ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ

Public TV
1 Min Read
kavyashree 1

ಬಿಗ್ ಬಾಸ್ (Bigg Boss) ಮನೆಯ ಆಟ ಶುರುವಾಗಿ ಒಂದು ವಾರ ಕಳೆದಿದೆ. ಮನರಂಜನೆಗೆ ಯಾವುದೇ ಕೊರತೆ ಇಲ್ಲದ ಜಾಗ ಅಂದ್ರೆ ಅದು ಬಿಗ್ ಬಾಸ್ ಮನೆ ಎಂದೇ ಹೇಳಬಹುದು. ಹೀಗಿರುವಾಗ ರಂಜಿಸಲು ಹೋಗಿ ಕಾವ್ಯಶ್ರೀ(Kavyashree) ಜತೆ ಗೊಬ್ಬರಗಾಲ(Gobbaragala) ಎಡವಟ್ಟು ಮಾಡಿಕೊಂಡಿದ್ದಾರೆ.

ವಿನೋದ್ ದೊಡ್ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಕಾವ್ಯಶ್ರೀ(Kavyashree) ಅವರಿಗೆ ರೇಗಿಸುತ್ತಿದ್ರು. ಅದು ತಮಾಷೆಗಾಗಿ. ಅದಕ್ಕೆ ಕಾವ್ಯ ಸಹ ಟಾಂಗ್ ಕೊಡ್ತಾ ಇದ್ರು. ಅಂದಿನಿಂದಲೂ ತಮಾಷೆಗಾಗಿ ಎಲ್ಲ ನಡೆಯುತ್ತಿತ್ತು. ಗೊಬ್ಬರಗಾಲಾ ಮತ್ತು ಕಾವ್ಯಶ್ರೀ ಪ್ರಾಸ ಪದಗಳ ಮೂಲಕ ತಮಾಷೆ ಮಾಡಿಕೊಳ್ತಿದ್ರು. ಅದನ್ನು ನೋಡಿ ಮನೆಯವರೆಲ್ಲಾ ಎಂಜಾಯ್ ಮಾಡ್ತಾ ಇದ್ದರು. ಇದನ್ನೂ ಓದಿ:‘ಕಾಂತಾರ’ ಸಿನಿಮಾದ ಮೊದಲ ದಿನದ ಗಳಿಕೆ: ಸಿನಿ ಪಂಡಿತರ ಲೆಕ್ಕಾಚಾರ

 

View this post on Instagram

 

A post shared by BUD Pictures (@bud.picturess)

ಮಂಗಳಗೌರಿ ಕಾವ್ಯ ಕೂಡ ವಿಕ್ರಾಂತ್ ರೋಣದಲ್ಲಿ(Vikantrona Film) ಇದ್ದಾರೆ ಗುಮ್ಮ. ವಿನೋದ್ ಗೊಬ್ಬರಗಾಲ ನನ್ನ ತಮ್ಮ ಎನ್ನುತ್ತಾಳೆ. ಮನೆಯವರೆಲ್ಲಾ ನಗುತ್ತಾರೆ. ಅವನು ಅದನ್ನು ತಮಾಷೆ ಆಗಿ ತೆಗೆದುಕೊಳ್ತಾನೆ.ನಂತರ ವಿನೋದ್ ಗೊಬ್ಬರಗಾಲಾ, ತಮ್ಮ ಎಂದಿದ್ದಕ್ಕೆ ಬೇಸರಗೊಂಡು ಇದು ಯಾರು ಇದು ಆಂಟಿ ಎಂದು ಹೇಳುತ್ತಾನೆ. ಅದಕ್ಕೆ ಕಾವ್ಯಶ್ರೀ ಕೋಪಗೊಂಡಿದ್ದಾರೆ. ಗೊಬ್ಬರಗಾಲ ಮಾತಿನಿಂದ ಕೋಪಮಾಡಿಕೊಂಡ ಕಾವ್ಯಶ್ರೀ ನಿನ್ಯಾಕೆ ನನ್ನ ಸುದ್ದಿ ಬರುತ್ತಿ. ನಿನ್ನ ಲಿಮಿಟ್ ಕ್ರಾಸ್ ಮಾಡಬೇಡಿ ಎನ್ನುತ್ತಾಳೆ.

kavyashree

ಬಳಿಕ ಇವರಿಬ್ಬರ ಮಾತಿನ ಚಕಮಕಿ ಮಧ್ಯೆ ಅರುಣ್ ಸಾಗರ್ ಎಂಟ್ರಿ ಕೊಟ್ಟು ಇಬ್ಬರನ್ನು ಸಮಾಧಾನಿಸಿದ್ದಾರೆ. ಇನ್ನೂ ಮೊದಲ ವಾರದ ಕ್ಯಾಪ್ಟನ್ ಆಗಿ ವಿನೋದ್ ಆಯ್ಕೆ ಆಗಿದ್ದಾರೆ. ದಿವ್ಯಾ ಉರುಡುಗ ಅವರಿಗೆ ಟಫ್ ಕಾಂಪಿಟೇಷನ್ ಕೊಟ್ಟು ಗೊಬ್ಬರಗಾಲ ಗೆದ್ದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *