
Crime

ಪತಿ ಕೊಲೆ ಬಳಿಕ ಇಂದೋರ್‌ನ ಫ್ಲ್ಯಾಟ್‌ನಲ್ಲಿ ವಾಸವಿದ್ದ ಹನಿಮೂನ್ ಹಂತಕಿ

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?