‘ಬಿಗ್ ಬಾಸ್ ಕನ್ನಡ 10’ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ದೊಡ್ಮನೆ ಆಟ ಗೆದ್ದ ಮೇಲೆ ಕಾರ್ತಿಕ್ ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅಭಿಮಾನಿಗಳ ಬೇಡಿಕೆಗೆ ಕಾರ್ತಿಕ್ ಕೋರಿಕೆಯೊಂದನ್ನು ಮಾಡಿದ್ದಾರೆ. ಇದನ್ನೂ ಓದಿ:ಸುದೀಪ್ ಚಿತ್ರರಂಗಕ್ಕೆ ಬಂದು 28 ವರ್ಷ: ಹಳೆ ದಿನಗಳ ನೆನೆದ ಕಿಚ್ಚ
- Advertisement 2
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಿನಿಂದ ಕಂಟಿನ್ಯೂ ಆಗಿ ಕರೆ ಬರುತ್ತಲೇ ಇದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಇಂಟರ್ವ್ಯೂ ಅಟೆಂಡ್ ಮಾಡುತ್ತಲೇ ಇದ್ದೇನೆ. ಇದರ ನಡುವೆ ಪ್ರೀತಿಯ ಅಭಿಮಾನಿಗಳಲ್ಲಿ ಒಂದು ಕೋರಿಕೆ ಯಾರೆಲ್ಲಾ ಶುಭ ಕೋರಲು ನನಗೆ ಕರೆ ಮಾಡ್ತಿದ್ದೀರಾ ಹಾಗೂ ಮೆಸೇಜ್ ಮಾಡುತ್ತಿದ್ದೀರಾ ಎಲ್ಲರ ಮೆಸೇಜ್ ನೋಡ್ತಿದ್ದೇನೆ. ಆದರೇ ತುಂಬಾ ಮೆಸೇಜ್ ಮತ್ತು ಕರೆ ಬರುತ್ತಿರುವ ಕಾರಣಕ್ಕೆ ಎಲ್ಲರಿಗೂ ಉತ್ತರಿಸಲು ಆಗುತ್ತಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.
- Advertisement 3
View this post on Instagram
- Advertisement 4
ಆದರೆ ನನ್ನ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಲು ಇಷ್ಟಪಡುತ್ತೇನೆ. ನಾನು ಒಳಗಡೆ ಹೊಡೆದಾಡುತ್ತಿದ್ದರೆ, ನೀವು ಹೊರಗೆ ಕಷ್ಟಪಡ್ತೀದ್ದೀರಿ. ಎರಡ್ಮೂರು ದಿನಗಳ ನಂತರ ಎಲ್ಲರಿಗೂ ಪರ್ಸನಲ್ ಆಗಿ ಸಿಗುತ್ತೇನೆ. ಫ್ಯಾನ್ಸ್ ಮೀಟ್ ಅಂತಲೇ ಮಾಡುತ್ತೀನಿ. ನನ್ನ ಧನ್ಯವಾದಗಳನ್ನು ನಿಮಗೆ ಅರ್ಪಿಸುತ್ತೇನೆ. ಎಲ್ಲದಕ್ಕೂ ಸ್ವಲ್ಪ ಸಮಯ ನೀಡಿ ಎಂದು ಮನವಿ ಮಾಡಿದ್ದಾರೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಎಂದೆಂದೂ ಚಿರಋಣಿ. ಶುಭ ಕೋರಿದ ಎಲ್ಲಾ ಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಕಾರ್ತಿಕ್ ಮಹೇಶ್ ಮನವಿ ಮಾಡಿದ್ದಾರೆ.
ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರೆ, ಮೊದಲ ರನ್ನರ್ ಅಪ್ ಡ್ರೋನ್ ಪ್ರತಾಪ್ (Drone Prathap) ಹೊರಹೊಮ್ಮಿದ್ದರು. ಅಂದಹಾಗೆ ಕಾರ್ತಿಕ್ಗೆ 3 ಕೋಟಿಯಷ್ಟು ವೋಟ್ ಬಂದಿತ್ತು.