ಬೆಂಗಳೂರು: ಸಿಲಿಕಾನ್ ಸಿಟಿ ಜನರ ಸಮಸ್ಯೆಗಳನ್ನು ಆಲಿಸಲು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಫೋನ್ ಇನ್ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.
ಬೆಂಗಳೂರು ಜಲಮಂಡಳಿಯು ಶನಿವಾರ ಬೆಳಗ್ಗೆ 9ರಿಂದ 10.30 ಗಂಟೆವರೆಗೆ ಮಂಡಳಿಯ ಅಧ್ಯಕ್ಷರೊಂದಿಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. ಸಾರ್ವಜನಿಕರು ತಮ್ಮ ತಮ್ಮ ಪ್ರದೇಶಗಳಲ್ಲಿನ ಕೊಳವೆ ಬಾವಿ ಸಮಸ್ಯೆ, ನೀರಿನ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ಕಾಮಗಾರಿಗೆ ಅಂತ ತೆಗೆದ ಗುಂಡಿ ಹಲವು ದಿನಗಳಾದರೂ ಮುಚ್ಚದೇ ಇದ್ದರೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರನ್ನು ನೀಡಬಹುದಾಗಿದೆ.
ನೀರಿನ ಸಂಪರ್ಕ ಪಡೆದ ಗ್ರಾಹಕರು ತಮ್ಮ ಆರ್.ಆರ್ ಸಂಖ್ಯೆಯನ್ನು ನೀಡಿ ದೂರನ್ನ ನೀಡಬಹುದಾಗಿದೆ. ಸಾರ್ವಜನಿಕರು 080-22945119 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕರಣೆಯಲ್ಲಿ ತಿಳಿಸಿದೆ.